ಮೂಡಬಿದಿರೆ ಪುರಸಭೆ: 50.32 ಲಕ್ಷ ರೂ. ಮಿಗತೆ ಬಜೆಟ್‌

ನಿರೀಕ್ಷಿತ ಆದಾಯ 30.75 ಕೋಟಿ ರೂ

Team Udayavani, Mar 24, 2022, 1:36 PM IST

purasabhe

ಮೂಡಬಿದಿರೆ: ಬುಧವಾರ ನಡೆದ ಪುರಸಭಾ ಅಯವ್ಯಯ ಅಧಿವೇಶನದಲ್ಲಿ ಅಧ್ಯಕ್ಷ ಪ್ರಸಾದ್‌ ಕುಮಾರ್‌ ಅವರು 30.75 ಕೋ.ರೂ. ನಿರೀಕ್ಷಿತ ಆದಾಯ, 30.25 ಕೋಟಿ ವೆಚ್ಚದೊಂದಿಗೆ 50.32 ಲಕ್ಷದ ಮಿಗತೆ ಬಜೆಟ್‌ ಅನ್ನು ಮಂಡಿಸಿದರು.

ಆರಂಭಿಕ ಶಿಲ್ಕು 3.76 ಕೋಟಿ ರೂ. ಇದ್ದು 2022-23ರಲ್ಲಿ 26.99 ಕೋ. ರೂ ಜಮೆಯಾಗುವ ನಿರೀಕ್ಷೆ ಇದೆ. ಯಾವುದೇ ಹೊಸ ಯೋಜನೆಯನ್ನು ಘೋಷಿಸಿಲ್ಲ.

ಪ್ರಮುಖ ಆದಾಯ ವಿವರ

ಕಟ್ಟಡ ತೆರಿಗೆಯಿಂದ 257.95 ಲಕ್ಷ ರೂ., ಕಟ್ಟಡಗಳ ಬಾಡಿಗೆಯಿಂದ 80 ಲಕ್ಷ ರೂ., ನೀರಿನ ಶುಲ್ಕದಿಂದ 80 ಲಕ್ಷ, ಮನೆ ಮನೆ ಕಸದ ಶುಲ್ಕ ವಸೂಲಿಯಿಂದ 65 ಲಕ್ಷ, ಖಾತೆ ಬದಲಾವಣೆಯಿಂದ 50 ಲಕ್ಷ, ಪರವಾನಿಗೆಗಳಿಂದ 40 ಲಕ್ಷ, ಕಟ್ಟಡ ಅಭಿವೃದ್ಧಿ ಶುಲ್ಕದಿಂದ 35 ಲಕ್ಷ, ಉದ್ಯಮ ಪರವಾನಿಗೆಯಿಂದ 15 ಲಕ್ಷ, ಮಾರ್ಕೆಟ್‌ ವರಿ ವಸೂಲಿಯಿಂದ 75 ಲಕ್ಷ, ದಂಡ ಮತ್ತು ಜುಲ್ಮಾನೆಗಳಿಂದ 21 ಲಕ್ಷ ರೂ. ಅದಾಯ ನಿರೀಕ್ಷಿಸಲಾಗಿದೆ. ಇತರ ಪ್ರತಿಗಳ ಶುಲ್ಕದಿಂದ 7.5ಲಕ್ಷ, ಜಾಹೀರಾತು ತೆರಿಗೆಗಳಿಂದ 7 ಲಕ್ಷ, ನೀರಿನ ಸಂಪರ್ಕ ಶುಲ್ಕದಿಂದ 6 ಲಕ್ಷ, ಖಾತೆ ಪ್ರತಿ ಶುಲ್ಕದಿಂದ 5 ಲಕ್ಷ, ಬಸ್‌ನಿಲ್ದಾಣ ಶುಲ್ಕ 2 ಲಕ್ಷ, ಇನ್ನು ರಸ್ತೆ ಅಗೆತ ಶುಲ್ಕ, ಟೆಂಡರ್‌ ನಮೂನೆ ಶುಲ್ಕದಿಂದ ತಲಾ 1 ಲಕ್ಷ ರೂ. ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.

