ರೈತರಿಗೆ ವರದಾನ: ತೋಟದ ತೇವಾಂಶ ಕಾಪಾಡುವ ಗೆಣಸಿನ ಬಳ್ಳಿ


Team Udayavani, Mar 5, 2022, 8:02 PM IST

1-dsd

ತೋವಿನಕೆರೆಯ ಜಯಪದ್ಮಮ್ಮ ಅವರ ಅಡಿಕೆ ತೋಟದ ತೇವಾಂಶ ಕಾಪಾಡಲು ಬೆಳೆಸಿರುವ ಗೆಣಸಿನ ಬಳ್ಳಿ

ಕೊರಟಗೆರೆ: ಬೇಸಿಗೆಯಲ್ಲಿ ಅಡಿಕೆ ಮರಗಳ ತೇವಾಂಶವನ್ನು ಕಾಪಾಡಲು ವಿವಿಧ ರೀತಿಯ ಹಸಿರು ಗೊಬ್ಬರದ ಗಿಡಗಳನ್ನು ಬೆಳೆಸುವ ಪದ್ದತಿ, ಈಗಲೂ ತಾಲ್ಲೂಕಿನ ಹಲವು ಗ್ರಾಮಗಳ ರೈತರ ಅಡಿಕೆ ತೋಟಗಳಲ್ಲಿ ಜೀವಂತವಾಗಿದೆ.

ಆರೇಳು ವರ್ಷಗಳಿಂದ ಜಿಲ್ಲೆಯಲ್ಲಿ ಇತರೆ ಯಾವುದೇ ಬೆಳೆಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಅಡಿಕೆ ಸಸಿಗಳ ನಾಟಿ‌ ನಡೆಯುತ್ತದೆ. ಅಡಿಕೆ ಬೆಳೆಗೆ ಇತರೆ ಬೆಳೆಗಳಿಗಿಂತ ಸಮೃದ್ಧವಾದ ನೀರು ಬೇಕು.ಬೇಸಿಗೆ ಕಾಲದಲ್ಲಿ ಅಡಿಕೆ ಬೆಳೆಗೆ ನೀರು ನೀಡುವುದು ಸುಲಭದ ಕೆಲಸವಲ್ಲ. ಬಹಳ ಹಿಂದಿನಿಂದಲೂ ಸ್ಥಳೀಯರು ಸರಳವಾದ ಉಪಯೋಗಕರ ಪರಿಹಾರ ಕ್ರಮಗಳನ್ನು ಹುಡುಕಿಕೊಂಡಿದ್ದಾರೆ.

ರೈತರು ಅಡಿಕೆ ತೋಟದಲ್ಲಿ ಸಿರಿ ಧಾನ್ಯಗಳಾದ ಕೊರಲೆ ಮತ್ತು ಹಾರಕ ಬೆಳೆದು ತೇವಾಂಶವನ್ನು ತೋಟದ ಮಣ್ಣಿನಲ್ಲಿ ಉಳಿಸುವುದು. ಅಳಿಲು ಮತ್ತು ಇಲಿಗಳು ಅಡಿಕೆ ಮರಗಳನ್ನು ಹತ್ತಿ ಅಡಿಕೆ ಪೀಚುಗಳನ್ನು ಕಡಿದು ನೆಲಕ್ಕೆ ಬೀಳಿಸುತ್ತಿದ್ದವು.ಇದನ್ನು ರೈತರು ಗಮನಿಸಿ ಈ ಪ್ರಾಣಿಗಳಿಗೆ ಆಹಾರ ಸಿಗುವಂತೆ ತೋಟದ ನೆಲದಲ್ಲಿ ಸಿರಿ ಧಾನ್ಯ ಬೆಳೆಗಳನ್ನು ಬೆಳೆಯುತ್ತಾರೆ.

