![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 1, 2022, 3:36 PM IST
ಲಕ್ಷ್ಮೇಶ್ವರ: ಭೂ ಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆಯಾಗಿ ಜ್ಯೋತಿರ್ಲಿಂಗಗಳಷ್ಟೇ ಪವಿತ್ರ ಕ್ಷೇತ್ರವಾಗಬೇಕೆಂಬ ಲಿಂ|ಜ|ವೀರ ಗಂಗಾಧರ ಶಿವಾಚಾರ್ಯರ ಕನಸು, ಸಂಕಲ್ಪ ಈಡೇರಿಕೆಗೆ ಕಾಲ ಕೂಡಿ ಬಂದಿದೆ.
ಅವರ ಕೃಪಾಶೀರ್ವಾದದಿಂದ ಮುಕ್ತಿಮಂದಿರ ಧರ್ಮ ಕ್ಷೇತ್ರದಲ್ಲಿ ಏ.2 ರಂದು ಶನಿವಾರ ಬೆಳಿಗ್ಗೆ 9ಕ್ಕೆ ಬಾಳೆಹೊನ್ನೂರು ಜ|ಪ್ರಸನ್ನ ರೇಣುಕ ಡಾ|ವೀರ ಸೋಮೇಶ್ವರ ಶಿವಾಚಾರ್ಯರು ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಗದ್ದುಗೆಗಳ ಶಂಕುಸ್ಥಾಪನೆ(ಗುದ್ದಲಿ ಪೂಜೆ) ನೆರವೇರಿಸಲಿದ್ದಾರೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಹೇಳಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ 2-3 ದಶಕಗಳ ಭಕ್ತರ ಕನಸಾಗಿರುವ ತ್ರಿಕೋಟಿ ಲಿಂಗ ಸ್ಥಾಪನೆಗೆ ಅನೇಕ ಸಮಸ್ಯೆಗಳು ಎದುರಾದರೂ ಸಹ ಇದೀಗ ಲಿಂ|ಜಗದ್ಗುರುಗಳ ಸಂಕಲ್ಪ ಸಾಕಾರಕ್ಕೆ ಮುಂದಡಿ ಇಡಲಾಗುತ್ತಿದೆ.
ಕ್ಷೇತ್ರದಲ್ಲಿ ಈಗಾಗಲೇ ಸಿದ್ಧಗೊಂಡಿರುವ ಸಾವಿರಾರು ಶಿವಲಿಂಗಗಳು ಪ್ರತಿಷ್ಠಾಪನೆಗೊಂಡರೆ ಶ್ರೀಕ್ಷೇತ್ರ ದೇಶಾದ್ಯಂತ ಪ್ರಸಿದ್ಧಿ ಪಡೆಯಲಿದೆ. 2.5 ಅಡಿ ಎತ್ತರದ ಶಿವಲಿಂಗವೊಂದರಲ್ಲಿ 6000 ಗರ್ಭಲಿಂಗಗಳಿರುವಂತಹ 5000 ಶಿವಲಿಂಗಗಳು ಸೇರಿದಾಗ ತ್ರಿಕೋಟಿ ಲಿಂಗವಾಗುತ್ತವೆ. ಈ 5000 ಶಿವಲಿಂಗಗಳು 8 ವರ್ತುಲಗಳಲ್ಲಿ ಪ್ರತಿಷ್ಠಾಪಿತಗೊಂಡು ನಡುವೆ ಲಿಂ|ಜಗದ್ಗುರುಗಳ ಹಾಗೂ ರೇಣುಕರ ಬೃಹತ್ ಮೂರ್ತಿ ಮಂದಿರ ನಿರ್ಮಾಣಗೊಳ್ಳಲಿದೆ.
ಈಗಾಗಲೇ ಕ್ಷೇತ್ರದಲ್ಲಿ 4500ಕ್ಕೂ ಹೆಚ್ಚು ಶಿವಲಿಂಗಗಳು, ಒಂದು ಬೃಹತ್ ಶಿವಲಿಂಗ ಮತ್ತು ಬಸವಣ್ಣನ ಮೂರ್ತಿ ಸಿದ್ಧಗೊಂಡು ಶ್ರೀಕ್ಷೇತ್ರದಲ್ಲಿ ನೆಲೆನಿಂತಿವೆ. ಲಿಂ|ಶ್ರೀಗಳ ಸಂಕಲ್ಪ ಈಡೇರಿಕೆಗೆ ನಾಡಿನ ಅನೇಕ ಭಕ್ತರು ಸಹಾಯ ನೀಡಿದ್ದು, 1 ಶಿವಲಿಂಗ ಸೇವೆಗೆ 6001 ರೂ. ನಿಗದಿಪಡಿಸಲಾಗಿದೆ ಎಂದರು.
ಬಹುದೊಡ್ಡ ಧರ್ಮ ಕಾರ್ಯಕ್ಕೆ ಭಕ್ತರಿಂದ ತನು, ಮನ, ಧನದ ಸಹಾಯ- ಸಹ ಕಾರದ ಅಗತ್ಯವಿದೆ. “ಮಾನವ ಧರ್ಮಕ್ಕೆ ಜಯವಾಗಲಿ- ಧರ್ಮದಿಂದಳೇ ವಿಶ್ವಕ್ಕೆ ಶಾಂತಿ’ ಎಂಬ ಘೋಷಣೆಯನ್ನು ಜಗತ್ತಿಗೆ ನೀಡಿದ ಲಿಂ|ಜ|ವೀರಗಂಗಾಧರ ಶಿವಾಚಾರ್ಯರು ಸಂಕಲ್ಪ ಈಡೇರಿಕೆಗೆ ಕೈಗೊಂಡ ಮಹೋನ್ನತ ಕಾರ್ಯಕ್ಕೆ ರಂಭಾಪುರಿ ಪೀಠದ ಜಗದ್ಗುರುಗಳ ಅನುಗ್ರಹ, ಭಕ್ತ ಗಣದ ಸಹಾಯ- ಸಹಕಾರದಿಂದ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಕಾರ್ಯಕ್ಕೆ ಮುಂದಡಿಯಿಡಲು ಸಾಧ್ಯವಾಗುತ್ತಿವೆ ಎಂದರು.
ಈ ಶ್ರೇಷ್ಠ ಕಾರ್ಯ ನಿರ್ವಿಘ್ನವಾಗಿ ಸಾಗಲು ಯುಗಾದಿಯ ಪರ್ವಕಾಲದ ಶುಭಕೃತ ನಾಮ ಸಂವತ್ಸರದಲ್ಲಿ ರಂಭಾಪುರಿ ಜಗ ದ್ಗುರುಗಳು ಭೂಮಿಪೂಜೆ ನೆರವೇರಿಸಲಿದ್ದಾರೆ. ನಾಡಿನ ಹರ-ಗುರು-ಚರಮೂರ್ತಿಗಳು, ರಾಜಕೀಯ ಮುಖಂಡರು, ಗಣ್ಯರು ಭಾಗವಹಿಸುವರು ಎಂದರು.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.