ಗ್ರಾಮೀಣಾಭಿವೃದ್ದಿ ಪದನಾಮಕ್ಕಾದರೂ ಬೆಲೆ ಕೊಡಿ


Team Udayavani, Feb 20, 2022, 2:18 PM IST

14price

ಸಿಂಧನೂರು: ಕಳೆದ ಹಲವು ದಿನಗಳಿಂದ ರೌಡಕುಂದಾ ಗ್ರಾಪಂ ಸಫಾಯಿ ಕೆಲಸಗಾರರ ಮೂಲಕ ಸಾಗಿದೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಎಂಬ ಪದನಾಮಕ್ಕಾದರೂ ಬೆಲೆ ಕೊಟ್ಟು ಇಲ್ಲಿಗೆ ಕೆಲಸ ನಿರ್ವಹಿಸಲು ಬನ್ನಿ ಎಂದು ರೌಡಕುಂದಾ ಗ್ರಾಪಂ ಅಧ್ಯಕ್ಷ ಮಹಾಂತೇಶ ಹಿರೇಗೌಡರ್‌ ಆಹ್ವಾನಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಂಚಾಯತ್‌ ಗೆ ಇರುವ ಇಂಚಾರ್ಜ್‌ ಪಿಡಿಒ ಕೂಡ ಸರಿಯಾಗಿ ಬರುತ್ತಿಲ್ಲ. ಅವರು ಪ್ರಭಾರ ಬದಲಾಯಿಸಲು ತಾಪಂಗೆ ಪತ್ರ ಕೊಟ್ಟಿದ್ದಾರೆ. ಇನ್ನು ಅಕೌಂಟೆಂಟ್‌ ಹುದ್ದೆಯೂ ಖಾಲಿ, ಬಿಲ್‌ಕಲೆಕ್ಟರ್‌ ಕೂಡ ಇಲ್ಲ. ಯಾರ ಜೊತೆಯಲ್ಲಿ ನಾವು ಕೆಲಸ ತೆಗೆದುಕೊಳ್ಳಬೇಕು. ಆದರೂ, ನಾನು ವೈಯಕ್ತಿಕ ಕಾಳಜಿ ವಹಿಸಿ ಕೆರೆ ಅಭಿವೃದ್ಧಿ, ಮರಂ ತುಂಬಿಸುವುದು ಸೇರಿ ಹಲವು ಕೆಲಸ ಮಾಡಿರುವೆ. ಸ್ವಾಭಿಮಾನಕ್ಕೆ ಬದ್ಧನಾಗಿ ಈ ಕೆಲಸ ಮಾಡಿರುವೆ ಎಂದರು.

4.50 ಕೋಟಿ ರೂ. ಅವ್ಯವಹಾರ

ರೌಡಕುಂದಾ ಗ್ರಾಪಂನಲ್ಲಿ ಈ ಹಿಂದೆ 4.50 ಕೋಟಿ ರೂ. ಅವ್ಯವಹಾರವಾಗಿದೆ. ಸತ್ತವರು ಹಾಗೂ ಗೊತ್ತಿಲ್ಲದವರ ಹೆಸರಿನಲ್ಲಿ ಮನೆಗಳನ್ನು ಮಂಜೂರು ಮಾಡಿ, ಬಿಲ್‌ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಳೇ ಬಿಲ್‌ಕಲೆಕ್ಟರ್‌ ರಂಜಾನ್‌ಸಾಬ್‌ ಮೇಲೆ ಮೊಕದ್ದಮೆ ಹೂಡಲಾಗಿದೆ. 22 ಲಕ್ಷ ರೂ. ವಸೂಲಿ ಮಾಡುವಂತೆ ಈ ಹಿಂದೆ ಸರಕಾರವೇ ಆದೇಶ ಮಾಡಿದೆ. ಆದರೂ, ಈ ಯಾವುದರ ಬಗ್ಗೆಯೂ ತನಿಖೆ ನಡೆಯುತ್ತಿಲ್ಲ. ರಂಜಾನ್‌ ಸಾಬ್‌ ಗ್ರಾಪಂ ಕಟ್ಟಡದ ಕಾಂಪೌಂಡ್‌ ಒಡೆದು ಮನೆ ಕಟ್ಟಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಒಂಬಡ್ಸಮನ್‌ ತನಿಖೆ ಸರಿಯಲ್ಲ

