ಇಳಿವಯಸ್ಸಿನ ಸಮಸ್ಯೆಗೇ ಬ್ರೇಕ್ ಹಾಕಬಲ್ಲ ಮೊಸರು!
ಗುವಾಹಟಿ ವಿಜ್ಞಾನಿಗಳಿಂದ ಹೊಸ ಸಂಶೋಧನೆ
Team Udayavani, Feb 12, 2022, 7:30 AM IST
ಗುವಾಹಟಿ: “ಅಯ್ಯೋ… ವಯಸ್ಸಾಯ್ತು.. ಮೊದಲಿನಂತೆ ಈಗ ಕೆಲಸ ಮಾಡೋದಕ್ಕೇ ಆಗಲ್ಲ…’
ಇದು 35-40 ದಾಟಿದ ಬಹುತೇಕರ ದೂರು. ಈ ಸಮಸ್ಯೆಯನ್ನು ಮನಗಂಡಿರುವ ಗುವಾಹಟಿಯ ವಿಜ್ಞಾನಿಗಳು ಅದಕ್ಕೊಂದು ಹೊಸ ಪರಿಹಾರ ಕಂಡುಹಿಡಿದಿದ್ದಾರೆ. ಅದೇ “ಯೋಗರ್ಟ್'(ಮೊಸರು).
ಅಸ್ಸಾಂನ ಗುವಾಹಟಿ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡಿ ಇನ್ ಸೈನ್ಸ್ ಅಂಡ್ ಟೆಕ್ನಾಲಜಿ (ಐಎಎಸ್ಎಸ್ಟಿ) ಯ ವಿಜ್ಞಾನಿಗಳು “ಲಕ್ಟೋಬಕಿಲಸ್ ಪ್ಲಾಂಟರಂ ಜೆಬಿಸಿ5′ ಹೆಸರಿನ ಬ್ಯಾಕ್ಟೀರಿಯಾವನ್ನು ಪತ್ತೆ ಹಚ್ಚಿದ್ದಾರೆ. ಅದನ್ನು ಕೆನೋರ್ಹಾಬ್ಡಿಟಿಸ್ ಎಲಿಗೆನ್ಸ್ ಹೆಸರಿನ ಹುಳುವೊಂದರ ಮೇಲೆ ಪ್ರಯೋಗಿಸಿದ್ದಾರೆ. ಹೀಗೆ ಮಾಡಿದ ನಂತರ ಆ ಹುಳುವಿನ ಜೀವಿತಾವಧಿ ಶೇ.27.8ರಷ್ಟು ಹೆಚ್ಚಾಗಿದೆ. ಹಾಗೆಯೇ ಅದು ಅತಿಹೆಚ್ಚು ಕಾಲ ಸದೃಢವಾಗಿರುವುದನ್ನೂ ವಿಜ್ಞಾನಿಗಳು ಗಮನಿಸಿದ್ದಾರೆ.
ಇದನ್ನೂ ಓದಿ:ಗಮನಿಸುತ್ತಿದ್ದೇವೆ, ಕೆಲ ಮಕ್ಕಳ ಪೋಷಕರು ಮತೀಯ ಸಂಘಟನೆಯಲ್ಲಿದ್ದಾರೆ : ಆರಗ ಜ್ಞಾನೇಂದ್ರ
ಈ ಬ್ಯಾಕ್ಟೀರಿಯಾವು ಮನುಷ್ಯನನ್ನು ವಯೋಸಹಜವಾಗಿ ಕಾಡುವ ಬೊಜ್ಜು, ಪ್ರತಿಕಾಯದ ಸಮಸ್ಯೆಗಳಿಂದ ಕಾಯಬಲ್ಲದು ಎಂದು ಎಐಎಸ್ಎಸ್ಟಿ ನಿರ್ದೇಶಕರಾಗಿರುವ ಆಶಿಶ್ ಕೆ.ಮುಖರ್ಜಿ ತಿಳಿಸಿದ್ದಾರೆ.
ಸಂಸ್ಥೆ ಕಂಡುಹಿಡಿದ “ಲಕ್ಟೋಬಕಿಲಸ್ ಪ್ಲಾಂಟರಂ ಜೆಬಿಸಿ5′ ಬ್ಯಾಕ್ಟೀರಿಯಾ ಬಳಸಿಕೊಂಡು ಪ್ರೊಬಯೋಟಿಕ್ ಮೊಸರನ್ನು(ಯೋಗರ್ಟ್) ತಯಾರಿಸಿದೆ. ಅದರ ಪೇಟೆಂಟ್ಗೆಂದು ಅರ್ಜಿಯನ್ನೂ ಸಲ್ಲಿಸಿದೆ. ಈ ಮೊಸರನ್ನು ಮನುಷ್ಯರು ಬಳಸುವುದರಿಂದ ಅವರ ದೈಹಿಕ ಸಾಮರ್ಥ್ಯ ಹೆಚ್ಚಬಹುದು ಎನ್ನುವುದು ಸಂಶೋಧಕರ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ
Tirupati: ಲಡ್ಡಿಗೆ ಪ್ರಾಣಿ ಕೊಬ್ಬು: ಟಿಟಿಡಿ ಹೇಳಿದ್ದೇನು? ತನಿಖೆಗೆ ನಿರ್ಧಾರ
Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ
Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್ ಅಂಬಾನಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ
Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು
Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ
Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್ ಇಸ್ರೇಲ್ ದಾಳಿಯಲ್ಲಿ ಸಾವು
Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.