![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Feb 21, 2022, 2:32 PM IST
ಪಣಂಬೂರು: ಕೇಂದ್ರ ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್ ರವಿವಾರ ನವ ಮಂಗಳೂರು ಬಂದರಿಗೆ ಭೇಟಿ ನೀಡಿದರು.
ಬಂದರು ಒದಗಿಸುವ ಬರ್ತ್ಗಳು ಮತ್ತು ವಿವಿಧ ಮೂಲಸೌಕರ್ಯ ಸೌಲಭ್ಯಗಳನ್ನು ವೀಕ್ಷಿಸಿದರು. ಕೆಐಒಸಿಎಲ್ನ ಕಬ್ಬಿಣದ ಅದಿರು ಉಂಡೆಗಳ ಕಬ್ಬಿಣದ ಅದಿರು ಕಚ್ಚಾ ವಸ್ತುಗಳ ಆಮದು ಮತ್ತು ರಫ¤ನ ನಿರ್ವಹಣೆ ಸೌಲಭ್ಯಗಳನ್ನು ಪರಿಶೀಲಿಸಿದರು. ಬಂದರು ಅಳವಡಿಸಿಕೊಂಡಿರುವ ಹಲವಾರು ಮೂಲ ಸೌಕರ್ಯ ಮತ್ತು ತಾಂತ್ರಿಕ ಪ್ರಗತಿಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಲಾಯಿತು.
ಬಂದರು ನಿರ್ವಹಣೆ, ಕೆಐಒಸಿಎಲ್ ಮತ್ತು ಜೆಎಸ್ಡಬ್ಲ್ಯು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಚಿವರು ಬಂದರಿನ ಅಭಿವೃದ್ಧಿ ಕಾಮಗಾರಿಗಳು ಮತ್ತು ಒದಗಿಸಿ ರುವ ವಿವಿಧ ಮೂಲಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನವಮಂಗಳೂರು ಬಂದರು ಚೇರ್ಮನ್ ಡಾ| ಎ.ವಿ. ರಮಣ, ಉಪಾಧ್ಯಕ್ಷ ಕೆ.ಜಿ. ನಾಥ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ
You seem to have an Ad Blocker on.
To continue reading, please turn it off or whitelist Udayavani.