ಶಾಸಕರೇ ಮೊದಲು ಕ್ಯಾಂಪಿಗೆ ನೀರು ವ್ಯವಸ್ಥೆ ಒದಗಿಸಿ
Team Udayavani, Mar 5, 2022, 7:20 PM IST
ಕುರುಗೋಡು: ಶಾಸಕರೇ ಮೊದಲು ನಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ಕೊಡಿ ನಂತರ ಸಂಘ ಸಂಸ್ಥೆಯ ಸಮಸ್ಯೆಗಳನ್ನು ಬಗೆಹರಿಸಿ ಎಂದು ಶಾಸಕರನ್ನು ಮಹಿಳೆಯರು ಕೆಲ ನಿಮಿಷಗಳ ಕಾಲ ಚರ್ಚೆಗೆ ತೆಗೆದುಕೊಂಡರು.
ಸಮೀಪದ ಶ್ರೀರಾಮ ನಗರ ಕ್ಯಾಂಪ್ ನಲ್ಲಿ ಶಾಸಕ ಗಣೇಶ್ ಸಿಸಿ ರಸ್ತೆ ಮತ್ತು ಚರಂಡಿಗೆ ಭೂಮಿ ಪೂಜೆ ನೆರೆವೇರಿಸಿದ ನಂತರ ಕ್ಯಾಂಪಿನ ಗ್ರಾಮದ ಮಹಿಳೆಯರು ಶಾಸಕರ ಮುಂದೆ ಸಮಸ್ಯೆಗಳನ್ನು ತೋಡಿಕೊಂಡರು.
ತದನಂತರ ಮಹಿಳೆಯರು ಮಾತನಾಡಿ, ಕ್ಯಾಂಪಿನಲ್ಲಿ 200 ಕುಟುಂಬಗಳು ವಾಸಿಸುತ್ತಿದ್ದು, ಸಾರ್ವಜನಿಕರಿಗೆ ಸರಿಯಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಖಾಸಗಿ ಕುಡಿಯುವ ನೀರಿನ ಘಟಕಕ್ಕೆ ತೆರಳಿ 10 ರೂ ಕೊಟ್ಟು ನೀರು ಸಂಗ್ರಹಿಸಬೇಕಿದೆ ಇದರಿಂದ ಜನರಿಗೆ ತುಂಬಾ ತೊಂದ್ರೆ ಆಗುತ್ತಿದೆ. ಇನ್ನೂ ಬೇಸಿಗೆ ಬಂದಿಲ್ಲ ಆದರೂ ಈಗಲೇ ಇತರ ಸಮಸ್ಯೆ ಕಾಡಿದರೇ ಬೇಸಿಗೆ ಬಂದ ಮೇಲೆ ಇನ್ನಷ್ಟು ಸಮಸ್ಯೆ ಉದ್ಭವಗೊಳ್ಳಲಿದೆ ಆದ್ದರಿಂದ ಕೊಡಲೇ ನೀರಿನ ಸಮಸ್ಯೆ ಬಗೆಹರಿಸಿ ಎಂದು ಮಹಿಳೆಯರು ಶಾಸಕರಿಗೆ ತಿಳಿಸಿದರು.
ಕ್ಯಾಂಪಿನಲ್ಲಿ ವಿವಾಹಗಳು ಜರುಗಿದರೆ, ಜನರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲ ಮತ್ತು ಸಂಘಸಂಸ್ಥೆಗಳು ಕಾರ್ಯಕ್ರಮ ಮಾಡುವುದಕ್ಕೂ ಸೂಕ್ತ ಸ್ಥಳ ವಿಲ್ಲದಾಗಿದೆ ಆದ್ದರಿಂದ ಸಮುದಾಯ ಕೇಂದ್ರ ಕಲ್ಪಿಸಿ ಕೊಡುವಂತೆ ಒತ್ತಾಯ ಮಾಡಿದರು.
ಸರಿಯಾದ ರಸ್ತೆ, ಚರಂಡಿಗಳು ಇಲ್ಲದೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ವಿದ್ಯುತ್ ಸಮಸ್ಯೆ ಬಹಳ ಕಾಡುತ್ತಿದೆ ಇದರ ಬಗ್ಗೆ ಗ್ರಾಪಂ ಇಲಾಖೆಗೆ ತಿಳಿಸಿದರು ಪ್ರಯೋಜನೆ ಇಲ್ಲದಾಗಿದೆ ಎಂದರು.
ಕ್ಯಾಂಪಿನಲ್ಲಿ ಇರುವ ಸ್ತ್ರೀ ಶಕ್ತಿ ಸಂಘಗಳು ಸರಕಾರದ ನೇರ ಸಾಲ ಕ್ಕೆ ಅರ್ಜಿ ಹಾಕಲಾಗಿದ್ದು, ಎಲ್ಲರೂ ಕಡು ಬಡವರು, ನಿರ್ಗತಿಕರು ಇದ್ದಾರೆ ಆದ್ದರಿಂದ ಲೋನ್ ಅನುಮೋದನೆಗೆ ಪಟ್ಟು ಹಿಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ
Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು
Bellary; ಜೈಲಿನಲ್ಲಿಂದು ದರ್ಶನ್ ಐಟಿ ವಿಚಾರಣೆ; ಬಳ್ಳಾರಿಗೆ ಬಂದ ಅಧಿಕಾರಿಗಳು
Darshan ಭೇಟಿಗೆ ಮಾಹಿತಿ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು
Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.