ರೈತರು ತಮ್ಮ ತೋಟಗಳಲ್ಲಿ ಅಲಸಂದೆ, ಹೆಸರು , ಸೆಣಬು, ಉದ್ದು ಮತ್ತು ಹುರುಳಿಯನ್ನು ಬೆಳೆಯುತ್ತಾರೆ.ಈ ಬೆಳೆಗಳು ನಾಲ್ಕು ತಿಂಗಳು ಮಾತ್ರ ಇರುತ್ತವೆ. ರೈತರು ಪ್ರತಿವರ್ಷ ಸಿರಿ ಧಾನ್ಯ ಬೀಜಗಳನ್ನು ನಾಟಿ ಮಾಡುವುದನ್ನು ತಪ್ಪಿಸಿಕೊಳ್ಳಲು ಗೆಣಸಿನ ಬಳ್ಳಿಗಳನ್ನು ನಾಟಿ ಮಾಡುವ ಪದ್ದತಿ ಪ್ರಾರಂಭಿಸಿದ್ದಾರೆ.

ಜಯಪದ್ಮಮ್ಮ ಅಡಿಕೆ ತೋಟದ ಮಾಲೀಕರು ತೋವಿನಕೆರೆ.

ಕಳೆದ15 ವರ್ಷದಿಂದ ಅಡಿಕೆ ತೋಟದಲ್ಲಿ ಗೆಣಸಿನ ಬಳ್ಳಿ ಬೆಳೆಸಿದ್ದಾರೆ. ಬೇಸಿಗೆಯಲ್ಲಿ ತೋಟಕ್ಕೆ ಸಾಕಷ್ಟು ತೃಪ್ತಿಕರವಾಗಿ ನೀರು ಕೊಡಲು ಸಾಧ್ಯವಾಗದೇ ಇಳುವರಿ ಮೇಲೆ ಪರಿಣಾಮ ಬೀರಿತ್ತು. ಗೆಣಸಿನ ಬಳ್ಳಿ ಯನ್ನು ನಾಟಿ‌ ಮಾಡಿದ್ದು,ಬಳ್ಳಿಯೂತೋಟದ ಮಧ್ಯೆ 2-3ಅಡಿ ಎತ್ತರಕ್ಕೆ ಬೆಳೆದಿದೆ. ಕಡಿಮೆ ಪ್ರಮಾಣದಲ್ಲಿ ನೀರು ನೀಡಿದರೂ 10 ದಿನಗಳವರೆಗೆ ತೇವಾಂಶವಿರುತ್ತದೆ. ತಿಂಗಳಿಗೆ ಎರಡು ಮೂರು ಸಲ ನೀರು ಹಾಯಿಸುತ್ತೇವೆ.ಬೇಸಿಗೆ ಮುಗಿದ ಕೂಡಲೇ ಯಂತ್ರದ ಮೂಲಕ ಕಟಾವು ಮಾಡಿ ಅಲ್ಲಿಯೇ ಬಿಡುತ್ತೇವೆ ಎನ್ನುತ್ತಾರೆ ತೋಟದ ಮಾಲೀಕರು.

ಅರಣಾ.ಆರ್. ರೈತ ಮಹಿಳೆ ಯರಬಳ್ಳಿ

ಅಡಿಕೆ ತೋಟದಲ್ಲಿ ಓಡಾಡಿದರೆ ಮಣ್ಣು ಮೃದುವಾಗಿರುವ ಅನುಭವವಾಗುತ್ತದೆ. ಗೆಣಸುಗಳನ್ನು ನೆಲದಲ್ಲಿ ಬಿಡುವುದರಿಂದ ಇಲಿ, ಹೆಗ್ಗಣ ತಿನ್ನಲು ಹುಡುಕುವ ಸಮಯದಲ್ಲಿ ಇಡೀ ತೋಟದ ಮಣ್ಣನ್ನು ತಿರುವಿ ಹಾಕುತ್ತವೆ.ಶೂನ್ಯ ಖರ್ಚಿನಲ್ಲಿ ಉಳುಮೆ ಮಾಡಿದಂತೆ ಆಯಿತು ಎನ್ನುತ್ತಾರೆ.

 

ಸಿದ್ದರಾಜು.ಕೆ.

ಟಾಪ್ ನ್ಯೂಸ್

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.