ಬಗರ್ಹುಕುಂ ಹಕ್ಕುಪತ್ರ ನೀಡಲು ಆಗ್ರಹ
Team Udayavani, Mar 24, 2022, 3:15 PM IST
ಸಾಗರ: ಜಿಲ್ಲಾ ಮಲೆನಾಡು ರೈತ ಹೋರಾಟ ಸಮಿತಿವತಿಯಿಂದ ಬಗರ್ಹುಕುಂ ಸಾಗುವಳಿದಾರರಿಗೆಮತ್ತು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರನೀಡುವಂತೆ ಒತ್ತಾಯಿಸಿ, “ಹಕ್ಕುಪತ್ರ ಕೊಡಿಸಿ,ಭೂ ಹಕ್ಕು ದೊರಕಿಸಿ ಇಲ್ಲವೇ ಸಂಸದರು ಮತ್ತುಶಾಸಕರು ರಾಜೀನಾಮೆ ಕೊಡಿ’ ಎಂದು ಆಗ್ರಹಿಸಿಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಸಾಗರದ ಗಾಂ ಧಿ ಮೈದಾನದಿಂದ ಹೊರಟಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿ ಕಾರಿಗಳಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಗಾಂಧಿ ಮೈದಾನದಲ್ಲಿ ನಡೆದಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಸಮಿತಿಯಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್, ಶರಾವತಿಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವಸಂಬಂಧ ಮುಖ್ಯಮಂತ್ರಿಗಳು, ನಿಕಟಪೂರ್ವಮುಖ್ಯಮಂತ್ರಿಗಳು, ಸಂಸದ ಬಿ.ವೈ.ರಾಘವೇಂದ್ರ,ಶಾಸಕ ಹಾಲಪ್ಪ ಇನ್ನಿತರರ ನೇತೃತ್ವದಲ್ಲಿಬೆಂಗಳೂರಿನಲ್ಲಿ ಸಭೆ ನಡೆದು ಇಂದಿಗೆ ಸರಿಯಾಗಿಆರು ತಿಂಗಳಾಯಿತು. ಈತನಕ ಸಭೆಯ ನಡಾವಳಿಬರೆದಿಲ್ಲ. ಸರ್ಕಾರಕ್ಕೆ ಮತ್ತು ಸ್ಥಳೀಯ ಶಾಸಕರು,ಸಂಸದರಿಗೆ ಮುಳುಗಡೆ ಸಂತ್ರಸ್ತರ ಬಗ್ಗೆ ಕಾಳಜಿಇಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದಸಭೆಯ ಗತಿಯೇ ಹೀಗಾದರೆ ಉಳಿದ ಸಚಿವರಪಾಡೇನು ಎಂದು ಪ್ರಶ್ನಿಸಿದರು.
ತಾವು ಮುಳುಗಡೆಸಂತ್ರಸ್ತರು ಎಂದು ಹೇಳಿಕೊಳ್ಳುವ ಶಾಸಕ ಹಾಲಪ್ಪಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ 48 ಸಾವಿರಕ್ಕೂ ಹೆಚ್ಚು ಅರಣ್ಯ ಹಕ್ಕುಸಾಗುವಳಿದಾರರ ಅರ್ಜಿ ವಜಾಗೊಳಿಸಲಾಗಿದೆ.ರೈತರು ಜಿಲ್ಲಾ ಧಿಕಾರಿಗಳ ಕಚೇರಿಗೆ ಅಲೆದಾಡುವಸ್ಥಿತಿಯನ್ನು ಜಿಲ್ಲಾಡಳಿತ ಮತ್ತು ಉಪವಿಭಾಗಾಧಿಕಾರಿಗಳು ಮಾಡಿದ್ದಾರೆ. ತಕ್ಷಣ ಸರ್ಕಾರಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರನೀಡಬೇಕು.
ವರಾಹಿ, ಚಕ್ರಾ, ಸಾವೆಹಕ್ಲು ವಿದ್ಯುತ್ಯೋಜನೆಗೆ ಭೂಮಿ ಕಳೆದುಕೊಂಡವರ ಸಮಸ್ಯೆಬಗೆಹರಿಸಬೇಕು. ಇಲ್ಲವಾದಲ್ಲಿ ರೈತರು ಕಾನೂನುಭಂಗ, ಜೈಲ್ ಭರೋ ಚಳವಳಿ ಹಮ್ಮಿಕೊಳ್ಳುವುದುಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆನೀಡಿದರು.ಪ್ರತಿಭಟನೆಯಲ್ಲಿ ದಿನೇಶ್ ಶಿರವಾಳ, ಹೊಯ್ಸಳಗಣಪತಿಯಪ್ಪ, ರಮೇಶ್ ಕೆಳದಿ, ಧರ್ಮರಾಜ್ಶಿರವಾಳ, ರಮೇಶ್ ಐಗಿನಬೈಲು, ಅಬ್ದುಲ್ಅಜೀಜ್, ಹನುಮಂತಪ್ಪ, ರಾಜು ದೇವಾಡಿಗ,ಷಣ್ಮುಖ, ಶಿವಕುಮಾರ್, ಪರಶುರಾಮ್ ಸಿಡ್ಡಿಹಳ್ಳಿ,ಕೆ.ಲಕ್ಷ ¾ಣಪ್ಪ, ಕಲ್ಲಪ್ಪ, ಶ್ರೀಕಾಂತ್ ನಾಯ್ಕ,ಶ್ರೀಧರಮೂರ್ತಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bigg Boss: ಬಿಗ್ ಬಾಸ್ ಮನೆಯಲ್ಲಿ ರಾದ್ಧಾಂತ ಸೃಷ್ಟಿಸಿದ ವಿವಾದಿತ ಸ್ಪರ್ಧಿಗಳಿವರು..
Irani Cup: ತನುಷ್ ಕೋಟ್ಯಾನ್ ದಿಟ್ಟ ಹೋರಾಟ; 27 ವರ್ಷದ ಬಳಿಕ ಇರಾನಿ ಕಪ್ ಗೆದ್ದ ಮುಂಬೈ
Goa ದಲ್ಲಿ ನಡೆದ ಘಟನೆ ಅಲ್ಲ; ವಿದೇಶಿ ಕಡಲಿನಲ್ಲಿ ಬೋಟ್ ದುರಂತ: ವೈರಲ್ ವಿಡಿಯೋ ನೋಡಿ
Bellary: ನೀರಿನ ರಭಸಕ್ಕೆ ಕೊಚ್ಚಿಹೋಗಿ ವ್ಯಕ್ತಿ ಮೃತ
Renukaswamy Case: ದರ್ಶನ್ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.