ವೃತ್ತಿ ರಂಗಭೂಮಿಗೆ ಕಾಯಕಲ್ಪ ಅಗತ್ಯ

ಕಲೆಗಿಂತ ದುಡ್ಡೇ ಇಂದಿನ ಓಟದಲ್ಲಿ ಮುಂದಿದೆ. ಪ್ರತಿಭೆ, ಪುರಸ್ಕಾರಗಳು ಸಾಂಕೇತಿಕವಾಗಿವೆ

Team Udayavani, Mar 18, 2022, 6:22 PM IST

ವೃತ್ತಿ ರಂಗಭೂಮಿಗೆ ಕಾಯಕಲ್ಪ ಅಗತ್ಯ

ಹಾವೇರಿ: ಮುಖದಲ್ಲಿ ಗೆರೆ ಮೂಡಿ, ತಲೆ ತುಂಬ ಬಿಳಿ ಕೂದಲು ಬಂದಾಗ ಎಂತಹ ದೊಡ್ಡ ಕಲಾವಿದನೇ ಇರಲಿ ಆತನ ಪ್ರದರ್ಶನ ವ್ಯಕ್ತಿತ್ವಕ್ಕೆ ಕೊನೆಗೊಳ್ಳುತ್ತದೆ. ವೃತ್ತಿ ರಂಗಭೂಮಿ ಇಂದು ಸೋತು ಸುಣ್ಣವಾಗಿದೆ. ಅದಕ್ಕೆ ಕಾಯಕಲ್ಪ ಕೊಡುವುದು ಹೇಗೆಂದು ಚಿಂತಿಸಬೇಕಾಗಿದೆ ಎಂದು ನಾಟಕ ಅಕಾಡೆಮಿಯ 2021ನೇ ಸಾಲಿನ ಜೀವಮಾನ ರಂಗ ಸಾಧನೆ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ದತ್ತಾತ್ರೇಯ ಕುರಹಟ್ಟಿ ಹೇಳಿದರು.

ನಗರದಲ್ಲಿ ಕಲಾವಿದರು, ಸ್ನೇಹಿತರ ಕೂಟದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ತಮ್ಮ ಕುಟುಂಬದ ಸಹಾಯಾರ್ಥ ಪ್ರದರ್ಶನಕ್ಕಾಗಿ ನಾಟಕ ಕಂಪನಿಯ ಮಾಲೀಕರೆದುರು ಅಂಗಲಾಚುವ ವೃದ್ಧ ಕಲಾವಿದರನ್ನು ನೋಡಿ, ರಾತ್ರೋರಾತ್ರಿ ಆರೋಗ್ಯ ಇಲಾಖೆಯ ಸರ್ಕಾರಿ ನೌಕರಿಗಾಗಿ ಹಾವೇರಿಯಿಂದ ಮೂಡಬಿದರಿಗೆ ಓಡಿ ಹೋದೆ. ಅದರಿಂದಾಗಿಯೇ ಎರಡು ಹೊತ್ತಿನ ಊಟ, ನೆಮ್ಮದಿಯ ಜೀವನ ಕಂಡುಕೊಂಡೆ.

1982ರಿಂದ 2006ರವರೆಗೆ 24ವರ್ಷಗಳ ಕಾಲ ಜಿಲ್ಲಾಸ್ಪತ್ರೆ ಮತ್ತು ಹಾನಗಲ್ಲ ತಾಲೂಕು ಆಡೂರು ಗ್ರಾಮದಲ್ಲಿ ಆರೋಗ್ಯ ಸಹಾಯಕನಾಗಿ ಸೇವೆ ಸಲ್ಲಿಸಿದೆ ಎಂದು ತಿಳಿಸಿದರು. ನಾನು ನೂರಾರು ಧಾರಾವಾಹಿಗಳಲ್ಲಿ ನಟಿಸಿರಬಹುದು. ಪ್ರಸಿದ್ಧಿ, ಅವಕಾಶ, ಅನ್ನ ಕೂಡ ಸಿಕ್ಕಿರಬಹುದು. ಆದರೆ ಅದೊಂದು ಯಂತ್ರಭೂಮಿ. ರಂಗಭೂಮಿಯ ತಾಯಿ ಪ್ರೀತಿಯನ್ನು ಅದು ಕೊಟ್ಟಿಲ್ಲ ಎಂದರು.

ಜಾನಪದ ಗಾಯಕ ಗುರುರಾಜ ಹೊಸಕೋಟೆ ಮಾತನಾಡಿ, ಹುಮ್ಮಸ್ಸು ಮತ್ತು ವಯಸ್ಸು ಇದ್ದಾಗ ಪ್ರಶಸ್ತಿಗಳು ಬರಬೇಕು. ಕುರಹಟ್ಟಿ ಅವರಿಗೆ ತಡವಾಗಿ ಬಂದಿದೆ. ಅಂತೂ ಲಭಿಸಿತಲ್ಲ ಎಂದು ಸಮಾಧಾನ ಪಡಬೇಕಿದೆ. ಕಲೆಗಿಂತ ದುಡ್ಡೇ ಇಂದಿನ ಓಟದಲ್ಲಿ ಮುಂದಿದೆ. ಪ್ರತಿಭೆ, ಪುರಸ್ಕಾರಗಳು ಸಾಂಕೇತಿಕವಾಗಿವೆ ಎಂದರು.

