ಅವರ್‌ ಬಿಟ್‌ ಇವರು, ಇವರ್‌ ಬಿಟ್‌ ಅವರು!


Team Udayavani, Feb 11, 2022, 2:58 PM IST

19power

ಸಿಂಧನೂರು: ಕಲಬುರಗಿ ವಿದ್ಯುತ್ಛಕ್ತಿ ಸರಬರಾಜು ಕಂಪನಿಯ ಇಲ್ಲಿನ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಎಇಇ ಹುದ್ದೆಗೆ ಸಂಬಂಧಿಸಿ ಭಾರಿ ಕುತೂಹಲ, ಕೋಲಾಹಲ ಸೃಷ್ಟಿಯಾದ ಪ್ರಸಂಗ ಬೆಳಕಿಗೆ ಬಂದಿದೆ.

ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿ ಹಾಲಿ ಮಲ್ಲಿಕಾರ್ಜುನ ಎನ್ನುವವರು ಎಇಇ ಹುದ್ದೆಯಲ್ಲಿ ಕಾರ್ಯಭಾರದಲ್ಲಿದ್ದು, ಇದೇ ಹುದ್ದೆಗೆ ದಾವಲಸಾಬ್‌ ಅವರು ಕೂಡ ಕೋರ್ಟ್‌ ಆದೇಶದ ಪ್ರಕಾರ ಎಇಇ ಎಂದು ಆಗಮಿಸಿದ್ದರಿಂದ ಸಿಬ್ಬಂದಿಯಲ್ಲಿ ಗೊಂದಲ ಮೂಡಿತು.

ಕಳೆದ ಡಿಸೆಂಬರ್‌ನಿಂದ ಇಲಾಖೆ ಆಡಳಿತಾತ್ಮಕ ನಿರ್ಧಾರಗಳು ಇಂತಹ ಗೊಜಲು ಸೃಷ್ಟಿಸುತ್ತಿದ್ದು, ಕೋರ್ಟ್‌ ಮೆಟ್ಟಿಲೇರುವ ಮೂಲಕ ತರುತ್ತಿರುವ ಆದೇಶಗಳು ಕುರ್ಚಿ ಅದಲು-ಬದಲು ಮಾಡಲಾರಂಭಿಸಿವೆ.

ಏನಿದು ಎಇಇ ಕುರ್ಚಿ ಗುದ್ದಾಟ?

ಇಲ್ಲಿನ ಜೆಸ್ಕಾಂ ಎಇಇ ಹುದ್ದೆಯಲ್ಲಿದ್ದ ದಾವಲಸಾಬ್‌ ಅವರನ್ನು ಸೇಡಂ, ಲಿಂಗಸುಗೂರಿನಲ್ಲಿದ್ದ ಮಲ್ಲಿಕಾರ್ಜುನ ಅವರನ್ನು ಸಿಂಧನೂರಿಗೆ ವರ್ಗಾಯಿಸಿ ಕೆಪಿಟಿಸಿಎಲ್‌ ಮಾನವ ಸಂಪನ್ಮೂಲ ಕಚೇರಿ ಡಿಸೆಂಬರ್‌ 23,2021ರಂದು ಆದೇಶ ಹೊರಡಿಸಿತ್ತು. ಆ ಬಳಿಕ ಮಲ್ಲಿಕಾರ್ಜುನ ಅವರು ಚಾರ್ಜ್‌ ಪಡೆದಿದ್ದರು. ಈ ಆದೇಶವನ್ನು ಕೆಪಿಟಿಸಿಎಲ್‌ ಮಾನವ ಸಂಪನ್ಮೂಲ ಆಡಳಿತ ವಿಭಾಗದ ಮೂಲಕ ಯಥಾಸ್ಥಿತಿ ಮಾರ್ಪಡಿಸಿದ್ದರಿಂದ ಮತ್ತೆ ದಾವಲ್‌ಸಾಬ್‌ ವರ್ಗವಾಗಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಲ್ಲಿಕಾರ್ಜುನಗೌಡ ಅವರು, ಕೋರ್ಟ್‌ ಮೇಟ್ಟಿಲೇರಿ ತಡೆ ತಂದಿದ್ದರು. ಇದೇ ಆದೇಶವನ್ನು ತೆರವು ಮಾಡಿಸುವ ಮೂಲಕ ಹಿಂದಿನ ಆದೇಶ ಮುಂದುವರಿಸಲು ದಾವಲಸಾಬ್‌ ಆದೇಶ ತಂದು, ಗುರುವಾರ ಕಚೇರಿಗೆ ಹಾಜರಾದರು. ಸಹಜವಾಗಿಯೇ ಒಂದೇ ಕುರ್ಚಿಗೆ ಸಂಬಂಸಿ ಇಬ್ಬರು ಎಇಇಗಳನ್ನು ಕಂಡು ಕಚೇರಿ ಸಿಬ್ಬಂದಿ ದಿಗಿಲುಗೊಂಡರು.

