ಪಂಚರಾಜ್ಯ ಫ‌ಲಿತಾಂಶದಿಂದ ರಂಗೇರಿದ್ದ ಭಾರತ : ಗೆದ್ದವರ ನರ್ತನ, ಸೋತವರ ಮೌನ


Team Udayavani, Mar 11, 2022, 6:50 AM IST

ಪಂಚರಾಜ್ಯ ಫ‌ಲಿತಾಂಶದಿಂದ ರಂಗೇರಿದ್ದ ಭಾರತ : ಗೆದ್ದವರ ನರ್ತನ, ಸೋತವರ ಮೌನ

ಗುರುವಾರದ ಬಿರುಬಿಸಿಲಿನ ಮಧ್ಯಾಹ್ನ. ದೇಶದುದ್ದಗಲ ಪ್ರಮುಖ ನಗರಗಳ ಬೀದಿಗಳಲ್ಲಿ ರಾಜಕೀಯದ ದಿಬ್ಬಣದ್ದೇ ಹಿಮ್ಮೇಳ. ಅಲ್ಲಲ್ಲಿ ಪಟಾಕಿಗಳ ಸದ್ದು. ಮೋದಿ- ಯೋಗಿ ಅವರ ಚಿತ್ರಗಳನ್ನು ಹಿಡಿದ ಗುಂಪುಗಳು, ಕಮಲಧ್ವಜವನ್ನು ಅತ್ತಿಂದಿತ್ತ ಪಟಪಟಿಸುತ್ತಾ “ಭಾರತ್‌ ಮಾತಾ ಕೀ ಜೈ’ ಕೂಗುಗಳನ್ನು ಮೊಳಗಿಸುತ್ತಿದ್ದವು. ಇನ್ನೊಂದೆಡೆ ಪೊರಕೆ ಚಿತ್ರ ಹೊತ್ತ ಆಪ್‌ನ ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಅರವಿಂದ ಕೇಜ್ರಿವಾಲರಿಗೆ ಜೈಕಾರ ಕೂಗುತ್ತಿದ್ದರು.

ಜಮ್ಮುವಿನ ಬೀದಿಗಳಿಂದ ಕನ್ಯಾಕುಮಾರಿಯ ಕಡಲ ತಡಿಯವರೆಗೆ, ಕಚ್‌ನಿಂದ ಕೋಲ್ಕತ್ತಾದವರೆಗೆ ಬಿಜೆಪಿ ಕಾರ್ಯಕರ್ತರ ನೃತ್ಯಸಡಗರ ಗಮನ ಸೆಳೆದಿತ್ತು. ಅಯೋಧ್ಯೆಯಲ್ಲಿ ಸಾಧು- ಸಂತರ ಜೈಕಾರದ ಘೋಷಣೆ ಸರಯೂ ತೀರದ ಸಂಭ್ರಮವನ್ನು ರಂಗೇರಿಸಿತ್ತು. ಲಖನೌದ ಬೀದಿಗಳು ಕೇಸರಿ ಹೊದ್ದಂತೆ ರಾರಾಜಿಸುತ್ತಿದ್ದವು. ಜೆಸಿಬಿಗಳ ಮೇಲೆ ಕುಳಿತು ಸಂಭ್ರಮ ಹೊರಹಾಕುತ್ತಿದ್ದ ಕೇಸರಿಪಡೆ ಗಮನ ಸೆಳೆದಿತ್ತು.

ಅತ್ತ ಪಂಜಾಬ್‌ನ ಅಮೃತ್‌ಸರದಲ್ಲಿ “ಪೊರಕೆ ಡ್ಯಾನ್ಸ್‌’ ಅಮೋಘವಾಗಿತ್ತು. ಕೇಜ್ರಿವಾಲ್‌ರ ಚಿತ್ರವಿದ್ದ ದೊಡ್ಡ ದೊಡ್ಡ ಬಾವುಟಗಳನ್ನು ಹಿಡಿದು ಆಪ್‌ ಕಾರ್ಯಕರ್ತರು ಹರ್ಷ ಪ್ರಕಟಿಸಿದ್ದರು.

