ಮಾಣಿಕನಹಳ್ಳಿಯಲ್ಲಿ ರಸ್ತೆ ದೂಳು ಮನೆಯೊಳಗೆ


Team Udayavani, Feb 23, 2022, 1:17 PM IST

ಮಾಣಿಕನಹಳ್ಳಿಯಲ್ಲಿ ರಸ್ತೆ ದೂಳು ಮನೆಯೊಳಗೆ

ಕಿಕ್ಕೇರಿ: ಎತ್ತ ನೋಡಿದರೂ ಕಲ್ಲು ಗುಂಡು,ಕಿತ್ತು ಬಂದ ಕೆಮ್ಮಣ್ಣಿನ ದೂಳುಮಯ ರಸ್ತೆ. ಇದು ಹೋಬಳಿಯ ಮಾಣಿಕನಹಳ್ಳಿಯ ರಸ್ತೆಯ ದುರಾವಸ್ಥೆ.

ಹೋಬಳಿಯ ಗಡಿ ಭಾಗದ ಗ್ರಾಮಕ್ಕೆ ಯಾವುದೇ ಸಾರಿಗೆ ಸೌಲಭ್ಯಗಳಿಲ್ಲದೆ ಖಾಸಗಿ ವಾಹನಗಳು ಹೊರ ಪ್ರಯಾಣಕ್ಕೆ ಆಸರೆಯಾಗಿವೆ. ಗ್ರಾಮದಲ್ಲಿ ಒಂದೆರೆಡು ಕಡೆ ಒಳಚರಂಡಿ ವ್ಯವಸ್ಥೆ ಕಂಡರೆ, ಹಲವು ಕಡೆ ಇನ್ನೂ ಚರಂಡಿ ಸೌಭಾಗ್ಯ ಕಾಣದಾಗಿದೆ. ಎಲ್ಲ ಗ್ರಾಮಗಳಲ್ಲಿ ಬಹುತೇಕ ವಿವಿಧ ಯೋಜನೆಯಲ್ಲಿ ರಸ್ತೆ ನಿರ್ಮಾಣ ಕಂಡರೆ ಈ ಗ್ರಾಮದಲ್ಲಿ ರಸ್ತೆ ನವೀಕರಣ ಸೌಭಾಗ್ಯ ಕಾಣದಾಗಿದೆ.

ದೂಳು ಮನೆಯೊಳಗೆ: ಸಣ್ಣ ವಾಹನ ಗ್ರಾಮ ಪ್ರವೇಶಿಸಿದರೂ, ಗಾಳಿ ಬೀಸಿದರೂ ಸಾಕುರಸ್ತೆಯ ದೂಳು ಮನೆಯೊಳಗೆ ಎನ್ನುವಂತಾಗಿದ್ದು, ಗ್ರಾಮಸ್ಥರು ಸಹಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. 500 ಜನಸಂಖ್ಯೆ ಇರುವಗ್ರಾಮದಲ್ಲಿ ಬಹುತೇಕ ಕೃಷಿ ಚಟುವಟಿಕೆಪ್ರಧಾನ ಕಸುಬು. ಜೊತೆಗೊಂದಿಷ್ಟು ಹೈನುಗಾರಿಕೆ ಇದೆ. ರಸ್ತೆ ತುಂಬಾ ಕಲ್ಲುಗುಂಡುಗಳೇ ಎದ್ದು ಕಾಣುತ್ತವೆ. ಅಲ್ಲಲ್ಲಿ ಮಂಡಿ ಉದ್ದ ಗುಂಡಿ, ಸಂಪೂರ್ಣ ಕೆಮ್ಮಣ್ಣು ರಸ್ತೆಯಲ್ಲಿದ್ದ ಜಲ್ಲಿಕಲ್ಲು ಕಿತ್ತು ಬಂದು ನಡೆದಾಡಲು ಕೂಡ ಕಷ್ಟದಂತಿದೆ.

ಮತ್ತಷ್ಟು ರೋಗ ಹರಡುವಿಕೆ: ರಸ್ತೆ ಕಾಂಕ್ರೀಟೀಕರಣ ಗೊಳಿಸುವುದಾಗಿಜನಪ್ರತಿನಿಧಿಗಳು ನೀಡುವ ಭರವಸೆಯೇಇಲ್ಲಿನ ಜನರಿಗೆ ಆಸೆಯ ಉತ್ತರವಾಗಿದೆ.ರಸ್ತೆಯ ತುಂಬಾ ಉಸುಕಿನ ಮಣ್ಣು, ಜಲ್ಲಿಕಲ್ಲು ತುಂಬಿದ್ದು ದ್ವಿಚಕ್ರ ವಾಹನಗಳು ಓಡಾಡಿದರೆಚಕ್ರಗಳು ಜಾರುವಂತಿದೆ. ದೂಳಿನಿಂದವಯೋವೃದ್ಧರಿಗೆ, ಮಕ್ಕಳಿಗೆ, ಕಾಯಿಲೆಯಿಂದ ಬಳಲುವವರಿಗೆ ಮತ್ತಷ್ಟು ರೋಗ ಹಬ್ಬುವಂತಾಗಿದೆ. ಹಿರಿಯರು, ಮಕ್ಕಳು ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದು ಏಳುವಂತಾಗಿದೆ.