ಪುರಸಭೆ ನಿಧಿಯಿಂದ ವೆಚ್ಚಗಳು

ರಸ್ತೆಗಳ ರಚನೆ, ಅಭಿವೃದ್ಧಿಗಾಗಿ 125 ಲಕ್ಷ, ಚರಂಡಿ ರಚನೆಗೆ 50 ಲಕ್ಷ, ಕೊಳವೆ ಬಾವಿ ಪಂಪ್‌, ನೀರಿನ ಪೈಪ್‌ ಸೋರಿಕೆ ದುರಸ್ತಿ ಬಗ್ಗೆ 50 ಲಕ್ಷ, ಹೊರಗುತ್ತಿಗೆಯಡಿ ತಾತ್ಕಾಲಿಕ ಪಂಪು ಚಾಲಕರ ವೇತನಕ್ಕಾಗಿ 20 ಲಕ್ಷ, 8 ಮಂದಿ ಪಂಪ್‌ ಚಾಲಕರ ವೇತನಕ್ಕಾಗಿ 20 ಲಕ್ಷ, ಹೊರಗುತ್ತಿಗೆಯಡಿ ದಾರಿದೀಪ ದುರಸ್ತಿ, ನಿರ್ವಹಣೆಗೆ 30 ಲಕ್ಷ, ದಾರಿದೀಪ ವಿಸ್ತರಣೆಗೆ 30 ಲಕ್ಷ, ಕೊಳವೆ ಬಾವಿ, ಪೈಪ್‌ಲೈನ್‌ ರಚನೆಗೆ 30 ಲಕ್ಷ, ಆಡಿಟ್‌, 3ನೇ ಪಾರ್ಟಿ ತಪಾಸಣೆ, ಕಾನೂನು ವೆಚ್ಚಗಳಿಗಾಗಿ 25 ಲಕ್ಷ, ಜಂಗಲ್‌ ಕಟ್ಟಿಂಗ್‌, ಚರಂಡಿ ಹೂಳು ತೆಗೆಯಲು 23 ಲಕ್ಷ, ಕಸ ಸಂಗ್ರಹದ ವಾಹನ, ಚಾಲಕರ ನಿರ್ವಹಣೆಗೆ 20 ಲಕ್ಷ, ದಾರಿ ದೀಪ ಸಾಮಗ್ರಿ ಬಗ್ಗೆ 10 ಲಕ್ಷ, ನೈರ್ಮಲ್ಯ ಘಟಕಕ್ಕೆ ಸಾಮಗ್ರಿ ಬಗ್ಗೆ 10 ಲಕ್ಷ, ಬ್ಲೀಚಿಂಗ್‌, ಕ್ಲೋರಿನೇಟರ್‌ ಗ್ಯಾಸ್‌ಗೆ 8 ಲಕ್ಷ, ಪಾರ್ಕ್‌ ನಿರ್ವಹಣೆಗೆ 2 ಲಕ್ಷ, ಮಳೆ ನೀರಿನ ಚರಂಡಿ ದುರಸ್ತಿಗೆ 5 ಲಕ್ಷ, ರೇಚಕ ಸ್ಥಾವರಗಳ ದುರಸ್ತಿ, ನಿರ್ವಹಣೆಗೆ 4.75 ಲಕ್ಷ, ಜೆಸಿಬಿ ಕಾರ್ಯಾಚರಣೆ, ಘನತ್ಯಾಜ್ಯ ಸಂಬಂಧಿತ ವೆಚ್ಚ 5 ಲಕ್ಷ, ಕಚೇರಿಯ ಲೇಖನ ಸಾಮಗ್ರಿಗೆ 5 ಲಕ್ಷ, ಕಂಪ್ಯೂಟರ್‌ ನಿರ್ವಹಣೆ, ಪೀಠೊಪಕರಣ ಬಗ್ಗೆ 15 ಲಕ್ಷ, ವಾಹನ ಇಂಧನದ ಬಗ್ಗೆ 20 ಲಕ್ಷ, ವಿಮೆ ಕಂತು 5 ಲಕ್ಷ, ದುರಸ್ತಿಗೆ 5 ಲಕ್ಷ ವೆಚ್ಚವಾಗಲಿದೆ ಎಂದು ಆಂದಾಜಿಸಲಾಗಿದೆ.

