ಅರಣ್ಯ ಅಧಿಕಾರಿಗಳಿಂದ ಕೃಷಿ ಭೂಮಿ ತೆರವು ಕಾರ್ಯಾಚರಣೆ


Team Udayavani, Mar 7, 2022, 4:35 PM IST

ಅರಣ್ಯ ಅಧಿಕಾರಿಗಳಿಂದ ಕೃಷಿ ಭೂಮಿ ತೆರವು ಕಾರ್ಯಾಚರಣೆ

ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮದ ಶಾರದಮ್ಮ ದಿ.ದೊಡ್ಡತಿಮ್ಮಯ್ಯ ಕೃಷಿ ಕುಟುಂಬವು ಸರ್ವೆ ನಂ 116ರ ಭೂಮಿಯಲ್ಲಿ ಕಳೆದನಲವತ್ತು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದ ಜಮೀನನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದೆ ಎಂದು ವಲಯಅರಣ್ಯಾಧಿಕಾರಿ ದುಗ್ಗಪ್ಪ ಹಾಗೂ ಸಿಬ್ಬಂದಿ ಪೋಲೀಸ್‌ ಅಧಿಕಾರಿಗಳ ಸಮ್ಮುಖದಲ್ಲಿ ಕೃಷಿ ಭೂಮಿಯನ್ನು ತೆರವುಗೊಳಿಸಿದ ಘಟನೆ ಭಾನುವಾರ ನಡೆದಿದೆ.

ಮಾರಣ ಹೋಮ: ಜಮೀನಿನ ಒತ್ತುವರಿ ತೆರವು ಮಾಡುವಾಗ ಸುಮಾರು 100ಕ್ಕೂಅಡಕೆ ಮರಗಳು ಹಾಗೂ 15ಕ್ಕೂ ಹೆಚ್ಚುತೆಂಗಿನ ಮರಗಳು ಧರೆಗುರುಳಿ ಅವುಗಳಮಾರಣ ಹೋಮ ನಡೆದಿದೆ. ಒಟ್ಟಾರೆ ಸುಮಾರು 500 ಕ್ಕೂ ಅಧಿಕ ಅಡಕೆ ಮರಗಳು ಹಾಗೂ 150 ಕ್ಕೂ ಅಧಿಕ ತೆಂಗಿನಮರಗಳನ್ನು ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿವೆ ಎಂದು ವಶಪಡಿಸಿಕೊಳ್ಳಲಾಗಿದೆ.

ಮಾನವೀಯತೆ ಮರೆತ ಅರಣ್ಯಾಧಿಕಾರಿಗಳು: ತೆರವು ಸಂದರ್ಭದಲ್ಲಿ ಅರಣ್ಯಾಧಿಕಾರಿಗಳನ್ನು ಒಂದು ದಿನ ಸಮಯಾವಕಾಶ ನೀಡಿ ಕೋರ್ಟ್‌ನಿಂದ ತಡೆಯಾಜ್ಞೆ ಬಂದಿದೆ. ಅದರ ಪ್ರತಿಯನ್ನು ಸೋಮವಾರ ನಿಮಗೆ ನೀಡುತ್ತೇನೆ ಎಂದು ರೈತಮಹಿಳೆ ಶಾರದಮ್ಮ ಪರಿಪರಿಯಾಗಿಅಂಗಲಾಚಿ ಬೇಡಿಕೊಂಡರೂಕೇಳಲಿಲ್ಲ.

ಅರಣ್ಯ ಸೂಚಿ ಆ್ಯಪ್‌ನಂತೆ ತೆರವು: ಒತ್ತುವರಿ ಜಮೀನಿನಲ್ಲಿ ಅರಣ್ಯ ಇಲಾಖೆಗೆಸೂಚಿಸಿರುವಂತೆ ಅರಣ್ಯ ಸೂಚಿ ಆ್ಯಪ್‌ನಕ್ಷೆಯನ್ನು ತೋರಿಸಿದ್ದಂತೆ ಅರಣ್ಯಾಧಿಕಾರಿಗಳು ಮೊಬೈಲ್‌ನಲ್ಲಿ ನಕ್ಷೆ ಹಿಡಿದುತೆರವು ಕಾರ್ಯಾಚರಣೆ ಮೂಲಕ ಗಡಿಗುರುತಿಸುವ ಕೆಲಸ ಮಾಡುತ್ತಿರುವುದುಕಂಡುಬಂದಿತ್ತು.

ಹಲವು ಅನುಮಾನಗಳ ಸುತ್ತ: ಕಳೆದ ಹತ್ತುವರ್ಷಗಳ ಹಿಂದೆ ಅರಣ್ಯ ಇಲಾಖಾಧಿಕಾರಿಗಳು ಸರ್ವೆ ನಂ. 116 ರ ಮೀಸಲು ಅರಣ್ಯ ಪ್ರದೇಶದ ಸರ್ವೆ ಮಾಡಿಸಿಗಡಿಭಾಗದ ಕಲ್ಲನ್ನು ನೆಟ್ಟಿರುವುದುಕಂಡುಬಂದಿದೆ. ಇತ್ತೀಚೆಗೆ ಸಿಮೆಂಟ್‌ಕಂಬವನ್ನು ನಿಲ್ಲಿಸಿ ಬಣ್ಣವನ್ನು ಬಳಿದು ಅರಣ್ಯಇಲಾಖೆಯ ಗಡಿಭಾಗದ ನಂಬರ್‌ ಹಾಕಿರುವುದು ಕಂಡುಬಂದಿದೆ.

