ಬ್ರಿಟಿಷರಿಗಿಂತ ಹೆಚ್ಚು ಮೋಸ ಮಾಡಿದ್ದು ಕಾಂಗ್ರೆಸಿಗರು: ಗೋವಿಂದ ಕಾರಜೋಳ
Team Udayavani, Mar 14, 2022, 5:30 AM IST
ಬಾಗಲಕೋಟೆ: ಈ ದೇಶಕ್ಕೆ ಬ್ರಿಟಿಷರಿಗಿಂತ ಕಾಂಗ್ರೆಸ್ಸಿಗರೇ ಅತಿ ಹೆಚ್ಚು ಮೋಸ ಮಾಡಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯೇ ಅಖಂಡ ವಿಜಯಪುರಕ್ಕೆ ನೀರಾವರಿ ವಿಷಯದಲ್ಲಿ ಮಾಡಿದ ಮೋಸ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.
ತೋಟಗಾರಿಕೆ ವಿವಿಯಲ್ಲಿ ಯುವ ಜನೋತ್ಸವ ಕಾರ್ಯ ಕ್ರಮ ಉದ್ಘಾಟಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, 1956ರಲ್ಲಿ ಅಖಂಡ ವಿಜಯಪುರ ಮುಂಬಯಿ ಪ್ರಾಂತದಲ್ಲಿತ್ತು. ಕೊಯ್ನಾ ಜಲಾಶಯ ನಿರ್ಮಾಣ ಯೋಜನೆ ಆಗ ಮಂಜೂರಾಗಿತ್ತು. ಮುಂದೆ ನ.1, 1956ರಲ್ಲಿ ಭಾಷಾ ಪ್ರಾಂತ್ಯವಾರು ರಾಜ್ಯ ವಿಭಜನೆಗೊಂಡವು.
ಆಗ ನಾವು ಮೈಸೂರು ಪ್ರಾಂತ್ಯಕ್ಕೆ ಸೇರಿದೆವು. ಕೊಯ್ನಾ ಜಲಾಶಯ ಆಗ ಮುಂಬಯಿ ಪ್ರಾಂತ್ಯಕ್ಕೆ ಸೇರಿತು. ಆಗ ಮುಂಬಯಿ ಪ್ರಾಂತ್ಯದವರು ಕೊಯ್ನಾ ಜಲಾಶಯ ನಿರ್ಮಾಣಕ್ಕೆ 2 ಕೋಟಿ ನಿಮ್ಮ ಪಾಲಿನ ಹಣ ಕೊಡಬೇಕು. ಅದರಿಂದ ಅಖಂಡ ವಿಜಯಪುರ ಜಿಲ್ಲೆ ನೀರಾವರಿಯಾಗುತ್ತದೆ ಎಂದು ಹೇಳಿದ್ದರು.
ಆಗ ಇದೇ ಕಾಂಗ್ರೆಸ್ನವರು ಅಧಿಕಾರದಲ್ಲಿದ್ದರು. 2 ಕೋಟಿ ಕೊಡದ ಕಾರಣ ಇಂದು ಕೊಯ್ನಾ ಯೋಜನೆಯಿಂದ ಅಖಂಡ ವಿಜಯಪುರ ಜಿಲ್ಲೆ ನೀರಾವರಿಯಿಂದ ವಂಚನೆಗೆ ಒಳಗಾಯಿತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ
Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.