ಇದಲ್ಲದೆ, ಶೇ.24.10 ನಿಧಿಗೆ ಎಸ್‌ಎಫ್‌ಸಿ ನಿಧಿಯಿಂದ 25 ಲಕ್ಷ, ಪುರಸಭೆ ನಿಧಿಯಿಂದ 6 ಲಕ್ಷ, ಶೇ.7.25ರ ನಿಧಿಗೆ ಪುರಸಭೆ ನಿಧಿಯಿಂದ 2.35 ಲಕ್ಷ, ಶೇ. 5ರ ನಿಧಿಗೆ ಪುರಸಭೆ ನಿಧಿಯಿಂದ 2 ಲಕ್ಷ ಇವೆಲ್ಲ ವ್ಯಯದ ಪಟ್ಟಿಗೆ ಸೇರುತ್ತವೆ ಎಂದು ಅವರು ವಿವರಿಸಿದರು. ಪುರಸಭಾ ಉಪಾಧ್ಯಕ್ಷೆ ಸುಜಾತಾ ಶಶಿಧರ, ಸ್ಥಾಯೀ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಎಂಜಿನಿಯರ್‌ ಪದ್ಮನಾಭ, ಆರೋಗ್ಯ ನಿರೀಕ್ಷಕ ರಾಜೇಶ್‌ ಕೆ., ಅಕೌಂಟೆಂಟ್‌ ಸೀಮಾ ಸಹಿತ ಅಧಿಕಾರಿಗಳಿದ್ದರು. ಪುರಸಭೆ ಸದಸ್ಯರು ಚರ್ಚೆಗಳಲ್ಲಿ ಪಾಲ್ಗೊಂಡಿದ್ದು ಬಜೆಟ್‌ ಸರ್ವಾನುಮತಿಯೊಂದಿಗೆ ಮಂಜೂರಾಯಿತು.

ಪ್ರಮುಖ ವೆಚ್ಚಗಳು

ಎಸ್‌ಎಫ್‌ಸಿ ಮುಕ್ತ ನಿಧಿ ಅನುದಾನದಲ್ಲಿ ಪೌರಕಾರ್ಮಿಕರ ವೇತನಕ್ಕೆ 64 ಲಕ್ಷ, ಶೇ.24.10ರನ್ವಯ ಪ.ಜಾ., ಪ.ಪಂ. ವರ್ಗಕ್ಕೆ 20 ಲಕ್ಷ, 15ನೇ ಹಣಕಾಸು ಸಾಮಾನ್ಯ ಮೂಲ ನಿರೀಕ್ಷಿತ ಅನುದಾನದಲ್ಲಿ ರಸ್ತೆಗೆ 53 ಲಕ್ಷ, ಚರಂಡಿಗೆ 25 ಲಕ್ಷ, ಕುಡಿಯುವ ನೀರು ಕಾಮಗಾರಿಗೆ 58.50 ಲಕ್ಷ , ಘನತ್ಯಾಜ್ಯ ಘಟಕಕ್ಕೆ 58.50 ಲಕ್ಷ ರೂ., ಖಾಯಂ ನೌಕರರ ವೇತನ, ಪಿಂಚಣಿಗಾಗಿ 75 ಲಕ್ಷ ರೂ. ಕಾದಿರಿಸಲಾಗಿದೆ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.