ಹದಗೆಟ್ಟ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ರಸ್ತೆ : ದುರಸ್ತಿಗೆ ಸಾರ್ವಜನಿಕರಿಂದ ಆಗ್ರಹ
Team Udayavani, Mar 1, 2022, 11:50 AM IST
ಹಳೆಯಂಗಡಿ: ಇಲ್ಲಿನ ಹಳೆಯಂಗಡಿ ಗ್ರಾ.ಪಂ.ನ ಸಸಿಹಿತ್ಲು ಗ್ರಾಮದ ಶ್ರೀ ಭಗವತೀ ದೇವಸ್ಥಾನ ಹಾಗೂ ಮುಂಡ ಬೀಚ್ನ್ನು ಸಂಪರ್ಕಿ ಸುವ ಕದಿಕೆ ಸೇತುವೆಯ ಬಳಿಯಲ್ಲಿ ರಸ್ತೆಯು ತೀವ್ರ ಹದಗೆಟ್ಟಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ತತ್ಕ್ಷಣವೇ ಕಾಮಗಾರಿ ಕೈಗೊಂಡು ರಸ್ತೆಯನ್ನು ದುರಸ್ತಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಳೆಯಂಗಡಿಯಿಂದ ಕದಿಕೆ ಭಂಡಾರ ಮಂದಿ ರದ ತಿರುವಿನಿಂದ ಕದಿಕೆ ಸೇತುವೆಯ ವರೆಗೆ ಒಂದು ಕಿ.ಮೀ. ದೂರದ ರಸ್ತೆಯ ಡಾಮರು ಕಿತ್ತು ಹೋಗಿ, ಜಲ್ಲಿ ರಸ್ತೆಯಾಗಿ ಇದೀಗ ಮಣ್ಣಿನ ರಸ್ತೆಯಾಗಲು ತಯಾರಾಗಿದೆ. ಹಳೆಯಂಗಡಿಯಿಂದ ಬೀಚ್ ಹಾಗೂ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಮತ್ತು ಸಸಿಹಿತ್ಲು ಗ್ರಾಮವನ್ನು ತಲುಪುವ ಏಕೈಕ ಸಂಪರ್ಕ ರಸ್ತೆ ಇದಾಗಿದ್ದು, ಸಾಕಷ್ಟು ವಾಹನಗಳು, ಮೀನುಗಾರರು, ಪ್ರವಾಸಿಗರು, ಭಕ್ತರು, ನಿತ್ಯ ಸಂಚಾರಿಗಳು ಸಂಚರಿಸುತ್ತಾರೆ. ಸಂಜೆಯ ಹೊತ್ತಿನಲ್ಲಿ ಸೇತುವೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವವರೂ ಸಹ ಇದೇ ರಸ್ತೆಯನ್ನು ಅವಲಂಬಿಸಬೇಕಾಗಿದೆ.
ಒಂದು ವಾರ ಕಾಯುತ್ತೇವೆ
ಇದೇ ರಸ್ತೆಯಲ್ಲಿ ಸಂಸದರು, ಶಾಸಕರು, ಜಿಲ್ಲಾಧಿ ಕಾರಿಗಳು ಬೀಚ್ ವೀಕ್ಷಣೆಗೆ ಹಲವಾರು ಬಾರಿ ತೆರಳಿದ್ದರೂ ಸಹ ರಸ್ತೆಯ ಅವ್ಯವಸ್ಥೆಗೆ ಸ್ಪಂದನೆ ಇಲ್ಲ, ರಿûಾ ಚಾಲಕರು ಈ ರಸ್ತೆಯಾಗಿ ಬರಲು ಹಿಂದೇಟು ಹಾಕುತ್ತಾರೆ. ರಾತ್ರಿ ಸಮಯದಲ್ಲಿ ಹಲವಾರು ಬಾರಿ ರಸ್ತೆಯ ಅವ್ಯವಸ್ಥೆಯಿಂದ ಅವಘಡಗಳು ಸಂಭವಿಸಿದೆ. ಕನಿಷ್ಟ ದುರಸ್ತಿ ಮಾಡಲು ಒಂದು ವಾರ ಕಾಯುತ್ತೇವೆ ಇಲ್ಲದಿದ್ದಲ್ಲಿ ಗ್ರಾಮಸ್ಥರೇ ಸೇರಿಕೊಂಡು ಶ್ರಮದಾನದ ಮೂಲಕ ದುರಸ್ತಿ ಮಾಡುತ್ತೇವೆ ಎಂಬುದು ಸ್ಥಳೀಯರ ಅಭಿಪ್ರಾಯ.
ಇದನ್ನೂ ಓದಿ : ಶಿವ ಶಿವ ಎನ್ನದೇ ವಿಧಿಯಿಲ್ಲ; ಸಹಸ್ರ ಲಿಂಗಗಳಿಗೆ ರಕ್ಷಣೆಯಿಲ್ಲ!
ನಡಾವಳಿ ಉತ್ಸವ
ಜಿಲ್ಲೆಯ ಪ್ರಸಿದ್ಧ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ. 17ರಿಂದ ನಡಾವಳಿ ಮಹೋತ್ಸವ ನಡೆಯಲಿದೆ. ಈ ಸಂದರ್ಭ ಸಾವಿರಾರು ಭಕ್ತರು ದೇಗುಲಕ್ಕೆ ಭೇಟಿ ನೀಡುವುದರಿಂದ ಹೆಚ್ಚಾಗಿ ಇದೇ ರಸ್ತೆಯನ್ನು ಬಳಸುವುದರಿಂದ ಕನಿಷ್ಠ ದುರಸ್ತಿಯನ್ನಾದರೂ ಮಾಡಲು ಮನವಿ ಮಾಡಿಕೊಂಡಿದ್ದಾರೆ.
ದುರಸ್ತಿಗೆ ಪ್ರಯತ್ನ
ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ಯೋಜನ ವಿಭಾಗದಿಂದ ಐದು ವರ್ಷದ ಹಿಂದೆ ರಸ್ತೆಯನ್ನು ನಿರ್ಮಿಸಲಾಗಿದೆ. ಇದೀಗ ಈ ರಸ್ತೆಯನ್ನು ಜಿ.ಪಂ.ಗೆ ಇತ್ತೀಚೆಗಷ್ಟೇ ಹಸ್ತಾಂತರಿಸಲಾಗಿದೆ. ರಸ್ತೆಯು ಹದಗೆಟ್ಟಿರುವ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಳ್ಳಲಾಗಿದೆ. ಹೊಸ ರಸ್ತೆ ಸಾಧ್ಯವಾಗದಿದ್ದರೂ ಕನಿಷ್ಟ ವ್ಯವಸ್ಥಿತವಾಗಿ ದುರಸ್ತಿ ಕಾರ್ಯ ನಡೆಸಲು ಪ್ರಯತ್ನ ನಡೆಸಲಾಗುವುದು.
– ಪ್ರಶಾಂತ್ ಆಳ್ವ, ಸಹಾಯಕ ಎಂಜಿನಿಯರ್, ದ.ಕ.ಜಿ.ಪಂ.
– ನರೇಂದ್ರ ಕೆರೆಕಾಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.