ಕರಾವಳಿ ತೋಟದಲ್ಲೂ ಫೈಬರ್‌ ದೋಟಿ! ಅಡಿಕೆ ಕೊಯ್ಲು, ಔಷಧ ಸಿಂಪಡಣೆ ಇನ್ನು ಸುಲಭ


Team Udayavani, Feb 10, 2022, 6:15 AM IST

ಕರಾವಳಿ ತೋಟದಲ್ಲೂ ಫೈಬರ್‌ ದೋಟಿ! ಅಡಿಕೆ ಕೊಯ್ಲು, ಔಷಧ ಸಿಂಪಡಣೆ ಇನ್ನು ಸುಲಭ

ಪುತ್ತೂರು: ಅಡಿಕೆ ಕೊಯ್ಲು ಮತ್ತು ಮರಕ್ಕೆ ಔಷಧ ಸಿಂಪಡಣೆಗೆ ಸಾಗರ-ಸೊರಬ ಪ್ರಾಂತ್ಯದಲ್ಲಿ ಬಳಕೆ ಯಲ್ಲಿರುವ ಕಾರ್ಬನ್‌ ಫೈಬರ್‌ ದೋಟಿ ಕರಾವಳಿಗೂ ಕಾಲಿಟ್ಟಿದೆ.

ಕಾರ್ಮಿಕರ ಅಭಾವ, ಮರ ಏರುವಾಗಿನ ಅಪಾಯದ ಭೀತಿಯ ಹಿನ್ನೆಲೆಯಲ್ಲಿ ಅಗತ್ಯಕ್ಕನುಸಾರವಾಗಿ ಏರಿಳಿತ
ಮಾಡಿಕೊಂಡು ನೆಲ ದಿಂದಲೇ ಬಳಸಬಹುದಾದ ಈ ದೋಟಿ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಕೊಯ್ಲು ಸಂದರ್ಭ ಕತ್ತಿಯನ್ನು ಕಟ್ಟಿದರೆ, ಸಿಂಪಡಣೆಗೆ ಸಾಮಾನ್ಯ ಪೈಪನ್ನೇ ಅಳವಡಿಸಿಕೊಳ್ಳಬಹುದು. 85 ಅಡಿ ವರೆಗಿನ ದೋಟಿಗಳು ಲಭ್ಯವಿವೆ. ಬೆಲೆ ಅಡಿಗೆ 1,000 ರೂ. ಆಗಿದ್ದು, 50 ಸಾವಿರ ರೂ. ಬಂಡವಾಳ ಹೂಡಿದರೆ ದೀರ್ಘ‌ ಬಾಳಿಕೆ ಬರುತ್ತದೆ. ಬಳಿಕ ಸಣ್ಣ- ಪುಟ್ಟ ನಿರ್ವಹಣೆ ವೆಚ್ಚ ಮಾತ್ರ. 40 ವರ್ಷ ದಾಟಿದ ಮರವಾದರೆ 80 ಅಡಿ ಎತ್ತರ ಇರಬಹುದು.

ಈಗ ಗಿಡ್ಡ ತಳಿಗಳೇ ಹೆಚ್ಚಾಗಿರುವ ಕಾರಣ 50 ಅಡಿಯ ದೋಟಿ ಸಾಕಾಗುತ್ತದೆ. ಕನಿಷ್ಠ 6 ಅಡಿಗೆ ಮಡಚಿ ವಾಹನದಲ್ಲಿ ಕೊಂಡೊಯ್ಯ ಬಹುದು. ದೋಟಿಗಿಂತಲೂ ಎತ್ತರದ ಮರವಾಗಿದ್ದರೆ ಅಗತ್ಯಕ್ಕೆ ತಕ್ಕಷ್ಟು ಏಣಿಯನ್ನು ಬಳಸಿ ಕೊಂಡರಾಯಿತು.

