ಹೇಳಿದ ತತ್ವದಂತೆ ಮನುಷ್ಯ ಬದುಕುತ್ತಿಲ್ಲ: ಸಿರಿಗೆರೆ ಶ್ರೀ

ಬಸವ ಧರ್ಮ ಪೀಠವನ್ನು ಪ್ರವಚನ, ವಚನ ಸಾಹಿತ್ಯದ ಮೂಲಕ ಕಟ್ಟಿದರು.

Team Udayavani, Mar 14, 2022, 5:36 PM IST

ಹೇಳಿದ ತತ್ವದಂತೆ ಮನುಷ್ಯ ಬದುಕುತ್ತಿಲ್ಲ: ಸಿರಿಗೆರೆ ಶ್ರೀ

ಕೂಡಲಸಂಗಮ: ಮನುಷ್ಯ ತತ್ವಗಳನ್ನು ಹೇಳುತ್ತಿದ್ದಾನೆ. ತತ್ವದಂತೆ ಬದುಕುತ್ತಿಲ್ಲ. ಇದರಿಂದ ಬದುಕು ದಿನದಿಂದ ದಿನಕ್ಕೆ ಆನಂದಮಯವಾಗದೆ ನರಕಮಯವಾಗುತ್ತಿದೆ ಎಂದು ಸಾಣೇಹಳ್ಳಿ ಸಿರಿಗೆರೆ ಶಾಖಾಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠ ಆವರಣದಲ್ಲಿ ನಡೆದ ಮಾತೆ ಮಹಾದೇವಿಯವರ 76ನೇ ಜನ್ಮದಿನ ಹಾಗೂ ಲಿಂಗಾಯತ ಧರ್ಮ ಸಂಕಲ್ಪ ದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ರಷ್ಯಾ ಉಕ್ರೇನ್‌ ರಾಷ್ಟ್ರಗಳ ನಡುವಿನ ಯುದ್ದಕ್ಕೆ ಕಾರಣ ಶ್ರೀಮಂತಿಕೆಯ ಅಂಧಕಾರ, ಬುದ್ಧಿವಂತಿಕೆಯ ಅಹಂಕಾರ. ಎಲ್ಲರೂ ನನ್ನ ಮಾತು ಕೇಳಬೇಕು ಎಂಬ ದುರ್ಗುಣ. ಮನುಷ್ಯ ಈ ದುರ್ಗುಣಗಳಿಂದಲೇ ಮಹಾದೇವನಾಗದೆ ರಾಕ್ಷಸನಾಗುತ್ತಿದ್ದಾನೆ. ಬೇರೆಯವರ ದೋಷ ಎತ್ತಿ ಹೇಳುವ ನೈತಿಕ ಗುಣ ನಮ್ಮಲ್ಲಿ ಇದೆಯೇ ಎಂಬ ಆತ್ಮಾವಲೋಕನವನ್ನು ಪ್ರತಿಯೊಬ್ಬರು ಮಾಡಿಕೊಳ್ಳಬೇಕು ಎಂದರು.

12ನೇ ಶತಮಾನದ ಬಸವಾದಿ ಶರಣರು ತಮ್ಮ ಬದುಕನ್ನು ಆತ್ಮಾವಲೋಕನ ಮಾಡಿಕೊಂಡು ಸಮಾಜದ ಜನರ ಬದುಕುತ್ತಿದ್ದರು. ಜನರ ಪರಿವರ್ತನೆ ಮಾಡುವ ಕಾಯಕ ಮಾಡಿದರು. ನಿಷ್ಠೆ, ಬದ್ಧತೆಯಿಂದ ಬದುಕಿದರು. ಇಂದು ಇವೆಲ್ಲವೂ ಮಾಯವಾಗುತ್ತಿವೆ. ಕೂಡಲಸಂಗಮದಲ್ಲಿ ಸ್ವತ್ಛತೆಯ ಕೊರತೆ ಅಧಿಕವಾಗಿದ್ದು, ಶುದ್ಧಗೊಳಿಸುವ ಕಾರ್ಯ ನಡೆಯಬೇಕು ಎಂದರು.