ಗುಬ್ಬಿ ತಾಲೂಕಿನ ಅಮ್ಮನಘಟ್ಟ ಗ್ರಾಮದ ಸರ್ವೆ ನಂಬರ್‌ 116 ರಲ್ಲಿ 401 ಎಕರೆಯಷ್ಟುಮೀಸಲು ಅರಣ್ಯ ಪ್ರದೇಶವಿದೆ. ರೈತರು ಅರಣ್ಯಭೂಮಿಯನ್ನು ಅತಿಕ್ರಮಣ ಮಾಡಿರುವುದರಿಂದನಮ್ಮ ಸಿಬ್ಬಂದಿ ತೆರವು ಕಾರ್ಯಾಚರಣೆ ಮಾಡಿ ಅರಣ್ಯದ ಗಡಿ ಗುರುತಿಸುತ್ತಿದ್ದಾರೆ. -ಡಿಎಫ್ಒ, ರಮೇಶ್‌

ಕಳೆದ ನಲವತ್ತು ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದನಮಗೆ ಈ ಘಟನೆಯಿಂದ ಆಘಾತಕ್ಕೆಒಳಗಾಗಿದ್ದೇವೆ. ಹತ್ತು ವರ್ಷಗಳ ಹಿಂದೆಅರಣ್ಯಾಧಿಕಾರಿಗಳು ಬಂದು ಗಡಿಭಾಗದ ಕಲ್ಲನ್ನುಹಾಕಿದ್ದು, ಈಗ ದಿಢೀರ್‌ ಜಮೀನು ತೆರವುಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು. -ಶಾರದಮ್ಮ, ರೈತ ಮಹಿಳೆ

ಟಾಪ್ ನ್ಯೂಸ್

Rain-12

Rain Alert: ರಾಜ್ಯದ ಈ ಏಳು ಜಿಲ್ಲೆಗಳಲ್ಲಿ ಅ.21ರವರೆಗೆ ಭಾರಿ ಮಳೆ ಸಾಧ್ಯತೆ

1-wqewqew

Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ

1-asss-bg

Baba Siddique;ಪ್ರಕರಣ ರಾಜಕೀಯಗೊಳಿಸಬೇಡಿ: ನ್ಯಾಯಬೇಕು ಎಂದ ಪುತ್ರ

Emergency

Film Censor: ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೊನೆಗೂ ಸಿಕ್ಕಿತು ಸೆನ್ಸಾರ್‌ ಪ್ರಮಾಣಪತ್ರ!

1-cccc

Haryana; ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಕ್ಯಾಪ್ಟನ್ ಅಜಯ್ ಯಾದವ್

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Congress Govt.,: ವಾಲ್ಮೀಕಿ ಸಮಾಜದ ಕ್ಷಮೆ ಕೇಳಲಿ: ಆರಗ ಜ್ಞಾನೇಂದ್ರ

Vimana 2

Hoax bomb calls; ಕ್ರಮ ತೆಗೆದುಕೊಳ್ಳಲಾಗುತ್ತಿದೆ:ಸಚಿವ ರಾಮ್ ಮೋಹನ್ ನಾಯ್ಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jeeda

Tumakuru: ದೇವರಾಯನದುರ್ಗದಲ್ಲಿ ಹೊಸ ಮಾದರಿ ಜೇಡ ಪತ್ತೆ

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

Kunigal: ಬೈಕ್ ಗೆ ಮಿನಿ ಗೂಡ್ಸ್ ವಾಹನ ಡಿಕ್ಕಿ… ಪಿಗ್ಮಿ ಸಂಗ್ರಹಗಾರ ಮೃತ್ಯು

3-tumkur-dasara

Dasara: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ

12-koratagere

Koratagere: ಮೈಸೂರು ದಸರಾದಲ್ಲಿ ಸಿದ್ದರಬೆಟ್ಟ ಸ್ತಬ್ದಚಿತ್ರ

4

Koratagere: ಕುಸಿದು ಬಿದ್ದು ವಿದ್ಯಾರ್ಥಿ ಸಾವು; ಹೃದಯಾಘಾತ ಶಂಕೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Rain-12

Rain Alert: ರಾಜ್ಯದ ಈ ಏಳು ಜಿಲ್ಲೆಗಳಲ್ಲಿ ಅ.21ರವರೆಗೆ ಭಾರಿ ಮಳೆ ಸಾಧ್ಯತೆ

3

Puttur: ರಸ್ತೆ ಬದಿ ನಿಂತಿದ್ದ ಬಾಲಕನ ಬಾಲಕನ ಮೇಲೆ ಅಪರಿಚಿತರಿಂದ ಹಲ್ಲೆ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Minister Shivaraj Tangadagi: ಶೈಕ್ಷಣಿಕ, ಆರ್ಥಿಕ ಗಣತಿಗೆ ವಿರೋಧ ಸಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.