ಸೇತುವೆಯಡಿ ತ್ಯಾಜ್ಯ; ಮಳೆ ನೀರು ಹರಿಯಲು ಬಹು ತೊಡಕು!
ವಾರ್ಡ್: ಮಣ್ಣಗುಡ್ಡೆ, ಕಂಬ್ಳ, ಕೊಡಿಯಾಲಬೈಲ್, ಬಿಜೈ, ಶಿವಬಾಗ್
Team Udayavani, Mar 30, 2022, 12:26 PM IST
ನಗರದ ಜನವಸತಿ ಪ್ರದೇಶವಾಗಿರುವ ಮಣ್ಣಗುಡ್ಡೆ, ಕಂಬ್ಳ, ಕೊಡಿಯಾಲಬೈಲ್, ಬಿಜೈ, ಶಿವಬಾಗ್ ಸಹಿತ ಬಹುತೇಕ ಭಾಗದ ನೈಜ ಸಮಸ್ಯೆ ಇದು. ರಾಜಕಾಲುವೆ, ಬೃಹತ್ ತೋಡಿನ ವ್ಯಾಪ್ತಿಯಲ್ಲಿ ಸೇತುವೆ ಇದ್ದರೆ ಪಿಲ್ಲರ್ ಮುಂದೆ ತ್ಯಾಜ್ಯ ರಾಶಿ ತುಂಬಿಕೊಂಡು ನೀರು ಹರಿಯುವಿಕೆಗೆ ತೊಡಕುಂಟಾಗುತ್ತಿದೆ.
ಜನತಾ ಡಿಲಕ್ಸ್ ಹೊಟೇಲ್ ಮುಂಭಾಗ ರಾಜಕಾಲುವೆಯ ಇಕ್ಕೆಲಗಳಲ್ಲಿ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಪ್ರತೀ ಮಳೆಗಾಲ ನೆರೆ ನೀರು ಉಕ್ಕಿ ರಸ್ತೆಯಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತದೆ. ಕೆಲವು ಮನೆಗಳಿಗೂ ನೀರು ನುಗ್ಗುವ ಪರಿಸ್ಥಿತಿ ಇದೆ. ಟಿಎಂಎ ಪೈ ಸಭಾಂಗಣದ ಹೊರಭಾಗದಲ್ಲೂ ಇದೇ ಸಮಸ್ಯೆ.
ಕೊಡಿಯಾಲಬೈಲ್ ಭಾಗದ ಬೃಹತ್ ತೋಡು ಕುದ್ರೋಳಿ ಮತ್ತು ಮಣ್ಣಗುಡ್ಡ ರಸ್ತೆಯ ಅಡಿಯಿಂದ ಸಾಗುತ್ತದೆ. ಹೀಗಾಗಿ ಇಲ್ಲಿ ಎರಡು ಸಣ್ಣ ಸೇತುವೆಗಳಿವೆ. ಸೇತುವೆಗೆ ಪಿಲ್ಲರ್ ಇದೆ. ಮಳೆಗಾಲದಲ್ಲಿ ಸಮಸ್ಯೆಗೆ ಕಾರಣ ಇದೇ ಪಿಲ್ಲರ್. ಮೊದಲ ಮಳೆ ನೀರು ಹರಿದು ಬರುವಾಗ ತೋಡಿನಲ್ಲಿದ್ದ ಕಸ ಕಡ್ಡಿ ತ್ಯಾಜ್ಯಗಳೆಲ್ಲ ಬಂದು ಪಿಲ್ಲರ್ಗೆ ಸಿಲುಕಿಕೊಂಡು ಅಲ್ಲೇ ಬಾಕಿಯಾಗುತ್ತದೆ. ಮಳೆ ನೀರಿನ ಹರಿವಿಗೆ ತಡೆಯಾಗಿ ತೋಡಿನ ನೀರು ಉಕ್ಕುತ್ತದೆ.
ಪಿಲ್ಲರ್ ಕೆಳಗೆ ತ್ಯಾಜ್ಯ ನಿಂತು ನೀರು ಹರಿಯಲು ಸಮಸ್ಯೆ ಆಗುತ್ತಿರುವುದು ಹೌದು; ಬಳ್ಳಾಲ್ಬಾಗ್ ಕಡೆಯಿಂದ ಬರುವ ಮಳೆನೀರು ತೋಡಿನ ಬದಲು ರಸ್ತೆಯಲ್ಲೇ ಹರಿಯುವ ಪರಿಸ್ಥಿತಿ ಇದೆ’ ಎನ್ನುತ್ತಾರೆ ಇದೇ ಭಾಗದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರೊಬ್ಬರು.
ಬಿಜೈ, ಕುದ್ರೋಳಿ, ಶಿವಬಾಗ್ ಮತ್ತಿತರ ಕಡೆ ತುರ್ತಾಗಿ ತೋಡಿನ ಹೂಳು ತೆಗೆಯಬೇಕಿದೆ. ಇಲ್ಲಿ ಹುಲ್ಲು, ಗಿಡಗಂಟಿಗಳು ವ್ಯಾಪಿಸಿವೆ. ಭಾರೀ ಮಳೆಯಾದರೆ ನೀರಿನ ಹರಿವಿಗೆ ಸಮಸ್ಯೆ ಖಚಿತ.
ರಾಜಕಾಲುವೆ ಮತ್ತು ತೋಡಿನ ಹೂಳು ತೆಗೆಯುವ ಕೆಲಸ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ ಎಂದು ಪಾಲಿಕೆ ತಿಳಿಸಿದೆ. ಆದರೆ ಕೆಲವೆಡೆ ಮಾತ್ರ ಹೂಳು ತೆಗೆಯುವುದು ಆಗಬಾರದು. ತೋಡಿನುದ್ದಕ್ಕೂ ಶುಚಿಗೊಳಿಸಬೇಕು ಎನ್ನುತ್ತಾರೆ ಶಿವಬಾಗ್ ನಿವಾಸಿ ರಾಜೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ
Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್ ಆರೋಪ
Kinnigoli ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ
Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ
Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್ ಮುನಿರಾಜು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್ ಹಾದಿ ಹೀಗಿದೆ
Bengaluru: ಕೆಎಸ್ಆರ್ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್ ಸಂಚಾರ
Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್ ಸಂಜಯ್ ಮಾಂಜ್ರೇಕರ್
Bengaluru: ಆನ್ಲೈನ್ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.