ಭಾರತ-ಶ್ರೀಲಂಕಾ ನಡುವೆ 6 ಒಪ್ಪಂದ; ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಕ್ರಮ
ಉಗ್ರವಾದ, ತೀವ್ರವಾದದ ವಿರುದ್ಧ ಸಂಘಟಿತ ಹೋರಾಟ ಬೇಕು; ಬಿಮ್ಸ್ಟೆಕ್ ರಾಷ್ಟ್ರಗಳ 18ನೇ ಸಚಿವರ ಸಮ್ಮೇಳನದಲ್ಲಿ ಸಚಿವ ಜೈಶಂಕರ್
Team Udayavani, Mar 30, 2022, 8:05 AM IST
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ 6 ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.
ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿ 18ನೇ ಬಂಗಾಲ ಕೊಲ್ಲಿ ಬಹು ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹ ಕಾರ ಒಕ್ಕೂಟ (ಬಿಮ್ಸ್ಟೆಕ್)ರಾಷ್ಟ್ರಗಳ ಸಚಿವರ ಸಭೆಯ ವೇಳೆ ಈ ಒಪ್ಪಂದಗಳು ನಡೆದಿವೆ.
ಮೂರು ದ್ವೀಪಗಳಲ್ಲಿ ಹೈಬ್ರಿಡ್ ವಿದ್ಯುತ್ ಯೋಜನೆಗಳು, ಮೀನುಗಾರಿಕೆಗೆ ಅನುಕೂಲವಾಗುವಂಥ ಬಂದರುಗಳ ಅಭಿವೃದ್ಧಿ, ಗಾಲೆ ಜಿಲ್ಲೆಯಲ್ಲಿನ 200 ಶಾಲೆಗಳಿಗೆ ಆಧುನಿಕ ಕಂಪ್ಯೂಟರ್ ಲ್ಯಾಬ್ಗಳು ಮತ್ತು ಪಠ್ಯಕ್ರಮ ಅಭಿವೃದ್ಧಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದಲ್ಲದೆ ವಿದೇಶಾಂಗ ಸಚಿವಾಲಯ ಭಾಗವೇ ಆಗಿರುವ ಸುಷ್ಮಾ ಸ್ವರಾಜ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಸರ್ವಿಸ್ ಮತ್ತು ದ್ವೀಪರಾಷ್ಟ್ರದ ಭಂಡಾರ ನಾಯಕೆ ಇಂಟರ್ನ್ಯಾಶನಲ್ ಡಿಪ್ಲೊಮ್ಯಾ ಟಿಕ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಡುವೆ ಪ್ರತ್ಯೇಕ ಒಪ್ಪಂದವೂ ನಡೆದಿವೆ. ಭಾರತದ ವಿದೇ ಶಾಂಗ ಸಚಿವ ಎಸ್. ಜೈಶಂಕರ್ ಅವರು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜ ಪಕ್ಸ, ಪ್ರಧಾನಿ ಮಹಿಂದಾ ರಾಜಪಕ್ಸ ವಿವಿಧ ಸಚಿವರ ಜತೆಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ:ಪಂಜಾಬ್: ಅಧಿಕಾರಿಗಳನ್ನು ಒತ್ತೆಯಾಳು ಮಾಡಿಕೊಂಡ ರೈತರು
ಸಂಘಟಿತ ಹೋರಾಟಕ್ಕೆ ಕರೆ: ಉಗ್ರವಾದ, ಹಿಂಸಾತ್ಮಕವಾಗಿರುವ ತೀವ್ರಗಾಮಿತ್ವದ ವಿರುದ್ಧ ಬಿಮೆಸ್ಟೆಕ್ ರಾಷ್ಟ್ರಗಳು ಸಂಘಟಿತ ವಾಗಿ ಹೋರಾಟ ನಡೆಸಬೇಕು ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಸಭೆ ಯಲ್ಲಿ ಮಾತನಾಡುತ್ತಾ, ಭಯೋತ್ಪಾದನೆ ಮತ್ತು ತೀವ್ರಗಾಮಿತ್ವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದನ್ನು ತಡೆಯಲು ಒಕ್ಕೂ ಟದ ಸದಸ್ಯ ರಾಷ್ಟ್ರಗಳು, ಒಗ್ಗೂಡಿ ದುಡಿಯಬೇಕಾಗಿದೆ ಎಂದಿದ್ದಾರೆ.
ಉಕ್ರೇನ್ ಬಿಕ್ಕಟ್ಟಿನ ಕುರಿತು ಪ್ರಸ್ತಾವಿಸಿದ ಅವರು, ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವು ದರಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳಬಾರದು. ಅಂತಾರಾಷ್ಟ್ರೀಯ ವ್ಯವಸ್ಥೆ ಸದ್ಯ ಅತ್ಯಂತ ಸವಾಲಿನ ಸ್ಥಿತಿಯನ್ನು ಎದುರಿಸುತ್ತಿದೆ. ಈಗಷ್ಟೇ ಜಗತ್ತಿನಲ್ಲಿ ಕೊರೊನಾ ಬಿಕ್ಕಟ್ಟು ಕೊನೆಗೊಳ್ಳುತ್ತಿದೆ. ಉಕ್ರೇನ್ನಲ್ಲಿ ನಡೆ ಯುತ್ತಿರುವ ಬೆಳವಣಿಗೆ ಗಳು ಅಂತಾ ರಾಷ್ಟ್ರೀಯ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ ಎಂದಿದ್ದಾರೆ. ರಾಷ್ಟ್ರಗಳ ನಡುವೆ ಬಹು ಮುಖ್ಯವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಉತ್ತಮ ರೀತಿಯದ್ದಾಗಿರುವ ಬಾಂಧವ್ಯ ಹೊಂದಿರ ಬೇಕಾದದ್ದೂ ಅಗತ್ಯವೆಂದು ಜೈಶಂಕರ್ ಪ್ರತಿಪಾದಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UN ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ: ಪೋರ್ಚುಗಲ್ ಬೆಂಬಲ
Israel: ಬೈರೂತ್ ಮೇಲಿನ ದಾಳಿಯಲ್ಲಿ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ಸಾವು: ಇಸ್ರೇಲ್ ಸೇನೆ
India: ಮೊದಲು ಗಡಿ ಭಯೋತ್ಪಾದನೆ ನಿಲ್ಲಿಸಿ-ವಿಶ್ವಸಂಸ್ಥೆಯಲ್ಲಿ ಪಾಕ್ ಗೆ ಭಾರತದ ಚಾಟಿ
China; ಮುಳುಗಿದ ಅಣ್ವಸ್ತ್ರ ಸಬ್ಮರೀನ್! : ಅಮೆರಿಕ ಮಾಹಿತಿ
Prisoner; ಅತೀ ಹೆಚ್ಚು ಕಾಲ ಜೈಲಿನಲ್ಲಿದ್ದ ಕೈದಿಯ ಬಿಡುಗಡೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.