ಪೈಪ್ಲೈನ್ ದುರಸ್ತಿ;ನೀರು ಸರಬರಾಜು ಎಂದಿನಂತೆ
Team Udayavani, Mar 30, 2022, 12:07 PM IST
ಕದ್ರಿ: ಗೈಲ್ ಗ್ಯಾಸ್ಲೈನ್ ಕಾಮಗಾರಿಯಿಂದಾಗಿ ಹಾನಿ ಉಂಟಾದ ಕದ್ರಿಯ ಸಿಟಿ ಆಸ್ಪತ್ರೆ ಬಳಿಯ ಪ್ರಮುಖ ನೀರಿನ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಬುಧವಾರದಿಂದ ನಗರದಲ್ಲಿ ಯಥಾಸ್ಥಿತಿಯಂತೆ ನೀರು ಸರಬರಾಜು ಆಗಲಿದೆ.
ನಗರದ ಸಿಟಿ ಆಸ್ಪತ್ರೆ ಬಳಿ ರವಿವಾರ ಸಂಜೆ ವೇಳೆಗೆ ಪೈಪ್ಲೈನ್ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ 450 ಎಂ.ಎಂ. ಕಬ್ಬಿಣದ ಪೈಪ್ಲೈನ್ಗೆ ಹಾನಿಯಾಗಿದ್ದು, ಈ ಪೈಪ್ಲೈನ್ ನಗರದ ಬೆಂದೂರ್ವೆಲ್ ಪಂಪ್ಹೌಸ್ನಿಂದ ಲಾಲ್ಬಾಗ್ನ ಕರಾವಳಿ ಪಂಪ್ಹೌಸ್ಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲಿಂದ ಚಿಲಿಂಬಿ ಪಂಪ್ ಹೌಸ್, ಬೋಳೂರು, ಉರ್ವ, ಚಿಲಿಂಬಿ, ಅಶೋಕ ನಗರ, ಬೊಕ್ಕಪಟ್ಣ, ಮಣ್ಣಗುಡ್ಡೆ ಸಹಿತ ಸುಮಾರು 8 ವಾರ್ಡ್ ಗಳಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಮಂಗಳವಾರ ಮಧ್ಯಾಹ್ನದವರೆಗೆ ಪೈಪ್ಲೈನ್ ದುರಸ್ತಿ ಕಾಮಗಾರಿ ನಡೆಸಲಾಗಿದ್ದು, ಸದ್ಯ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.