![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 25, 2022, 5:29 PM IST
ಮುದಗಲ್ಲ: ಪಿಎಸೈ ಪ್ರಕಾಶ ಡಂಬಳ ಪುರಸಭೆ ಮುಖ್ಯಾಧಿಕಾರಿಗಳೊಂದಿಗೆ ಗುರುವಾರ ಬೆಳ್ಳಂಬೆಳಗ್ಗೆ ಬೀದಿಬದಿ ಅಂಗಡಿಗಳ ಸ್ಥಳಾಂತರಕ್ಕೆ ಕಾರ್ಯಾಚರಣೆ ನಡೆಸಿದರು.
ಪಿಎಸೈ ಪ್ರಕಾಶ ಡಂಬಳ, ಮುಖ್ಯಾಧಿ ಕಾರಿ ಮರಿಲಿಂಗಪ್ಪ ಮತ್ತು ಸಿಬ್ಬಂದಿ ರಸ್ತೆ ಅಗಲೀಕರಣವಾಗಿದ್ದರೂ ಹಳೇ ರಸ್ತೆಗೆ ಹೊಂದಿಕೊಂಡು ಬೀದಿಬದಿ ವ್ಯಾಪಾರಸ್ಥರು, ಅಂಗಡಿಕಾರರು ರಸ್ತೆಯಲ್ಲಿಯೇ ಸಾಮಗ್ರಿ ಇಟ್ಟುಕೊಂಡಿದ್ದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿತ್ತು. ಠಾಣೆಗೆ ವರ್ಗವಾಗಿ ಬಂದ ನೂತನ ಪಿಎಸೈ ಸಮಸ್ಯೆ ಮನಗಂಡು ಬೀದಿ ಬದಿ ವ್ಯಾಪಾರಸ್ಥರಿಗೆ ಈಗಾಗಲೇ ರಸ್ತೆ ಅಗಲೀಕರಣದ ಚರಂಡಿ ಮುಂದೆ ಗುರುತು ಹಾಕಿ ಅದರಲ್ಲಿಯೇ ಅಂಗಡಿ ಇಟ್ಟುಕೊಳ್ಳಬೇಕು. ಅಂಗಡಿಕಾರರು ಕೂಡ ತಮ್ಮ ಕಿರಾಣಿ ಸಾಮಾನು ರಸ್ತೆಯಲ್ಲಿಡಬಾರದು ಎಂದು ಎಚ್ಚರಿಕೆ ನೀಡಿ ಅವುಗಳನ್ನು ತೆರವುಗೊಳಿಸಿದರು.
ರಾಯಚೂರು-ಬೆಳಗಾವಿ ರಸ್ತೆ ಮತ್ತು ಮಸ್ಕಿ ರಸ್ತೆಯಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರಿಂದ ಪಟ್ಟಣದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಆಗ್ರಹ
ಪುರಸಭೆ ಪಕ್ಕದಲ್ಲಿರುವ ಆಟೋ, ಇತರೆ ವಾಹನಗಳು ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಗಲೀಕರಣವಾಗಿದ್ದರೂ ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ಅಲ್ಲದೇ ಪುರಸಭೆ ರಂಗ ಮಂದಿರದ ಆವರಣದಲ್ಲಿ ಕೂಡ ಮಾಂಸಾಹಾರಿ ಅಂಗಡಿಗಳು ಸೇರಿದಂತೆ ವಿವಿಧ ರೀತಿಯ ಅಂಗಡಿಗಳು ಹೆಚ್ಚಿನ ಜಾಗ ಹಿಡಿದುಕೊಂಡು ಮತ್ತು ಅನಗತ್ಯ ಬಂದ್ ಆದ ಅಂಗಡಿಗಳು ಜಾಗ ಹಿಡಿದುಕೊಂಡಿದ್ದರಿಂದ ಸಂಚಾರಕ್ಕೆ ಅಡೆತಡೆಯುಂಟಾಗಿದೆ. ಅವುಗಳನ್ನು ಪಿಎಸೈ, ಮುಖ್ಯಾಧಿಕಾರಿಗಳು ತೆರವುಗೊಳಿಸಿ ಸಮಸ್ಯೆ ಪರಿಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.