ವಿಮಾಧಿಕಾರಿ ಅಮಾನತು ವಿರೋಧಿಸಿ ಪ್ರತಿಭಟನೆ
Team Udayavani, Apr 2, 2022, 1:24 PM IST
ಬೀದರ: ಜಿಲ್ಲಾ ವಿಮಾ ಅಧಿಕಾರಿ ರಾಜಶೇಖರ ಗೌರೆ ಅಮಾನತು ಖಂಡಿಸಿ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ಸಿಎಂಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಉಪ ನಿರ್ದೇಶಕ ಹುದ್ದೆ ತಪ್ಪಿಸಲು ವಿಮಾ ಇಲಾಖೆಯ ನಿರ್ದೇಶಕಿ ಕೆ. ಸಾವಿತ್ರಿ ಅವರು ಉದ್ದೇಶಪೂರ್ವಕವಾಗಿ ಗೌರೆ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಗೌರೆ ಅವರು 2019ರಿಂದ ಈವರೆಗೆ ಜಿಲ್ಲಾ ವಿಮಾ ಅಧಿಕಾರಿಗಳ ರಾಜ್ಯದ ಹಾಗೂ ಕಲ್ಯಾಣ ಕರ್ನಾಟಕ ಜೇಷ್ಠತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೂ, ಅವರಿಗೆ ಬಡ್ತಿ ನೀಡಿಲ್ಲ. ಕಿರಿಯರನ್ನು ಬಡ್ತಿಗೆ ಪರಿಗಣಿಸಲಾಗಿದೆ. ಸಾವಿತ್ರಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ದಲಿತ ಅಧಿಕಾರಿಗಳಿಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಸಮಿತಿಯ ಗೌರವಾಧ್ಯಕ್ಷ ತಿಪ್ಪಣ್ಣ ಶಿವಪೂರೆ, ಅಧ್ಯಕ್ಷ ಮಲ್ಲಿಕಾರ್ಜುನ ಕಾಂಬಳೆ, ಪ್ರಧಾನ ಕಾರ್ಯದರ್ಶಿ ಗಣಪತಿ ಭಕ್ತಾ, ವಿವಿಧ ನೌಕರರ ಸಂಘಟನೆ ಪ್ರಮುಖರಾದ ಪಾಂಡುರಂಗ ಬೆಲ್ದಾರ್, ಗೋವಿಂದ ಪೂಜಾರಿ, ರಾಜಕುಮಾರ ಮಾಳಗೆ, ವೈಜಿನಾಥ ಸಾಗರ, ನಾಗೇಂದ್ರನಾಥ ಸಿಂಗೋಡೆ, ಸುರೇಶ ಟಾಳೆ, ವಿಜಯಕುಮಾರ, ಡಾ| ಕಾಶೀನಾಥ ಚಲ್ವಾ, ರಾಜಪ್ಪ ಗುನ್ನಳ್ಳಿ, ಶಿವಕುಮಾರ ಸದಾಫುಲೆ, ಶಿವರಾಜ ಬಿರಾದಾರ್, ರಾಜು ಸಾಗರ, ವಿಷ್ಣುಕಾಂತ ಠಾಕೂರ್, ಭೀಮಣ್ಣ ಕೊಂಕಣೆ, ಸಂಜು ಬಿ. ಸೂರ್ಯವಂಶಿ, ಎಂ.ಎಸ್. ಮನೋಹರ, ಸೂರ್ಯಕಾಂತ ಸಿಂಗೆ, ವಿಠ್ಠಲದಾಸ ಪ್ಯಾಗೆ, ಸುಮಂತ ಕಟ್ಟಮನಿ, ಮಾರುತಿ ಪೂಜಾರಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar ನಗರದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಪ್ರತಿಭಟನಾ ರ್ಯಾಲಿ
Bidar: ನಿವೇಶನಗಳ ವಾಪಸ್ ಕೊಟ್ರೂ ಸಿದ್ದರಾಮಯ್ಯ ಕುಟುಂಬಕ್ಕೆ ಕಂಟಕ ತಪ್ಪಲ್ಲ: ಶಾಸಕ ಬೆಲ್ದಾಳೆ
Police; ಹೃದಯಾಘಾತದಿಂದ ಕರ್ತವ್ಯನಿರತ 28 ವರ್ಷದ ಪೊಲೀಸ್ ಪೇದೆ ಸಾ*ವು
UK ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ರಾಜ್ಯದ ಅದಿಶ್ ರಜಿನಿಶ್ ವಾಲಿ
Bidar; ಮಹಿಳಾ ಪಿಎಸ್ಐ ಮೇಲೆ ಹಲ್ಲೆ ಮಾಡಿದ ಪೇದೆ ಅಮಾನತು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.