ಮೆಟ್ರೋದಲ್ಲೇ “ಬೆಂಗಳೂರು ರೌಂಡ್ಸ್‌’ಗೆ ಚಿಂತನೆ; ‌ ಪ್ರವಾಸಿ ತಾಣಗಳ ದರ್ಶನ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುತ್ತಿದೆ.

Team Udayavani, Apr 8, 2022, 3:50 PM IST

ಮೆಟ್ರೋದಲ್ಲೇ “ಬೆಂಗಳೂರು ರೌಂಡ್ಸ್‌’ಗೆ ಚಿಂತನೆ; ‌ ಪ್ರವಾಸಿ ತಾಣಗಳ ದರ್ಶನ

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಒಂದು ದಿನ ಹಾಗೂ ಮೂರು ದಿನಗಳ ಪಾಸು ವ್ಯವಸ್ಥೆ ಜಾರಿಗೊಳಿಸಿದ ಬೆನ್ನಲ್ಲೇ ಈ ಮಾದರಿಯ ಪಾಸುಗಳಿಗೆ ಹೆಚ್ಚು ಜನರನ್ನು ಕರೆತರಲು ಹೊಸ ಪ್ರಯಾಣಿಕರ ವರ್ಗದ ಕಡೆಗೆ ನೋಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌), ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಏಜೆನ್ಸಿಗಳೊಂದಿಗೆ ಕೈಜೋಡಿಸಲು ಚಿಂತನೆ ನಡೆಸಿದೆ.

ಈ ಪ್ರಯತ್ನ ಯಶಸ್ವಿಯಾದರೆ, ನಗರಕ್ಕೆ ಬರುವ ಪ್ರವಾಸಿಗರು ಮೆಟ್ರೋದಲ್ಲೇ “ಬೆಂಗಳೂರು ರೌಂಡ್ಸ್‌’ ಹಾಕಬಹುದು. ಇದರಿಂದ ಸಮಯವೂ ಉಳಿತಾಯ ಆಗುತ್ತದೆ. ಜತೆಗೆ ಸಂಚಾರ ‌ದಟ್ಟಣೆ ಕಿರಿಕಿರಿಯೂ ಇರುವುದಿಲ್ಲ. ಖರ್ಚು ತುಸು ಕಡಿಮೆ ಆಗಲಿದೆ. ಈ ಎಲ್ಲ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಟ್ರಾವೆಲ್‌ ಏಜೆನ್ಸಿಗಳೊಂದಿಗೆ ಕೈಜೋಡಿಸುವ ಆಲೋಚನೆ ನಡೆಸಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

ಪ್ರಸ್ತುತ ನಿತ್ಯ ಸಾವಿರಾರು ಪ್ರವಾಸಿಗರು ನಗರಕ್ಕೆ ಆಗಮಿಸುತ್ತಾರೆ. ಇದರಲ್ಲಿ ಬಹುತೇಕರು “ಪ್ಯಾಕೇಜ್‌ ಟೂರ್‌’ನಲ್ಲಿ ಬಂದು, ಇಲ್ಲಿನ ಪ್ರವಾಸಿ ತಾಣಗಳಿಗೆ ಟೂರಿಸ್ಟ್‌ ಬಸ್‌ಗಳಲ್ಲೇ ಭೇಟಿ ನೀಡುತ್ತಾರೆ. ಹೀಗೆ ಪ್ರವಾಸಿಗರನ್ನು ಕರೆತರುವ ಏಜೆನ್ಸಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು, ಮೆಟ್ರೋ ಮೂಲಕ ಪ್ರವಾಸಿ ತಾಣಗಳ ದರ್ಶನ ಮಾಡಿ ಸುವ ಐಡಿಯಾ ಇದೆ. ಇದರಿಂದ ಪ್ರವಾಸಿಗರಿಗೂ ಹೊಸ ಅನುಭವ ಸಿಗಲಿದೆ. ತನಗೆ ಆದಾಯವೂ ಬರಲಿದೆ ಎಂಬ ಲೆಕ್ಕಾಚಾರ ನಿಗಮದ್ದಾಗಿದೆ.

