ಆಮೆಗತಿಯಲ್ಲಿ ಹೆದ್ದಾರಿ ಕಾಮಗಾರಿ


Team Udayavani, Mar 30, 2022, 10:20 AM IST

udayavani

ಕೈಕಂಬ: ಎಡಪದವು- ಕುಪ್ಪೆಪದವು – ಮುತ್ತೂರು ಮೂಲಕ ಬಂಟ್ವಾಳ ತಾಲೂಕು ಸಂಪರ್ಕಿಸುವ 9.62 ಕೋ.ರೂ. ಅನುದಾನ ದಲ್ಲಿ ನಡೆಯುತ್ತಿರುವ ರಾಜ್ಯ ಹೆದ್ದಾರಿಯ 4ನೇ ಹಂತದ ಅಭಿವೃದ್ಧಿ ಕಾಮಗಾರಿಯು ಆಮೆಗತಿಯಲ್ಲಿ ಸಾಗಿದೆ. ಚರಂಡಿ, ರಸ್ತೆ ಕಾಮಗಾರಿಗಳು ಅರ್ಧದಲ್ಲಿಯೇ ನಿಂತಿವೆ.

2020ರ ಆ. 24ರಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದಿದ್ದು, ಈ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿರುವುದರಿಂದ ಇದು ನಿತ್ಯ ಎದುರಿಸುವ ಸಮಸ್ಯೆಗೆ ಕಾರಣವಾಗಿದೆ. ಮಳೆ ಬಂದರೆ ರಸ್ತೆಯಲ್ಲಿಯೇ ನೀರು ನಿಲ್ಲುವ ಸಾಧ್ಯತೆ ಹೆಚ್ಚಿದೆ.

ಎಡಪದವಿನಿಂದ ಸುಮಾರು 3 ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಯಾಗಿ ಚರಂಡಿ ನಿರ್ಮಿಸಲಾಗಿದೆ. ಅದನ್ನು ಕೂಡ ಬಿಟ್ಟು ಬಿಟ್ಟು, ಮಾಡಲಾಗಿದೆ. ಕೊಂದೋಡಿಯಲ್ಲಿ ಚರಂಡಿ ಮೇಲು ಹಾಗೂ ರಸ್ತೆ ಕೆಳಗೆಡೆ ಇದ್ದು ಮಳೆ ಬಂದಲ್ಲಿ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲಿಯೇ ನಿಲ್ಲುವ ಸಾಧ್ಯತೆ ಹೆಚ್ಚು. ಪದ್ರೆಂಗಿಯಲ್ಲಿಯೂ ರಸ್ತೆ ಡಾಮರು ಕಾಮಗಾರಿ ಅರ್ಧದಲ್ಲಿಯೇ ನಿಲ್ಲಿಸಲಾಗಿದೆ. ಮಾರ್ಚ್‌ನಿಂದ ರಸ್ತೆ ಕಾಮಗಾರಿಗಳು ಅರಂಭಗೊಂಡಿದ್ದು, ಸುಮಾರು 15 ದಿನಗಳ ಕಾಲ ರಸ್ತೆ ಕಾಮಗಾರಿ ನಡೆದಿತ್ತು. ಆದರೆ ಈಗ ಒಂದು ವಾರದಿಂದ ಯಾವುದೇ ಕಾಮಗಾರಿಗಳು ನಡೆದಿಲ್ಲ. ಮಳೆ ಬಂದರೆ ರಸ್ತೆಗಿಂತ ಎತ್ತರದಲ್ಲಿರುವ ಚರಂಡಿಯಲ್ಲಿ ನೀರು ಹರಿಯದೇ ರಸ್ತೆಯಲ್ಲಿಯೇ ನಿಲ್ಲಲಿದೆ. ಮಳೆ ಬರುವ ಮುಂಚೆ ಈ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಸಿಬೇಕಾಗಿರುವುದು ಅಗತ್ಯವಾಗಿದೆ. ಚರಂಡಿಯಲ್ಲಿ ರಸ್ತೆಯ ನೀರು ಹರಿಯುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಮಳೆಗಾಲದ ಮುನ್ನ ಕಾಮಗಾರಿ ಪೂರ್ಣ

