ಸ್ಯಾಂಡಲ್‌ ವುಡ್‌ ಗೆಲುವಿನ ಓಟ…; ಮೀಡಿಯಂ ಬಜೆಟ್‌ ಚಿತ್ರಗಳ ಭರ್ಜರಿ ಕಲೆಕ್ಷನ್‌!


Team Udayavani, Mar 11, 2022, 12:08 PM IST

ಸ್ಯಾಂಡಲ್‌ ವುಡ್‌ ಗೆಲುವಿನ ಓಟ…; ಮೀಡಿಯಂ ಬಜೆಟ್‌ ಚಿತ್ರಗಳ ಭರ್ಜರಿ ಕಲೆಕ್ಷನ್‌!

ಕನ್ನಡ ಚಿತ್ರರಂಗದ ಖುಷಿಯಾಗಿದೆ. ಸಿನಿಮಾ ಮಂದಿಯ ಮೊಗದಲ್ಲಿ ನಗು ಮೂಡಿದೆ. ಅದಕ್ಕೆ ಕಾರಣ ಇತ್ತೀಚೆಗೆ ಸಿಗುತ್ತಿರುವ ಗೆಲುವು. ಬಿಡುಗಡೆಯಾದ ಸಿನಿಮಾಗಳು ಗೆಲುವಿನ ದಾರಿಯಲ್ಲಿ ಸಾಗುತ್ತಿರುವುದರಿಂದ ಇದು ಮತ್ತೂಂದಿಷ್ಟು ಮಂದಿಗೆ ಸ್ಫೂರ್ತಿಯಾಗುತ್ತಿದೆ. ಒಂದು ಗೆಲುವು ಅನೇಕರಿಗೆ ವಿಶ್ವಾಸವನ್ನು ತುಂಬುವುದರಲ್ಲಿ ಎರಡು ಮಾತಿಲ್ಲ. ಸದ್ಯ ಕನ್ನಡದಲ್ಲಿ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿವೆ. ಬಿಡುಗಡೆ ಯಾದ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕ ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮೂಲಕ ಯಶಸ್ಸು ಸಿಗುತ್ತಿದೆ.

ಇತ್ತೀಚೆಗೆ ಬಿಡುಗಡೆಯಾದ “ಗರುಡ ಗಮನ ವೃಷಭ ವಾಹನ’, “ಬಡವ ರಾಸ್ಕಲ್‌’, “ರೈಡರ್‌’, “ಸಲಗ’, “ಸಖತ್‌’, “ಬೈ ಟು ಲವ್‌’, “ಲವ್‌ ಮಾಕ್ಟೇಲ್‌-2′, “ಏಕ್‌ ಲವ್‌ ಯಾ’, “ಓಲ್ಡ್‌ಮಾಂಕ್‌’… ಗೆಲುವಿನ ನಗೆ ಬೀರಿದ ಸಿನಿಮಾಗಳ ಪಟಿ ಬೆಳೆಯುತ್ತಲೇ ಹೋಗುತ್ತದೆ. ಅದರಲ್ಲೂ ಕಡಿಮೆ ಬಜೆಟ್‌ನಲ್ಲಿ ಕಂಟೆಂಟ್‌ ಇಟ್ಟುಕೊಂಡು ಬಂದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲ್ಲುವ ಮೂಲಕ ಚಿತ್ರರಂಗಕ್ಕೆ ಬರುವ ಹೊಸಬರಿಗೆ ಪ್ರೇರಣೆಯಾಗುತ್ತಿವೆ. ಕೋವಿಡ್‌ನಿಂದಾಗಿ ನಲುಗಿ ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಇಂತಹ ಇನ್ನಷ್ಟು ಗೆಲುವುಗಳ ಅಗತ್ಯವಿದೆ.