ನರೇಗಾಗಕ್ಕೆ ಸಂಬಂಧಿಸಿ ಗ್ರಾಪಂ ವ್ಯಾಪ್ತಿಯಲ್ಲಿ ಸಸಿ ನೆಡಲು ಅಗೆದ ಗುಂಡಿಗಳಲ್ಲಿ ಹೂಳು ತುಂಬಿದೆ ಎಂದು ವರದಿ ಕೊಟ್ಟಿರುವ ರಾಜ್ಯ ಸರಕಾರ ನಿಯೋಜಿತ ಒಂಬಡ್ಸಮನ್‌ ವರದಿ ಸಮರ್ಪಕವಾಗಿಲ್ಲ. ಅವರು ಪಕ್ಕದ ಮಲ್ಕಾಪುರದವರೆಂದು ಗೊತ್ತಾಗಿದೆ. ಈ ಹಿಂದಿನ ಇಬ್ಬರು ಪಿಡಿಒ, ಹಳೇ ಇಒ ಪವನ್‌ ಕುಮಾರ್‌ ಅವರ ಷಡ್ಯಂತ್ರದಿಂದ ತಪ್ಪು ತನಿಖಾ ವರದಿ ಕೊಟ್ಟಿದ್ದಾರೆ. ಯಾವುದೇ ಗುಂಡಿಯನ್ನು ನನ್ನ ಹೊಲದಲ್ಲಿ ತೆಗೆಯಿಸಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ಅಧ್ಯಕ್ಷನಾಗಿ ನಾನು ಅದನ್ನು ಒಪ್ಪುತ್ತೇನೆ. ಅದನ್ನು ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡುತ್ತೇನೆ ಎಂದರು.

ಗ್ರಾಪಂ ಸದಸ್ಯರಾದ ವಿಜಯಪ್ರಕಾಶ್‌ ಬಂಗಾರಿ ಕ್ಯಾಂಪ್‌, ಹನುಮಂತಪ್ಪ ಅರಳಹಳ್ಳಿ, ರವಿಕುಮಾರ್‌ ಸೇರಿದಂತೆ ಇತರರು ಇದ್ದರು.

ಆರೋಪವನ್ನು ಒಪ್ಪಿಕೊಳ್ಳುವೆ

ತನಿಖಾ ವರದಿಯಲ್ಲಿ ನಮೂದಿಸಿದ ಆರೋಪವನ್ನು ನಾನು ಒಪ್ಪಿಕೊಳ್ಳುವೆ. ಒಂದು ರೂಪಾಯಿ ದುರ್ಬಳಕೆ ಮಾಡಿಕೊಂಡಿದ್ದಾರೋ ಅದು ತಪ್ಪೇ. ಆದರೆ, ಆ ವರದಿಯೇ ಸರಿಯಿಲ್ಲ. ತನಿಖೆ ನಡೆಸಿದ ವ್ಯಕ್ತಿ ರಾಜಕೀಯ ಒತ್ತಡಗಳಿಗೆ ಬಲಿಯಾಗಿ ವರದಿ ಕೊಟ್ಟಿದ್ದಾರೆ ಎಂದು ಮಹಾಂತೇಶ ಹಿರೇಗೌಡರ್‌ ಹೇಳಿಕೊಂಡರು. ಮೂಗನ ಜಾಬ್‌ಕಾರ್ಡ್‌ ನಂಬರ್‌ ನಮೂದಿಸಿ, ಅವರು ಕೆಲಸ ಮಾಡಿಲ್ಲವೆಂದು ಬರೆದುಕೊಟ್ಟಿದ್ದಾರೆ. ಹಾಗೆ. ಇಂತಹ ಹಲವು ತಪ್ಪುಗಳಿವೆ. ಅದನ್ನು ಸಂಬಂಧಿಸಿದ ಪ್ರಾಧಿಕಾರದಲ್ಲಿ ಪ್ರಶ್ನಿಸಲಾಗುವುದು. ಭ್ರಷ್ಟಾಚಾರದ ಕೂಪವಾಗಿದ್ದ ಗ್ರಾಮ ಪಂಚಾಯತ್‌ ಸ್ವತ್ಛಗೊಳಿಸಲು ಹೊರಟಿರುವ ನಮಗೆ ತಾಪಂ ಹಾಗೂ ಜಿಪಂ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

1-weqew-e

Raichur; ಒಳ ಮೀಸಲಾತಿಗಾಗಿ ಡಿಸಿ ಕಚೇರಿಗೆ ಮುತ್ತಿಗೆ ಯತ್ನ

Raichur: ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು

Raichur: ಜಮೀನಿನಲ್ಲಿ ಬೃಹತ್ ಬಂಡೆ ಉರುಳಿ ಮಕ್ಕಳು ಸೇರಿ ಮೂವರು ಸಾವು

3-maski

Maski: ಮಾಂಸದೂಟ ಸೇವಿಸಿ ಮೂವರು ಅಸ್ವಸ್ಥ

1-trfff

Sirwar; ಭೀಕರ ಅಪಘಾ*ತ; ಮೂವರು ಸ್ಥಳದಲ್ಲೇ ಸಾ*ವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.