ಉತ್ತರ ಪ್ರದೇಶ : ಕೊನೇ ಹಂತದ ಪ್ರಚಾರಕ್ಕೆ ತೆರೆ
Team Udayavani, Mar 6, 2022, 7:15 AM IST
ಲಕ್ನೋ/ಇಂಫಾಲ: ಏಳು ಹಂತಗಳಲ್ಲಿ ನಡೆಯುತ್ತಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕೊನೇ ಹಂತದ ಮತದಾನ ಮಾ.7ಕ್ಕೆ ಮುಕ್ತಾಯವಾಗಲಿದೆ.
ಅದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿರುಸಿನ ಬಹಿರಂಗ ಪ್ರಚಾರ ಶನಿವಾರ ಕೊನೆಗೊಂಡಿದೆ. ಆಜಂಗಢ, ಮೌ, ಜೌನ್ಪುರ, ಘಾಜಿಪುರ್, ಚಂದೌಲಿ, ವಾರಾಣಸಿ, ಮಿರ್ಜಾಪುರ, ಭದೋಯ್ ಮತ್ತು ಸೋನಾಭದ್ರಾ ಜಿಲ್ಲೆಗಳ 54 ವಿಧಾನಸಭಾ ಕ್ಷೇತ್ರಗಳಲ್ಲಿ ಸೋಮವಾರ ಮತದಾನ ನಡೆಯಲಿದೆ. ಒಟ್ಟು 613 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾ.10ರಂದು ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.
ಆಡಳಿತ ಪರ: ಪ್ರಚಾರದ ಕೊನೇ ದಿನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿನ ಮತದಾನ ಉತ್ತಮ ಆಡಳಿತದ ಪರವಾಗಿ ಇರಲಿದೆ ಎಂದು ಬಣ್ಣಿಸಿದ್ದಾರೆ. ವಾರಾಣಸಿಯ ಖಜುರಿ ಗ್ರಾಮ ದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿನ ವಿಪಕ್ಷಗಳು ಸ್ವತ್ಛ ಭಾರತ ಮತ್ತು ವೋಕಲ್ ಫಾರ್ ಲೋಕಲ್ ಎಂಬ ಕೇಂದ್ರ ಸರಕಾರದ ಅಭಿಯಾನವನ್ನು ಕೆಲವರು ಲೇವಡಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಉಕ್ರೇನ್ನಿಂದ ವಿದ್ಯಾರ್ಥಿಗಳನ್ನು ಪಾರು ಮಾಡಿ ಕರೆತರುವ ವಿಚಾರದಲ್ಲಿ ಕೂಡ ವಿಪಕ್ಷಗಳು ಕೊಂಕು ಹುಡುಕುವುದರಲ್ಲಿಯೇ ಕಾಲ ಕಳೆಯುತ್ತಿವೆ ಎಂದು ಆಕ್ಷೇಪ ಮಾಡಿದ್ದಾರೆ. ಕಾಂಗ್ರೆಸ್ ಹೆಸರೆತ್ತದೆ ಟೀಕೆ ಮಾಡಿದ ಪ್ರಧಾನಿ, ಖಾದಿ ಹೆಸರು ಹೇಳಿಕೊಂಡು ರಾಜಕೀಯ ಮಾಡಿದ ಪಕ್ಷವೊಂದು ಈಗ ಅದರ ಹೆಸರು ಹೇಳಲು ಕೂಡ ಹಿಂದೇಟು ಹಾಕುತ್ತಿದೆ ಎಂದರು.
ಎಸ್ಪಿ ಸೇರ್ಪಡೆ
ಕೊನೇ ಹಂತದ ಮತದಾನಕ್ಕೆ ಮುನ್ನವೇ ಅಲಹಾಬಾದ್ ಲೋಕಸಭಾ ಕ್ಷೇತ್ರದ ಸಂಸದೆ, ಬಿಜೆಪಿ ನಾಯಕಿ ರೀಟಾ ಬಹುಗುಣ ಜೋಷಿ ಅವರ ಪುತ್ರ ಮಾಯಂಕ್ ಅವರು ಸಮಾಜವಾದಿ ಪಕ್ಷ ಸೇರಿದ್ದಾರೆ. ಆಜಂಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಬಿಜೆಪಿ ನಾಯಕಿಯ ಪುತ್ರನ ಪಕ್ಷ ಸೇರ್ಪಡೆಯ ವಿಚಾರ ಪ್ರಕಟಿಸಿದರು.
ಮಣಿಪುರ: ಶೇ.76.4 ಮತ
ಮಣಿಪುರದಲ್ಲಿ ಶನಿವಾರ ನಡೆದ ಎರಡನೇ ಹಂತದ ಮತದಾನದಲ್ಲಿ ಶೇ.76.04 ಹಕ್ಕು ಚಲಾವಣೆ ಯಾಗಿದೆ. ಇದರ ಜತೆಗೆ ಸಣ್ಣಪುಟ್ಟ ಹಿಂಸಾಚಾರಗಳೂ ನಡೆದಿವೆ. ಆರು ಜಿಲ್ಲೆಗಳ ಒಟ್ಟು 22 ವಿಧಾನಸಭಾ ಕ್ಷೇತ್ರ ಗಳಲ್ಲಿ ಮತದಾನ ನಡೆದಿತ್ತು. ಸೇನಾಪತಿ ಜಿಲ್ಲೆ ಯಲ್ಲಿ ಶೇ.82.02 ಮತದಾನವಾಗಿದೆ. ಸೇನಾಪತಿ ಜಿಲ್ಲೆಯ ನಗ್ಮಾಜು ಎಂಬ ಮತಗಟ್ಟೆಯಲ್ಲಿ ಬಿಜೆಪಿ ಬೆಂಬಲಿಗನೊಬ್ಬನನ್ನು ಗುಂಡು ಹಾರಿಸಿ ಕೊಲ್ಲಲಾ ಗಿದೆ. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಬಿಜೆಪಿಯ ಉಚ್ಛಾಟಿತ ಅಭ್ಯರ್ಥಿಯ ಮನೆ ಮುಂಭಾಗದಲ್ಲಿ ಕಚ್ಚಾ ಬಾಂಬ್ ಅನ್ನು ಸ್ಫೋಟಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ಜಾಮೀನು
Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ
UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್
MUST WATCH
ಹೊಸ ಸೇರ್ಪಡೆ
ಟಿಕೆಟ್ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್
MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್
INDvsNZ: ಟೆಸ್ಟ್ ಕ್ರಿಕೆಟ್ ನಲ್ಲಿ 9000 ರನ್ ಪೂರೈಸಿದ ವಿರಾಟ್ ಕೊಹ್ಲಿ
ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ಜಾಮೀನು
INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.