ಎಡಪದವು -ಕುಪ್ಪೆಪದವು -ಮುತ್ತೂರು -ಬಂಟ್ವಾಳ ತಾಲೂಕು ಸಂಪರ್ಕಿಸುವ ರಾಜ್ಯ ಹೆದ್ದಾರಿ ಕಾಮಗಾರಿಗಳು ಕೆಲವೆಡೆ ನೀರು ಪೈಪ್‌ ಹೊಡೆದ ಕಾರಣ ಕಾಮಗಾರಿಯನ್ನು ಒಂದೆರೆಡು ದಿನ ನಿಲ್ಲಿಸಲಾಗಿತ್ತು. ನೀರು ಪೈಪ್‌ಗ್ಳಿದ್ದ ಕಾರಣ ಚರಂಡಿ ಕಾಮಗಾರಿಗಳಿಗೂ ಕೂಡ ಸ್ವಲ್ಪ ತೊಂದರೆಯಾಗಿತ್ತು. ಪದ್ರೆಂಗಿಯಲ್ಲಿ ಜೆಸಿಬಿ ಮೂಲಕ ಕಾಮಗಾರಿಗಳು ನಡೆಯುತ್ತಿದೆ. ರಸ್ತೆಯ ಬದಿಗಳಲ್ಲಿ ಜಲ್ಲಿಕಲ್ಲು ಹಾಕಲಾಗುತ್ತಿದೆ. ರಸ್ತೆ ಕಾಮಗಾರಿಯನ್ನು ಮಳೆಗಾಲ ಮುಂಚೆ ಶೀಘ್ರ ಮುಗಿಸುವ ಪ್ರಯತ್ನ ನಮ್ಮದಾಗಿದೆ ಎಂದು ಪಿಬಿಐ ಕನ್‌ಸ್ಟ್ರಕ್ಷನ್‌ನ ಎಂಜಿನಿಯರ್‌ ವೇಣುಕುಮಾರ್‌ ತಿಳಿಸಿದ್ದಾರೆ

ವಾರದೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣ

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಈ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಎಡಪದವಿನಿಂದ 2 ಕಿ.ಮೀ. ತನಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಒಂದು ವಾರದೊಳಗೆ ಮುಗಿಯಲಿದೆ. ಅದು ಪೂರ್ಣಗೊಂಡ ಅನಂತರ ಮುಂದಿನ ಹಂತದ ಕಾಮಗಾರಿ ಆರಂಭಿಸಲಾಗುತ್ತದೆ. ಸಂಜೀವ ಕುಮಾರ್‌ ನಾಯಕ್‌, ಪಿಡಬ್ಲ್ಯುಡಿ ಎಂಜಿನಿಯರ್‌

ಟಾಪ್ ನ್ಯೂಸ್

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ

Tejasvi

Govt. Bungalow: ತೇಜಸ್ವಿ ಯಾದವ್ ತೆರವುಗೈದ ಸರಕಾರಿ ಬಂಗಲೆಯಲ್ಲಿ ಸೋಫಾ, ಎಸಿ ನಾಪತ್ತೆ!

1-dd-abbb

Dipa Karmakar; 31 ರ ಹರೆಯದಲ್ಲೇ ನಿವೃತ್ತಿ ಘೋಷಿಸಿದ ಭಾರತದ ಖ್ಯಾತ ಜಿಮ್ನಾಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Savanooru

Savanooru: ಪಿಕಪ್‌-ಬೈಕ್‌ ಅಪಘಾತ: ಸವಾರರಿಗೆ ಗಾಯ

River-Hand-Person

Vitla: ಹೊಳೆಗೆ ಬಿದ್ದ ವೃದ್ಧರೊಬ್ಬರ ರಕ್ಷಿಸಿದ ಯುವಕರು; ಶ್ಲಾಘನೆ

HAALUMADDI

Vitla: ಹಾಲುಮಡ್ಡಿ ಸಂಗ್ರಹಿಸಿ ರಿಕ್ಷಾದಲ್ಲಿ ಸಾಗಾಟ

vitla

Bajpe: ವಿಷ ಸೇವನೆ; ವಿದ್ಯಾರ್ಥಿನಿ ಸಾ*ವು

dw

Kinnigoli: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Kaup

Ucchila Dasara: ಕರಾವಳಿಯ 108 ವೀಣಾವಾದಕರಿಂದ ಶತವೀಣಾವಲ್ಲರಿ

Manipal-Rain

Heavy Rain: ಅನಿರೀಕ್ಷಿತ ಸಿಡಿಲು ಮಳೆಗೆ ದಂಗಾದ ಉಡುಪಿ

1-gk

Shri Rama Sena;ನ. 4ರಿಂದ ದತ್ತಮಾಲಾ ಅಭಿಯಾನ

Mangalur

PDO Strikes: ಉಭಯ ಜಿಲ್ಲೆಗಳಲ್ಲಿ ಪಿಡಿಒ, ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

MGM-govinda-Bhat

Udupi: ʼಯಕ್ಷಗಾನ ಕಲಾವಿದನಾಗಿ ಪ್ರತಿಹಂತದಲ್ಲಿ ಕಲಿವ ಮನಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದೆʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.