![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 6, 2022, 5:21 PM IST
ಸಾಗರ: ತಾಲೂಕಿನ ತಾಳಗುಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳ್ಳಣ್ಣೆ ಗ್ರಾಮದ ಜವಸತಿ ಪ್ರದೇಶದಲ್ಲಿ ಹುಲಿಯ ಸಂಚಾರ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದ ಗಿಳಿಗಾರಿನಲ್ಲಿ ಊರ ಮಧ್ಯಭಾಗದಲ್ಲಿಯೇ ಶನಿವಾರ ರಾತ್ರಿ ಆಕಳನ್ನು ಹುಲಿ ಕೊಂದು, ಎದೆಗುಂಡಿಗೆ, ಕೆಚ್ಚಲನ್ನು ತಿಂದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹುಲಿ ಸಂಚಾರ ಸಂಚರಿಸುತ್ತಿದೆ ಎನ್ನುವ ಮಾತು ವ್ಯಾಪಕ ಚರ್ಚೆಯಲ್ಲಿದೆ. ಇತ್ತೀಚೆಗೆ ಕೊಳಚಗಾರಿನ ಸೊಪ್ಪಿನಬೆಟ್ಟದಲ್ಲಿ ಮೇಯುತ್ತಿದ್ದ ದನವನ್ನು ಹಾಡುಹಗಲೇ ಹುಲಿ ಕಚ್ಚಿ ತಿಂದಿದೆ. ಬೆಳ್ಳಣ್ಣೆ ಭಾಗದಲ್ಲಿ ಕೆಲವು ನಾಯಿಗಳು ಕಣ್ಮರೆಯಾಗಿದೆ. ಗಿಳಿಗಾರಿನಲ್ಲಿ ಸುಬ್ಬಗೌಡರ ಮನೆಯ ಸುಮಾರು 10 ಸಾವಿರ ರೂ. ಬೆಲೆ ಬಾಳುವ ಆಕಳನ್ನು ಊರ ಮಧ್ಯದ ರಸ್ತೆಯಲ್ಲಿ ಕಚ್ಚಿ ತಿಂದಿರುವುದು ಈಗ ತಾಳಗುಪ್ಪ ವ್ಯಾಪ್ತಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಲು ಕಾರಣವಾಗಿದೆ.
ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಅರಣ್ಯ ಇಲಾಖೆಯ ವೀಕ್ಷಕ ಹಾಗೂ ಅರಣ್ಯ ರಕ್ಷಕ ಲೋಕೇಶ್, ಪಶು ವೈದ್ಯಾಧಿಕಾರಿಗಳನ್ನು ಕರೆದೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆಕಳು ಸಾವಿಗೆ ಕಾರಣ ಏನು ಎನ್ನುವುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಗೊತ್ತಾಗಲಿದೆ.
ಊರಿನಲ್ಲಿ ಹುಲಿಯ ಸಂಚಾರದ ಮಾಹಿತಿ ತಿಳಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಆದರೆ ವನಪಾಲಕ ಸಂತೋಷಕುಮಾರ ಅದನ್ನು ಅಲ್ಲಗಳೆದು ಬೆಳ್ಳಣ್ಣೆ ಗುಡ್ಡದಲ್ಲಿ ಕ್ಯಾಮರಾ ಇರಿಸಿ, ಅಲ್ಲಿ ಸಂಚರಿಸುತ್ತಿರುವುದು ಚಿರತೆಯೋ, ಹುಲಿಯೋ ಎಂಬುವುದನ್ನು ಪರಿಶೀಲಿಸಲಾಗುತ್ತಿದೆ. ಗಿಳಿಗಾರಿನಲ್ಲಿ ದನ ಹಿಡಿದಿದ್ದು ಹುಲಿಯೋ ಚಿರತೆಯೋ ಎಂಬುದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿಯಬೇಕಿದೆ. ಮಹಜರ್ ಕ್ರಮ ಜರುಗಿಸಿ ದನದ ಮಾಲಿಕರಿಗೆ ನಿಗದಿತ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!
Shivamogga: ಹೆರಿಗೆ ಬಳಿಕ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಯಲ್ಲಿ ಬಾಣಂತಿ ಸಾವು
Kuppalli: ಅದ್ದೂರಿ ಮಂತ್ರ ಮಾಂಗಲ್ಯ; ಕುವೆಂಪು ಪ್ರತಿಷ್ಠಾನ ಸಮಕಾರ್ಯದರ್ಶಿ ರಾಜೀನಾಮೆ ?
Shimoga: ಅಧಿಕಾರಿ ವಿರುದ್ದ ದರ್ಪ ತೋರಿದ ಶಾಸಕರ ಪುತ್ರನ ವಿರುದ್ದ ನಿಖಿಲ್ ಗರಂ
ಈಡಿಗರು ಸತ್ತಿಲ್ಲ, ಮಹಿಳಾ ಅಧಿಕಾರಿ ಹೆದರಬೇಕಿಲ್ಲ: ಪ್ರಣವಾನಂದ ಶ್ರೀ
You seem to have an Ad Blocker on.
To continue reading, please turn it off or whitelist Udayavani.