![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 19, 2022, 6:14 PM IST
ಧಾರವಾಡ: ಇಲ್ಲಿನ ಎಸ್ಡಿಎಂ ವೈದ್ಯಕೀಯ ಕಾಲೇಜಿನ ನೆಪ್ರೊಲಜಿ ವಿಭಾಗದಿಂದ ಮೂತ್ರಪಿಂಡ ಆರೋಗ್ಯ ಕುರಿತು ಅಗತ್ಯ ಜಾಗೃತಿ ಮೂಡಿಸುವ ಧ್ಯೇಯದೊಂದಿಗೆ ವಿಶ್ವ ಕಿಡ್ನಿ ದಿನ ಆಚರಿಸಲಾಯಿತು.
ಎಸ್ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ನಿರಂಜನಕುಮಾರ ಮಾತನಾಡಿ, ಮೂತ್ರಪಿಂಡ ಕಸಿ ಮಾಡುವುದರಲ್ಲಿ ಅನೇಕ ವಿಭಾಗದವರು ಒಟ್ಟುಗೂಡಿಕೊಂಡು ಮಾಡುವ ಕೆಲಸ ಸಾಹಸಮ ಯವಾಗಿದೆ. ಈ ಶ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಕಾರ್ಯಶ್ಲಾಘನೀಯ. ಯಾವಾಗಲೂ ಒಳ್ಳೆಯ ಕೆಲಸಕ್ಕೆ ವಿಶ್ವವಿದ್ಯಾಲಯ ಬದ್ಧವಾಗಿರುತ್ತದೆ ಎಂದರು.
ನೆಪ್ರೊಲಜಿ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸುವುದರ ಮೂಲಕ ಮತ್ತು ಡಿಎಂ/ಎಂಸಿಎಚ್ ಕೋರ್ಸ್ ಗಳನ್ನು ಆರಂಭಿಸುವುದರ ಮೂಲಕ ಈ ವಿಭಾಗವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು. ಉತ್ತಮ ಜೀವನಕ್ಕಾಗಿ ಒಳ್ಳೆಯ ಜೀವನ ಶೈಲಿ ಅಳವಡಿಸಿಕೊಂಡು ಆರೋಗ್ಯದಿಂದ ಮತ್ತು ಸಂತಸದಿಂದ ಜೀವನ ಸಾಗಿಸೋಣ ಎಂದು ಹೇಳಿದರು.
ನೆಪ್ರೊಲಜಿ ವಿಭಾಗದ ಮುಖ್ಯಸ್ಥೆ ಡಾ| ಅಕ್ಕಮಹಾದೇವಿ ಮಾತನಾಡಿ, ವಿಭಾಗವು ಮೊದಲು 5 ಡಯಾಲಿಸಿಸ್ ಯಂತ್ರಗಳಿಂದ ಆರಂಭವಾಗಿದ್ದು ಪ್ರಸುತ್ತ 34 ಯಂತ್ರಗಳನ್ನು ಒಳಗೊಂಡಿದೆ. ಇದರಿಂದ ಉತ್ತರ ಕರ್ನಾಟಕ ಭಾಗದವರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.
ವಿಭಾಗದ ಅಭಿವೃದ್ಧಿಗೆ ಸಹಕರಿಸಿದ ಉಪ ಕುಲಪತಿಗಳಾದ ಡಾ|ನಿರಂಜನಕುಮಾರ ಅವರನ್ನು ಸನ್ಮಾನಿಸಲಾಯಿತು. ನೆಪ್ರೊಲಜಿ ವಿಭಾಗದ ಪ್ರಾಧ್ಯಪಕ ಡಾ| ಮಹೇಶ್ ಬೆನ್ನಿಕಲ್ ಅವರು ಕಿಡ್ನಿ ಸಮಸ್ಯೆಗಳ ಬಗ್ಗೆ ಮತ್ತು ಅದರ ನಿವಾರಣೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ತಿಳಿಸಿದರು. ನೆಪ್ರೊಲಜಿ ವಿಭಾಗದವರು ತಯಾರಿಸಿದ “ಕಿಡ್ನಿ ಸಮಸ್ಯೆಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳು’ ಎಂಬ ಕೈಪಿಡಿಯನ್ನು ಡಾ| ಎಸ್. ಕೆ. ಜೋಶಿ ಬಿಡುಗಡೆಗೊಳಿಸಿದರು. ಲೆಫ್ಟಿನೆಂಟ್ ಕರ್ನಲ್ ಯು.ಎಸ್. ದಿನೇಶ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ| ರತ್ನಮಾಲಾ ದೇಸಾಯಿ, ಹಿರಿಯ ಎಲುಬು ಕೀಲು ತಜ್ಞ
ಡಾ| ಚಿದೇಂದ್ರ ಶೆಟ್ಟರ, ವೈದ್ಯಕೀಯ ಅಧೀಕ್ಷಕರಾದ ಡಾ| ಕಿರಣ ಹೆಗಡೆ ಮೊದಲಾದವರಿದ್ದರು.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.