ಜಟಾಪಟಿ ತೀವ್ರ

ಎಇಇ ಹುದ್ದೆಗೆ ಸಂಬಂಧಿಸಿ ಇಬ್ಬರು ಅಧಿಕಾರಿಗಳು ಜಿದ್ದಿಗೆ ಬಿದ್ದಿರುವುದರಿಂದ ಜೆಸ್ಕಾಂ ವಲಯದಲ್ಲಿ ಚರ್ಚೆ ಕಾವೇರಿವೆ. ಎಇಇ ದಾವಲಸಾಬ್‌ ಅವರು ತಾವು ಚಾರ್ಜ್‌ ನೀಡದೇ ಇದ್ದರೂ, ಮಲ್ಲಿಕಾರ್ಜುನ ಅವರು ಕಚೇರಿ ಚಾರ್ಜ್‌, ಸರಕಾರಿ ಬಿಎಸ್ಸೆನ್ನೆಲ್‌ ಸಿಮ್‌, ಸರಕಾರಿ ಬಾಡಿಗೆ ಕಾರು ಉಪಯೋಗಿಸುತ್ತಿದ್ದಾರೆಂಬ ಬಗ್ಗೆ ಧ್ವನಿ ಎತ್ತಿದ್ದಾರೆಂದು ಹೇಳಲಾಗಿದೆ. ನಿಯಮದ ಪ್ರಕಾರ ಚಾರ್ಜ್‌ ತೆಗೆದುಕೊಂಡು ಮುಂದಿನ ಆದೇಶದ ಪ್ರಕಾರ ನಡೆದುಕೊಳ್ಳುವುದಾಗಿ ಮಲ್ಲಿಕಾರ್ಜುನ ಅವರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಇಬ್ಬರು ಅಧಿಕಾರಿಗಳ ನಡೆ ಕಚೇರಿ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಜೆಸ್ಕಾಂ ಕಚೇರಿ ಅನುಮಾನದ ಹುತ್ತ ಅಧಿಕಾರಿಗಳ ನಡುವೆ ಏರ್ಪಟ್ಟಿರುವ ಗುಂಪುಗಾರಿಕೆ, ಬಣಗಾರಿಕೆಯಿಂದ ಕಚೇರಿಯೊಳಗಿನ ವಾತಾವರಣ ಕೆಟ್ಟಿದೆ ಎಂಬ ಮಾತು ನಿಷ್ಠಾವಂತ ಸಿಬ್ಬಂದಿಯಿಂದ ಕೇಳಿಬರುತ್ತಿವೆ. ಅಲ್ಲದೇ ಒಬ್ಬರನ್ನು ಮಾತನಾಡಿಸಿದರೆ, ಮತ್ತೂಬ್ಬರಿಗೆ ಸಿಟ್ಟು. ಹೀಗಾಗಿ ಯಾರನ್ನೂ ಮಾತನಾಡಿಸದ ಸ್ಥಿತಿ ಒದಗಿ ಬಂದಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಎಇಇ ದಾವಲಸಾಬ್‌ ಅವರು ಕೋರ್ಟ್‌ ಆದೇಶ ಬಂದಿದೆ ಎಂದು ಕೊಟ್ಟಿದ್ದಾರೆ. ಅವರು ಮ್ಯಾನೇಜಿಂಗ್‌ ಡೈರೆಕ್ಟರ್‌, ನಿರ್ದೇಶಕರನ್ನು ಪಾರ್ಟಿ ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು, ಅವರ ಸಲಹೆಯಂತೆ ನಡೆದುಕೊಳ್ಳಬೇಕಿದೆ. -ರಾಜೇಶ ಶರ್ಮಾ, ಇಇ, ಜೆಸ್ಕಾ ಉಪವಿಭಾಗೀಯ ಕಚೇರಿ, ಸಿಂಧನೂರು

-ಯಮನಪ್ಪ ಪವಾರ

ಟಾಪ್ ನ್ಯೂಸ್

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

1-weqew-e

Raichur; ಒಳ ಮೀಸಲಾತಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

Raichur: ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು

Raichur: ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು

3-maski

Maski: ಮಾಂಸದೂಟ ಸೇವಿಸಿ ಮೂವರು ಅಸ್ವಸ್ಥ

1-trfff

Sirwar; ಭೀಕರ ಅಪಘಾ*ತ; ಮೂವರು ಸ್ಥಳದಲ್ಲೇ ಸಾ*ವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

ಹಾನಗಲ್ಲ: ಮನುಕುಲಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ

ಹಾನಗಲ್ಲ: ಮನುಕುಲಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಮಹರ್ಷಿ ವಾಲ್ಮೀಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.