ಕಲಾವಿದರ ಮಾಸಾಶನ ಹೆಚ್ಚಳ ಪರಿಶೀಲನೆ: ಸುನಿಲ್ಕುಮಾರ್
Team Udayavani, Feb 18, 2022, 6:20 AM IST
ಬೆಂಗಳೂರು: ರಾಜ್ಯದಲ್ಲಿ ಕಲಾವಿದರ ಮಾಸಾಶನ ಹೆಚ್ಚಿಸುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ನ ಬಂಡೆಪ್ಪ ಖಾಶೆಂಪುರ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಅವರು, ರಾಜ್ಯದಲ್ಲಿ 11 ಸಾವಿರ ಕಲಾವಿದರಿಗೆ ಎರಡು ಸಾವಿರ ರೂ.ನಂತೆ ಮಾಸಾಶನ ನೀಡಲಾಗುತ್ತಿದೆ. ಮಾಸಾಶನ ಹೆಚ್ಚಿಸುವ ಪ್ರಸ್ತಾವನೆ ಸರಕಾರದ ಮುಂದಿದೆ ಎಂದು ತಿಳಿಸಿದರು.
ವರ್ಷಪೂರ್ತಿ ಸಾಂಸ್ಕೃತಿಕ ಚಟುವಟಿಕೆ ನಡೆಸುವ ಸಂಘ ಸಂಸ್ಥೆಗಳಿಗೆ ಶಾಶ್ವತ ಅನುದಾನ ನೀಡಲಾಗುತ್ತಿದ್ದು, ವರ್ಷಕ್ಕೆ ಅದಕ್ಕಾಗಿ 6 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಮಧ್ಯಪ್ರವೇಶ ಮಾಡಿ, ನಾಡಿನ ಸಾಂಸ್ಕೃತಿಕ ಸಮೃದ್ಧಿಗೆ ಕಲಾವಿದರ ಕೊಡುಗೆ ಅಪಾರ ಇದೆ. ಕೊರೊನಾ ಅನಂತರ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಸರಕಾರ ಅವರ ನೆರವಿಗೆ ಬರಬೇಕು. ಕಲಾವಿದರ ವಿಚಾರದಲ್ಲಿ ಉದಾರತೆ ಇರಲಿ ಎಂದು ಸಲಹೆ ನೀಡಿದರು.
ರಂಗ ಶಿಕ್ಷಕರ ನೇಮಿಸಿ
ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ರಂಗ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ ಆ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಖಾಶೆಂಪುರ್ ಹೇಳಿದರು. ಮತ್ತೆ ರಂಗ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hyderabad: ಯುಪಿ ವಿರುದ್ಧ ಗೆದ್ದ ಬೆಂಗಾಲ್
BBK11: ಬಿಗ್ ಬಾಸ್ ಮನೆಗೆ ಬಂದು ಧಿಕ್ಕಾರ ಹಾಕಿದ ಜನಸಾಮಾನ್ಯರು..! ಅಂಥದ್ದೇನಾಯಿತು?
New Delhi: ಸರಕಾರದ ಹಸ್ತಕ್ಷೇಪ ಕುಸ್ತಿ ವಿಶ್ವ ಪಂದ್ಯಾವಳಿಯಿಂದ ಭಾರತ ಹೊರಕ್ಕೆ
Shootout: ಜರ್ಮನಿಗೆ ಹಾಕಿ ಟೆಸ್ಟ್ ಸರಣಿ ದ್ವಿತೀಯ ಪಂದ್ಯ; ಭಾರತ 5-3 ಗೆಲುವು
New Delhi: ವನಿತಾ ಹಾಕಿ ಮಾಜಿ ನಾಯಕಿ ರಾಣಿ ರಾಂಪಾಲ್ ನಿವೃತ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.