ಇಲ್ಲಿ ಗಮನಿಸಬೇಕಾದ ಮತ್ತೂಂದು ಪ್ರಮುಖ ಅಂಶವೆಂದರೆ ದೊಡ್ಡ ಸ್ಟಾರ್‌ ಹಾಗೂ ಬಿಗ್‌ ಬಜೆಟ್‌ ಅಲ್ಲದ ಸಿನಿಮಾಗಳು ಹಿಟ್‌ ಆಗುವ ಜೊತೆಗೆ ಕೋಟಿ ಕೋಟಿ ಬಾಚುತ್ತಿವೆ. ಅದಕ್ಕೆ ಉದಾಹರಣೆಯಾಗಿ ಹೇಳಬೇಕಾದರೆ ಡಾರ್ಲಿಂಗ್‌ ಕೃಷ್ಣ ನಟನೆಯ “ಲವ್‌ ಮಾಕ್ಟೇಲ್‌’, ರಾಜ್‌ ಬಿ ಶೆಟ್ಟಿಯ “ಗರುಡ ಗಮನ ವೃಷಭ ವಾಹನ’, ಡಾಲಿ ಧನಂಜಯ್‌ ನಟನೆಯ “ಬಡವ ರಾಸ್ಕಲ್‌’… ಹೀಗೆ ಇನ್ನೂ ಒಂದಷ್ಟು ಚಿತ್ರಗಳು ಈ ಬಾರಿ ಕಲೆಕ್ಷನ್‌ ವಿಷಯದಲ್ಲಿ ಗಮನ ಸೆಳೆದಿವೆ. ಹಾಗೆ ನೋಡಿದರೆ ಈ ಸಿನಿಮಾಗಳು ಬಿಗ್‌ ಬಜೆಟ್‌ ಸಿನಿಮಾಗಳೇನಲ್ಲ. ಸಿನಿಮಾದ ಕಥೆಗೆ ಏನು ಬೇಕೋ, ಅದನ್ನ ನೀಟಾಗಿ ಕಟ್ಟಿಕೊಟ್ಟು, ಪ್ರೇಕ್ಷಕರ ಮುಂದೆ ತರಲಾಗಿತ್ತು. ಆದರೆ, ಚಿತ್ರದಲ್ಲಿನ ಕಂಟೆಂಟ್‌ ಮಜವಾಗಿತ್ತು. ಇವತ್ತಿನ ಪ್ರೇಕ್ಷಕರಿಗೆ ಬೇಕಾಗಿರೋದು, ಕಂಟೆಂಟ್‌ ಇಲ್ಲದ ಕೋಟಿ ಕೋಟಿ ಹಾಕಿ ನಿರ್ಮಿಸಿದ ಚಿತ್ರಗಳಲ್ಲ. ಬದಲಾಗಿ, ಎರಡು ಚಿತ್ರಮಂದಿರದಲ್ಲಿ ನೀಟಾಗಿ ಕೂರಿಸುವ ಬೋರ್‌ ಆಗದಂತೆ ಹಿಡಿದಿಡುವ ಸಿನಿಮಾಗಳು. ಇಷ್ಟನ್ನು ಕೊಟ್ಟರೆ ಪ್ರೇಕ್ಷಕ ಖುಷಿಯಿಂದ ಸಿನಿಮಾವನ್ನು ಕಣ್ತುಂಬಿಕೊಂಡು “ಗೆಲುವಿನತ್ತ’ ಹಾದಿ ಮಾಡಿಕೊಡುತ್ತಾನೆ.

