ಮೀಸಲಾತಿ ಕಬಳಿಕೆಗೆ ಬುಡ್ಗಜಂಗಮರ ಖಂಡನೆ


Team Udayavani, Feb 17, 2022, 9:58 AM IST

2chincholi

ಚಿಂಚೋಳಿ: ವೀರಶೈವ ಜಂಗಮರು ದಲಿತ ಶೋಷಿತ ಅಸ್ಪೃಶ್ಯ ಅಲೆಮಾರಿ ಬೇಡ ಬುಡ್ಗ ಜಂಗಮರ ಮೀಸಲಾತಿ ಕಬಳಿಸುತ್ತಿರುವುದನ್ನು ಖಂಡಿಸಿ ಹೈದ್ರಾಬಾದ ಕರ್ನಾಟಕ ಅಲೆಮಾರಿ(ಪರಿಶಿಷ್ಟ ಜಾತಿ) ಬುಡ್ಗ ಜಂಗಮ ಜಾಗೃತಿ ಸೇವಾ ಸಂಘದ ಮುಖಂಡರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಗೌರವಾಧ್ಯಕ್ಷ ಡಾ| ಅಂಜನಯ್ಯ ಮಾತನಾಡಿ, ಪರಿಶಿಷ್ಟ ಜಾತಿ 19ನೇ ಕಲಂನಡಿ ಬುಡ್ಗ ಜಂಗಮ, ಬೇಡ ಜಂಗಮ ಒಂದೇ ಜಾತಿಯಲ್ಲಿ ಇರುವುದರಿಂದ ವೀರಶೈವ ಜಂಗಮರು ನಾವೇ ಬುಡ್ಗ ಜಂಗಮ ಪರಿಶಿಷ್ಟ ಜಾತಿಯವರು ಎಂದು ಪ್ರತಿಭಟನೆ ಮಾಡಿ ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ನೀಡಲು ಕೇಳಿದ್ದಾರೆ. ವೀರಶೈವ ಜಂಗಮರು ಪಂಚಪೀಠ ಪರಂಪರೆಗೆ ಸೇರಿದವರಾಗಿದ್ದಾರೆ. ಆದರೆ ಸರ್ಕಾರದ ದಾರಿ ತಪ್ಪಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದುಕೊಳ್ಳುವ ತಂತ್ರ ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬುಡ್ಗಜಂಗಮ ಜನಾಂಗವು ಪರಿಶಿಷ್ಟ ಜಾತಿಯಲ್ಲಿದ್ದು, ಅಲೆಮಾರಿಗಳಾಗಿದ್ದೇವೆ. ಮಾಂಸಹಾರಿಗಳಾಗಿದ್ದು, ಗುಡ್ಡಗಾಡುಗಳಲ್ಲಿ ಗುಡಿಸಲುಗಳಲ್ಲಿ ವಾಸಿಸುವವರಾಗಿದ್ದಾರೆ. ಒಂದೇ ಕಡೆ ನೆಲೆ ನಿಲ್ಲದೇ ಹಗಲುವೇಷ, ಬುರ್ರಕಥಾ, ಗಂಗಿಗೌರಿ ಕೀರ್ತನ ಕಾವ್ಯಗಳನ್ನು ಹೇಳುತ್ತಾ ಅನೇಕ ವೇಷಗಳನ್ನು ಧರಿಸಿ ಜನರಿಗೆ ಜಾತಿಗೊಂದು ಕಥೆ ಹೇಳುವ ನಮ್ಮ ಸಮಾಜಕ್ಕೆ ನೀಡುವ ಮೀಸಲಾತಿ ದೋಚುವ ಪ್ರಯತ್ನ ನಡೆಯುತ್ತಿದೆ. ಸರ್ಕಾರ ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.

ದಲಿತ ಮುಖಂಡ ರಮೇಶ ಯಾಕಾಪುರ, ತಾಲೂಕು ಬುಡ್ಗಜಂಗಮ ಸಮಾಜದ ಅಧ್ಯಕ್ಷ ರಂಗಯ್ಯ, ಯಲ್ಲಪ್ಪ, ಕಿಷ್ಟಯ್ಯ, ಶಂಕರ, ಅರ್ಜುನ, ಸಾಯಿಕೃಷ್ಣ, ರಾಮುಲು ಕಲ್ಲೂರ, ಪೆಂಟಯ್ಯ, ರಮೇಶ ವಂಟಿಚಿಂತಾ ಮಾತನಾಡಿದರು.

ಮುಖಂಡರಾದ ರಾಜು ಬೆಡಕಪಳ್ಳಿ, ಗೌತಮ ಬೊಮ್ಮನಳ್ಳಿ, ಆರ್‌. ಗಣಪತರಾವ್‌, ಗೋಪಾಲ ರಾಂಪೂರೆ, ಅಮರ ಲೊಡನೋರ, ಕಾಶಿನಾಥ ಸಿಂಧೆ, ಸುನೀಲ ದೊಡ್ಡಮನಿ, ಅನಿಲ ಕಟ್ಟಿ ಇನ್ನಿತರರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಲಾಯಿತು.

ಟಾಪ್ ನ್ಯೂಸ್

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

ranaj

Ranaji Trophy: ಹೊರಮೈದಾನ ಒದ್ದೆ : ಕರ್ನಾಟಕ-ಕೇರಳ ಪಂದ್ಯಕ್ಕೆ ತೊಂದರೆ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ

1-a-nitk

kulai; ಮೀನುಗಾರಿಕೆ ಜೆಟ್ಟಿ ಕೆಲಸ ಪ್ರಗತಿಯಲ್ಲಿ

CHESS-ARJUN

London: ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ ಅರ್ಜುನ್‌ ಎರಿಗೈಸ್‌ಗೆ ಪ್ರಶಸ್ತಿ

arrested

Sullia;ಮಹಿಳೆಯರ ಅವಹೇಳನ ಆರೋಪ: ಅರಣ್ಯಾಧಿಕಾರಿಯ ಬಂಧನ, ಬಿಡುಗಡೆ

Pak–Eng

Test Cricket: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಪಾಕಿಸ್ಥಾನಕ್ಕೆ 152 ರನ್‌ಗಳ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

Kalaburagi; ಕಾರು-ಬೈಕ್-ಲಾರಿ ನಡುವೆ ಡಿಕ್ಕಿ: ನಾಲ್ವರ ಸಾವು

3-chincholi

Chincholi: ಯುವಕ‌ನ ಕೊಲೆ ‌; ಕಾರಣ ನಿಗೂಢ

8-chittapur

Chittapur: ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ; ಪರಿಶೀಲನೆ

Kalaburagi; ರಾಜಾತಿಥ್ಯ ಆರೋಪ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹಕ್ಕೆ ಎಡಿಜಿಪಿ ಭೇಟಿ

Kalaburagi; ರಾಜಾತಿಥ್ಯ ಆರೋಪ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹಕ್ಕೆ ಎಡಿಜಿಪಿ ಭೇಟಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

police

ಮಣಿಕಲ್ಲು ದೇಗುಲದ ಆಡಳಿತ ಮಂಡಳಿ ವಿಚಾರ: ಗಲಾಟೆ

suicide (2)

Panja:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

police crime

Uppinangady; ಹುಟ್ಟು ಹಬ್ಬಕ್ಕಾಗಿ ಕಡವೆ ಹ*ತ್ಯೆ!: ಕೋವಿ, ಮಾಂಸ ವಶ

drowned

Subrahmanya: ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.