ವಚನಗಳ ಮೂಲ ಆಶಯ ಅಂಕಿತವಾಗಿರಲಿಲ್ಲ, ತತ್ವ ಪ್ರಸಾರವಾಗಿತ್ತು. ಮಾತೆ ಮಹಾದೇವಿಯವರು ಬಸವಣ್ಣನವರ ವಚನಗಳಿಗೆ ಲಿಂಗದೇವ ಅಂಕಿತ ಬಳಸಿದಾಗ ವಿರೋಧ ಮಾಡಿದೇವು. ಬಸವ ಧರ್ಮ ಪೀಠ ದಿಂದ ದೂರ ಇದ್ದವು. ಮಾತೆ ಗಂಗಾದೇವಿ ಬಸವಣ್ಣನವರ ವಚನಗಳಿಗೆ ಕೂಡಲಸಂಗಮದೇವ ಅಂಕಿತ ಬಳಸಲು ಕರೆ ಕೊಟ್ಟಾಗ ಸಂತೋಷವಾಯಿತು. ಇಂದು ಕಾರ್ಯಕ್ರಮದಲ್ಲಿ ಭಾಗವಹಿಸಿದೇವು ಎಂದರು.

ಗೌರಿಗದ್ದೆ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ವಿನಯ ಗುರುಜಿ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಜೀವನದ ಅನುಭವಗಳನ್ನು ಹೇಳಿದ್ದರಿಂದಲೇ ಶತಮಾನಗಳಿಂದಲೂ ಶಾಶ್ವತವಾಗಿ ನೆಲೆ ನಿಂತಿದೆ. ಶರಣರು ನಡೆದಾಡಿದ ಈ ಪುಣ್ಯಭೂಮಿಯನ್ನು ಕಸಮುಕ್ತ ಮಾಡುವ ಕಾರ್ಯವನ್ನು ಮಾಡಬೇಕು ಎಂದರು.

ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ, ಬಸವಣ್ಣನವರನ್ನು ಬಹುಮುಖಿಯಾಗಿ ನಾಡಿಗೆ ಪರಿಚಯಿಸಿದವರು ಮಾತೆ ಮಹಾದೇವಿ. ಬಸವ ಧರ್ಮ ಪೀಠವನ್ನು ಪ್ರವಚನ, ವಚನ ಸಾಹಿತ್ಯದ ಮೂಲಕ ಕಟ್ಟಿದರು. ಬಸವಾದಿ ಶರಣರ ಆಶಯಗಳನ್ನು ಈಡೇರಿಸುವ ಕಾರ್ಯವನ್ನು ಮಾಡಿದರು ಎಂದರು.

ಬೀದರದ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅಧ್ಯಕ್ಷತೆ ವಹಿಸಿದರು. ಚಿಂತಕ ರುದ್ರಪ್ಪ ಕುರಕುಂದಿ ಉಪನ್ಯಾಸ ನೀಡಿದರು. ಮಾತೆ ಮಹಾದೇವಿ ಬರೆದ ಗಣಗೀತೆ ಪುಸ್ತಕವನ್ನು ವಿಜಯಕುಮಾರ ಮೇಳಕುಂದೆ, ಶ್ರೀಧರ ಗೌಡರ ಬರೆದ ಶರಣರ ಚರಿತೆ ಪುಸ್ತಕವನ್ನು ಜಿ.ಜಿ. ಪಾಟೀಲ, ವಚನ ವಾಣಿ ಪುಸ್ತಕವನ್ನು ಶಂಕರ ಗುಡಸ್‌ ಬಿಡುಗಡೆ ಮಾಡಿದರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಬೀದರ ಬಸವ ಗಿರಿ ಲಿಂಗಾಯತ ಮಹಾಮಠದ ಅಕ್ಕಅನ್ನಪೂರ್ಣ ತಾಯಿ, ಮಹಾರಾಷ್ಟ್ರ ಅಲ್ಲಮಪ್ರಭು ಯೋಗ ಪೀಠದ ಬಸವಕುಮಾರ ಸ್ವಾಮೀಜಿ, ಶಾಸಕ ದೊಡ್ಡನಗೌಡ ಪಾಟೀಲ, ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಇದ್ದರು.

ಎಸ್‌.ಬಿ. ಜೋಡಳ್ಳಿ ಸ್ವಾಗತಿಸಿದರು. ರವಿ ಪಾಪಡೆ ವಂದಿಸಿದರು. ಸುರೇಶ ಸ್ವಾಮಿ ನಿರೂಪಿಸಿದರು. ವಿಜಯಪುರದ ನಿವೃತ್ತ ಕೃಷಿ ಅಧಿಕಾರಿ ಸಿ.ಬಿ.ಬೇವನೂರ ಅವರಿಗೆ ಶರಣ ಕಾಯಕ ರತ್ನ, ಬೀದರ ಲಿಂಗಾಯತ ಸಮಾಜ ಜಿಲ್ಲಾಧ್ಯಕ್ಷ ಕುಶಾಲರಾವ್‌ ಪಾಟೀಲ ಅವರಿಗೆ ಶರಣ ದಾಸೋಹ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.