ಇದನ್ನೂ ಓದಿ:‘ಜೇಮ್ಸ್‌’ ಟು ‘ತೋತಾಪುರಿ’; ಬೇಸಿಗೆಯಲ್ಲಿ ಮನರಂಜನೆಯ ಮಹಾ ಪರ್ವ

ಹಾಗೆ ನೋಡಿದರೆ ಸದ್ಯ ಕನ್ನಡ ಚಿತ್ರರಂಗಕ್ಕೆ ಈ ತರಹದ ಸಿನಿಮಾಗಳ ಗೆಲುವಿನ ಅಗತ್ಯವಿದೆ. ಸ್ಟಾರ್‌ ಸಿನಿಮಾಗಳ ಗೆಲುವು ಚಿತ್ರರಂಗಕ್ಕೆ ಎಷ್ಟು ಮುಖ್ಯವೋ, ಈ ತರಹದ ಮೀಡಿಯಂ ಬಜೆಟ್‌ ಸಿನಿಮಾಗಳ, ನಟರ ಸಿನಿಮಾಗಳ ಗೆಲುವು ಕೂಡಾ ಅಷ್ಟೇ ಮುಖ್ಯ. ಸ್ಟಾರ್‌ಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಾರೆ, ಈ ತರಹ ಆಗುವುದರಿಂದ ಚಿತ್ರರಂಗದ ಗೆಲುವಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಜೊತೆಗೆ ಸ್ಟಾರ್‌ಗಳು ವರ್ಷಕ್ಕೆರಡು ಸಿನಿಮಾ ಮಾಡಬೇಕೆಂಬ ಒತ್ತಾಯ ಕೂಡಾ ಇದೆ. ಹೀಗಿರುವಾಗ ಬಿಗ್‌ ಸ್ಟಾರ್‌ ಸಿನಿಮಾಗಳ ಜೊತೆ ಇತರ ನಟರ ಹಾಗೂ ಮೀಡಿಯಂ ಬಜೆಟ್‌ ಚಿತ್ರಗಳು ಗೆಲ್ಲುವುದರಿಂದ ನಿರ್ಮಾಪಕರು ಕೂಡಾ ಈ ತರಹದ ಸಿನಿಮಾ ಮಾಡಲು ಮನಸ್ಸು ಮಾಡುತ್ತಾರೆ.

ಟ್ರೇಲರ್‌, ಟೀಸರ್‌ ಹಬ್ಬ: ಸಿನಿಮಾಗಳ ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಟೀಸರ್‌, ಟ್ರೇಲರ್‌, ಸಾಂಗ್‌, ಫ‌ಸ್ಟ್‌ಲುಕ್‌ಗಳು ಸಾಲು ಸಾಲು ಬಿಡುಗಡೆಯಾಗುತ್ತಿದ್ದು, ಈ ಮೂಲಕ ತಮ್ಮ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನದಲ್ಲಿ ತೊಡಗಿವೆ. ಈಗಾಗಲೇ ಪುನೀತ್‌ ರಾಜ್‌ಕುಮಾರ್‌ ಅವರ “ಜೇಮ್ಸ್‌’ ಚಿತ್ರದ ಟೀಸರ್‌ ಹಾಗೂ ಬಿಡುಗಡೆ ಯಾಗಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಜೊತೆಗೆ ‘, “ರಾಣಾ’, “ಮ್ಯಾಟ್ನಿ’, “ತೋತಾಪುರಿ’, “ಶಿವ 143”, “ಶೋಕಿವಾಲ’, “ಗೌಳಿ’, “ನೋಡಿ ಸ್ವಾಮಿ ಇವನು ಇರೋದೇ ಹೀಗೆ’, “ಗುರು ಶಿಷ್ಯರು’, “ಅದ್ಧೂರಿ ಲವರ್‌’, “ಅತ್ಯುತ್ತಮ’ ಚಿತ್ರಗಳ ಟ್ರೇಲರ್‌, ಟೀಸರ್‌, ಸಾಂಗ್‌ ಹಾಗೂ ಫ‌ಸ್ಟ್‌ಲುಕ್‌ ರಿಲೀಸ್‌ ಆಗಿ ಸದ್ದು ಮಾಡುತ್ತಿವೆ. ಬಿಡುಗಡೆಯಾಗಿರುವ ಒಂದೊಂದು ಟ್ರೇಲರ್‌, ಟೀಸರ್‌ ಕೂಡಾ ಪ್ರೇಕ್ಷಕರನ್ನು ಸೆಳೆಯುವಂತಿದೆ. ಈ ಮೂಲಕ ಭವಿಷ್ಯದ ಭರವಸೆ ಹೆಚ್ಚಿದೆ.

 ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.