ವಿಷಜಂತುಗಳು: ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲದಿರುವಾಗ ಸಣ್ಣಪುಟ್ಟಅವಘಡಗಳು ಸಂಭವಿಸಿದಾಗ ಗ್ರಾಮದಹೊರ ಪ್ರದೇಶದಲ್ಲಿಯೇ ಆಟೋಗಳುನಿಲ್ಲುತ್ತಿವೆ. ರಾತ್ರಿ ವೇಳೆಯಲ್ಲಿ ಹಾವು,ಚೇಳಿನಂತಹ ವಿಷಜಂತುಗಳ ಉಪದ್ರವ ಹೇಳತೀರದಾಗಿದೆ.

ಇರುವ ಕಲ್ಲುಚಪ್ಪಡಿ ಚರಂಡಿ ತುಂಬಕಸಕಡ್ಡಿ, ಗಿಡಗಂಟಿ ಬೆಳೆದು ಮುಚ್ಚಿಹೋಗಿದೆ.ಹಗಲು ವೇಳೆಯಲ್ಲಿಯೇ ವಿಷಜಂತುಗಳುಕಾಣಿಸಿಕೊಳ್ಳುತ್ತಿದ್ದು, ಮಕ್ಕಳನ್ನು ಹೊರಗಡೆಬಿಡುವುದೇ ಕಷ್ಟವೆನ್ನುವುದು ಗ್ರಾಮಸ್ಥರ ಅಳಲಾಗಿದೆ.

ತ್ವರಿತವಾಗಿ 15ನೇ ಹಣಕಾಸುಯೋಜನೆಯಲ್ಲಿ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನರೇಗಾಯೋಜನೆಗೆ ಒತ್ತು ನೀಡಿದರೂ ರಸ್ತೆಕಾಮಗಾರಿಗೆ ಕೂಲಿ ವೆಚ್ಚಕ್ಕಿಂತಸಾಮಗ್ರಿ ವೆಚ್ಚವೇ ಅಧಿಕವಾಗಿದೆ.ಶೇ.80ರಷ್ಟು ಸಾಮಗ್ರಿ ವೆಚ್ಚವಿದ್ದು,ಶೇ.20 ರಷ್ಟು ಕೂಲಿ ವೆಚ್ಚವಿದ್ದು,ತ್ವರಿತವಾಗಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಗಮನಹರಿಸಲಾಗುವುದು.ಶಿವಕುಮಾರ್‌, ಪಿಡಿಒ, ಚೌಡೇನಹಳ್ಳಿ ಗ್ರಾಪಂ

ಟಾಪ್ ನ್ಯೂಸ್

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

DKS

H.D.Kumaraswamy: ಅವರ ಮಾತು ಅವರಿಗೇ ಗೊತ್ತಿರುವುದಿಲ್ಲ: ಡಿ.ಕೆ.ಶಿವಕುಮಾರ್‌

Mangaluru: ವೈದ್ಯಕೀಯ ಕ್ಷೇತ್ರದಲ್ಲಿ “ಜನಪ್ರಿಯ’ ಕೊಡುಗೆ: ಯು.ಟಿ. ಖಾದರ್‌

Mangaluru: ವೈದ್ಯಕೀಯ ಕ್ಷೇತ್ರದಲ್ಲಿ “ಜನಪ್ರಿಯ’ ಕೊಡುಗೆ: ಯು.ಟಿ. ಖಾದರ್‌

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Udupi: 4 ಕೋಟಿ ರೂ. ಷೇರು ವಂಚನೆ: ಪ್ರಕರಣ ದಾಖಲು

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BIO-METRIC

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

suicide (2)

Heart attack: ಕಚೇರಿಯಲ್ಲೇ 40 ವರ್ಷದ ಟೆಕ್ಕಿ ಸಾವು

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

Yakshagana: ಲೌಕಿಕದೊಂದಿಗೆ ಆಧ್ಯಾತ್ಮಿಕ ವಿದ್ಯೆ: ಪುತ್ತಿಗೆ ಶ್ರೀ

police crime

Speed ತಗ್ಗಿಸಲು ಹೇಳಿದ್ದಕ್ಕೆ ಕಾರು ಹತ್ತಿಸಿ ಪೊಲೀಸ್‌ ಪೇದೆ ಹತ್ಯೆ

ಬಂಟರ ಸಂಘದಿಂದ ಡಾ| ಪ್ರಕಾಶ್‌ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ

ಬಂಟರ ಸಂಘದಿಂದ ಡಾ| ಪ್ರಕಾಶ್‌ ಶೆಟ್ಟಿ ಅವರಿಗೆ “ಶ್ರೀ ಗುರು ನಿತ್ಯಾನಂದಾನುಗ್ರಹ’ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.