ಜ್ಯೂನಿಯರ್‌ ರಾಜಕುಮಾರ್‌ ಖ್ಯಾತಿಯ ಅಶೋಕ ಬಸ್ತಿ ಮಾತನಾಡಿ, ಕುರಹಟ್ಟಿ ಅದ್ಭುತ ಕಂಠಸಿರಿಯ ಸಹಜ ಕಲಾವಿದ. ಹಾವೇರಿ ನೆಲದ ಹೆಮ್ಮೆಯ ಪ್ರತಿಭೆ. ನಾಟಕ ಅಕಾಡೆಮಿಯ ಈ ಪ್ರಶಸ್ತಿಯಿಂದಾಗಿ ಅಕಾಡೆಮಿಗೇ ದೊಡ್ಡ ಗೌರವ ಬಂದಿದೆ ಎಂದರು. ರಾಘವೇಂದ್ರ ಕಬಾಡಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸತೀಶ ಕುಲಕರ್ಣಿ, ಪ್ರಾಚಾರ್ಯ ಕಷ್ಣಪ್ಪ ಕೆ., ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ಶಂಕರ ಸುತಾರ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ವಿರೂಪಾಕ್ಷ ಹಾವನೂರ, ನಿವೃತ್ತ ಪ್ರಾಚಾರ್ಯ ಪಿ.ಸಿ. ಹಿರೇಮಠ, ಪ್ರೊ.ಶೇಖರ ಭಜಂತ್ರಿ, ವಾಗೀಶ ಹೂಗಾರ, ಶಿವಣ್ಣ ಬಣಕಾರ, ಲತಾ ಪಾಟೀಲ, ಸಿ.ಎಸ್‌. ಮರಳಿಹಳ್ಳಿ, ಆರ್‌.ಎಫ್‌. ಕಾಳೆ, ವಿರೂಪಾಕ್ಷ ಲಮಾಣಿ, ಸಿ.ಎಫ್‌. ಹೆಡಿಯಾಲ, ವಸಂತ ಕಡತಿ, ಕರಿಯಪ್ಪ ಹಂಚಿನಮನಿ ಇತರರು ಇದ್ದರು.ಧನಶ್ರೀ ಲಮಾಣಿ ಪ್ರಾರ್ಥಿಸಿ, ಆರ್‌.ಸಿ.ನಂದಿಹಳ್ಳಿ
ಸ್ವಾಗತಿಸಿ, ಎಸ್‌.ಆರ್‌. ಹಿರೇಮಠ ನಿರೂಪಿಸಿ, ಪೃಥ್ವಿರಾಜ ಬೆಟಗೇರಿ ವಂದಿಸಿದರು.

ನಾನು ನೂರಾರು ಧಾರಾವಾಹಿಗಳಲ್ಲಿ ನಟಿಸಿರಬಹುದು. ಪ್ರಸಿದ್ಧಿ, ಅವಕಾಶ, ಅನ್ನ ಕೂಡ ಸಿಕ್ಕಿರಬಹುದು. ಆದರೆ, ಅದೊಂದು ಯಂತ್ರಭೂಮಿ. ರಂಗಭೂಮಿಯ ತಾಯಿ ಪ್ರೀತಿಯನ್ನು ಅದು ಕೊಟ್ಟಿಲ್ಲ.
ದತ್ತಾತ್ರೇಯ ಕುರಹಟ್ಟಿ,
ಜೀವಮಾನ ರಂಗ ಸಾಧನೆ ಪ್ರಶಸ್ತಿ ಪುರಸ್ಕೃತ ಕಲಾವಿದರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Haveri-Die

Haveri: ಡಾಬಾ ಬಂದಾಗ ದಿಢೀರ್‌ ಎಂದು ಕಣ್ಣು ಬಿಟ್ಟ ವ್ಯಕ್ತಿ ನಿಧನ!

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ತೂಕ ಯಂತ್ರದಲ್ಲಿ ಮೋಸ 7 ಜನರ ಲೈಸೆನ್ಸ್‌ ರದ್ದು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

Haveri: ಎತ್ತಿನ ಗಾಡಿಗೆ ಡಿಕ್ಕಿ ಹೊಡೆದ ಬೈಕ್… ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

“ಡಾಬಾ ಬಂತು ಎದ್ದೇಳು’ಅಂದ ಕೂಡಲೇ “ಸತ್ತವನು’ ಉಸಿರಾಡಿದ!

12-haveri

Haveri: ಕೃಷ್ಣಮೃಗ ಅಭಯಾರಣ್ಯದಲ್ಲಿ “ಕಲ್ಲು ಗೌಜಲು’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.