ತರಬೇತಿ
ದೋಟಿಯನ್ನು ನೆಲದಿಂದಲೇ ಬಳಸ ಬಹುದಾದರೂ ಕೌಶಲ ಮತ್ತು ಸಮತೋಲನ ಕಾಪಾಡಿಕೊಳ್ಳುವ ಸಾಮರ್ಥ್ಯ ಅಗತ್ಯ. ಗೊನೆ ಕೊಯ್ಯು ವಾಗ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಕ್ಯಾಂಪ್ಕೋ, ಅಡಿಕೆ ಪತ್ರಿಕೆ, ಸಿಪಿಸಿಆರ್‌ಐ ಮತ್ತು ಅಖಿಲ ಭಾರತೀಯ ಅಡಿಕೆ ಬೆಳೆಗಾರರ ಸಂಘದ ಆಶ್ರಯದಲ್ಲಿ ವಿವಿಧೆಡೆ ಉಚಿತ ತರಬೇತಿ ನಡೆದಿದೆ. ಪ್ರಾಥಮಿಕ ಸಹಕಾರಿ ಸಂಘ, ಸಂಘ-ಸಂಸ್ಥೆಗಳು ಮತ್ತು ರೈತ ಉತ್ಪಾದಕ ಸಂಘಗಳೂ ತರಬೇತಿ ಹಮ್ಮಿಕೊಳ್ಳುತ್ತಿವೆ.

ಮುಖ್ಯಮಂತ್ರಿಗೆ
ಕ್ಯಾಂಪ್ಕೋ ಮನವಿ
ಕಾರ್ಬನ್‌ ಫೈಬರ್‌ ದೋಟಿಯ ಮೇಲಿನ ಕಸ್ಟಮ್ಸ್‌ ಸುಂಕ, ಜಿಎಸ್‌ಟಿ ಇಳಿಸುವ ಮೂಲಕ ದೋಟಿಯ ಬೆಲೆ ಕಡಿಮೆ ಮಾಡುವಲ್ಲಿ ಸಹಕಾರ ನೀಡುವಂತೆ ಕ್ಯಾಂಪ್ಕೋ ಸಂಸ್ಥೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ಬಹು ಹಗುರ ಈ ದೋಟಿ!
50 ಅಡಿ ಉದ್ದ ಫೈಬರ್‌ ದೋಟಿಯು ಕೇವಲ ನಾಲ್ಕೂವರೆ ಕೆಜಿ ತೂಕದ್ದಾಗಿದೆ. ಅನಂತರ 80 ಅಡಿ ಇದ್ದರೂ ಗರಿಷ್ಠ ತೂಕ ಐದೂವರೆ ಕೆಜಿ ಇರುತ್ತದೆ. ಆದ್ದರಿಂದ ಇದನ್ನು ಬಳಸುವಾಗ ಸಮತೋಲನ ಕಾಯ್ದುಕೊಳ್ಳುವುದು ಸುಲಭಸಾಧ್ಯ.

ಕಾರ್ಬನ್‌ ಫೈಬರ್‌ ದೋಟಿ ಬಳಕೆಯ ತರಬೇತಿಗೆ ಹೆಚ್ಚಿನ ಬೇಡಿಕೆ ಇದೆ. 5 ಕಡೆಗಳಲ್ಲಿ 3 ದಿನಗಳ ಕಾಲ ನಡೆದ ತರಬೇತಿಯಲ್ಲಿ 100ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಹೊಸ ಅಡಿಕೆ ತಳಿಯ ಮರ ಹೆಚ್ಚು ಎತ್ತರ ಇಲ್ಲದ ಕಾರಣ ಈ ದೋಟಿ ಬಳಕೆಗೆ ಅನುಕೂಲವಾಗಿದೆ.
– ಡಾ| ಭವಿಷ್ಯ, ವಿಜಾನಿ, ಸಿಪಿಸಿಆರ್‌ಐ ವಿಟ್ಲ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.