ಇದನ್ನೂ ಓದಿ:ಗುಪ್ತಚರ ವಿಭಾಗಕ್ಕೆ ವಿಶೇಷ ನೇಮಕಾತಿ: ಆರಗ ಜ್ಞಾನೇಂದ್ರ

ಸೋತವರ ಪಾಡು ಹೇಳತೀರದು!
ಇದು ಗೆದ್ದವರ ಕಥೆಯಾದರೆ, ಸೋತವರ ಪಾಡಂತೂ ಕೇಳುವುದೇ ಬೇಡ. ಒಂದು ಕಡೆಯಾದರೂ ಕಾಂಗ್ರೆಸ್‌ ಗೆದ್ದೇ ಗೆಲ್ಲುತ್ತೆ ಅಂತ ಕೈ ಪಕ್ಷದ ಬಾವುಟಗಳನ್ನು ಮಾರಾಟಕ್ಕೆ ತಂದಿದ್ದ ಕಾರ್ಯಕರ್ತ, ಫ‌ಲಿತಾಂಶ ಪ್ರಕಟಗೊಂಡ ಕೂಡಲೇ ಎಲ್ಲವನ್ನೂ ಬೀದಿಯಲ್ಲೇ ಬಿಟ್ಟು ಕಣ್ಮರೆಯಾಗಿದ್ದ. ಕೈ ಧುರೀಣರ ಭಾವಚಿತ್ರಗಳ ಮುಂದೆ ಆ ಬಾವುಟಗಳು ಅನಾಥವಿದ್ದಂತೆ ತೋರುತ್ತಿದ್ದವು. ಲಖನೌದಲ್ಲಿನ ಬಿಎಸ್ಪಿ, ಎಸ್ಪಿ, ಆರ್‌ಜೆಡಿ ಪಕ್ಷದ ಕಚೇರಿಗಳು ಕಾರ್ಯಕರ್ತರಿಲ್ಲದೆ ಭಣಗುಟ್ಟುತ್ತಿದ್ದ ದೃಶ್ಯ ಕಂಡುಬಂತು.

ಸೋತ ನಾಯಕರು ಬಂಗಲೆಗಳಾಚೆ ಕಾಲಿಡಲಿಲ್ಲ. ಗೆದ್ದವರು ಪಕ್ಷದ ಕಾರ್ಯಕರ್ತರ ನಡುವೆ ಸಿಹಿ ಹಂಚಿ, ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಟಾಪ್ ನ್ಯೂಸ್

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

“Koragajja” Movie producer gifted a car to the director

Kannada Film; ʼಕೊರಗಜ್ಜʼ ನಿರ್ದೇಶಕರಿಗೆ ಕಾರ್‌ ಗಿಫ್ಟ್ ಮಾಡಿದ ನಿರ್ಮಾಪಕ

3-sedam

Sedam: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಆರೋಪಿ ಬಂಧನ

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

FIR: ವಾಟ್ಸಾಪ್ ನಿರ್ದೇಶಕರ ವಿರುದ್ದ ಎಫ್‌ಐಆರ್ ಹಾಕಿದ ಗುರುಗ್ರಾಮ್‌ ಪೊಲೀಸರು

1-ATM

ATM ದರೋಡೆಕೋರರ ಬೆನ್ನತ್ತಿ ರೋಚಕ ಕಾರ್ಯಾಚರಣೆ

rahul gandhi

Ayodhya; ನಾಚ್‌, ಗಾನಾ ಮಂದಿರ ಉದ್ಘಾಟನೆ: ರಾಹುಲ್‌ ಗಾಂಧಿ ಟೀಕೆ

congress

Haryana ಅನ್ನದಾತರ ಕಲ್ಯಾಣಕ್ಕೆ ಆಯೋಗ ರಚನೆ: ಕಾಂಗ್ರೆಸ್‌ ವಾಗ್ಧಾನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ

Ibbani Tabbida Ileyali From 50 Screen to 200 Screen…

Ibbani Tabbida Ileyali 50 ಸ್ಕ್ರೀನ್‌ನಿಂದ 200 ಸ್ಕ್ರೀನ್‌ವರೆಗೆ…

Agra: A woman policewoman dressed as a tourist and roamed around late at night

Agra: ಪ್ರವಾಸಿಗರಂತೆ ವೇಷ ಧರಿಸಿ ತಡರಾತ್ರಿ ಓಡಾಡಿದ ಮಹಿಳಾ ಪೋಲೀಸ್; ಮಂದೆ ಆಗಿದ್ದೇನು?

6-hangyo-bigg-boss

Hangyo Ice Cream: ಬಿಗ್‌ಬಾಸ್‌ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್‌ಕ್ರೀಂ!

5-

Mangaluru: ಸೆನ್‌ ಪೊಲೀಸ್‌ ಠಾಣೆಗಳು ಮೇಲ್ದರ್ಜೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.