ಈ ಚಿಂತನೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಒಂದೆರಡು ತಿಂಗಳಲ್ಲಿ ಇದಕ್ಕೊಂದು ರೂಪುರೇಷೆ ನೀಡಲಾಗುವುದು. ಒಂದು ವೇಳೆ ಮಾತುಕತೆ ಫ‌ಲಿಸಿದರೆ, ಟ್ರಾವೆಲ್‌ ಏಜೆನ್ಸಿಗಳು ಇದಕ್ಕೆ ಪೂರಕ ವಾಗಿ ಪ್ರವಾಸಿ ತಾಣಗಳ ವೀಕ್ಷಣೆಗೆ ಪ್ರತ್ಯೇಕ ನಕ್ಷೆ ಹಾಕಿಕೊಳ್ಳಲಿವೆ. ಇನ್ನು “ನಮ್ಮ ಮೆಟ್ರೋ’ ಹಾದುಹೋಗುವ ಮಾರ್ಗದಲ್ಲೇ ವಿಧಾನಸೌಧ, ಲಾಲ್‌ಬಾಗ್‌, ಕಬ್ಬನ್‌ ಉದ್ಯಾನ, ಮಾರುಕಟ್ಟೆಗೆ ಸಮೀಪ ಇರುವ ಟಿಪ್ಪು ಬೇಸಿಗೆ ಅರಮನೆ, ಇಸ್ಕಾನ್‌ ಒಳಗೊಂಡಂತೆ
ಹಲವು ಪ್ರವಾಸಿ ತಾಣಗಳು ಬರುತ್ತವೆ. ಮಂತ್ರಿಸ್ಕ್ವೇರ್‌, ಒರಾಯನ್‌ ನಂತಹ ಮಾಲ್‌ಗ‌ಳಿಗೆ ಕೂಡ ಸಂಪರ್ಕ ಕಲ್ಪಿಸುವುದರಿಂದ ಶಾಪಿಂಗ್‌ ಗೂ ಅನುಕೂಲ ಆಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಈ ಪ್ರಯೋಗದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಎಷ್ಟು ಏರಿಕೆ ಆಗಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ, ಮುಂಬ ರುವ ದಿನಗಳಲ್ಲಿ ಮೆಟ್ರೋ ಜಾಲ ಮತ್ತಷ್ಟು ವಿಸ್ತರಣೆ ಆಗಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ಇದು ಉತ್ತಮ ಫ‌ಲ ನೀಡಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಏಜೆನ್ಸಿಗಳಿಗೆ ಏನು ಲಾಭ?: ಟೂರಿಸ್ಟ್‌ ಟ್ರಾವೆಲ್‌ ಏಜೆನ್ಸಿಗಳಿಗೆ ಸಗಟು ದಿನದ ಪಾಸುಗಳನ್ನು ಖರೀದಿಸಿದರೆ ರಿಯಾಯ್ತಿ ನೀಡಲು ಅವಕಾಶ ಇದೆ. ಅಥವಾ ಇಂತಿಷ್ಟು ಪ್ರವಾಸಿಗರನ್ನು ಕರೆತಂದರೆ ರಿಯಾಯ್ತಿಗಳನ್ನು ನೀಡಬಹುದು. ಆದರೆ, ಇದೆಲ್ಲವೂ ಮಾತುಕತೆ ಮತ್ತು ಅದಕ್ಕೆ ದೊರೆಯುವ ಸ್ಪಂದನೆಯನ್ನು ಅವಲಂಬಿಸಿದೆ.

ಇನ್ನೂ ಯಾವುದೇ ಚರ್ಚೆಗಳು ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಏಜೆನ್ಸಿಗಳೊಂದಿಗೆ ನಡೆದಿಲ್ಲ. ಈಗ ಪರಿಚಯಿಸಿರುವ ಒಂದು ದಿನದ ಮತ್ತು ಮೂರು ದಿನಗಳ ಪಾಸಿಗೆ ಪ್ರತಿಕ್ರಿಯೆ ನೋಡಿಕೊಂಡು ಮುಂದುವರಿಯಲು ಉದ್ದೇಶಿಸಲಾಗಿದೆ. ಈ ಮಧ್ಯೆ ಏಪ್ರಿಲ್‌ 2ರಿಂದ ಪರಿಚಯಿಸಲಾದ ದೈನಂದಿನ ಮೆಟ್ರೋ ಪಾಸುಗಳ ಮಾರಾಟ ಅಷ್ಟಕ್ಕಷ್ಟೇ ಇದೆ. ದಿನದ ಪಾಸಿಗೆ 150 ರೂ. ಇದ್ದರೆ, ಮೂರು ದಿನದ ಪಾಸಿಗೆ 350 ರೂ. ನಿಗದಿಪಡಿಸಲಾಗಿದೆ (50 ರೂ. ಠೇವಣಿ ಹೊರತುಪಡಿಸಿ). ನಿತ್ಯ ಅಬ್ಬಬ್ಟಾ ಎಂದರೆ 50 ಪಾಸುಗಳು ಮಾರಾಟ ಆಗುತ್ತಿವೆ. ಇದರಲ್ಲಿ ಒಂದು ದಿನದ ಪಾಸು 30ರಿಂದ 40 ಇದ್ದರೆ, ಉಳಿದವು ಮೂರು ದಿನಗಳ ಪಾಸು ಆಗಿವೆ. ಆದರೆ, ಈಗಲೇ ನಿರೀಕ್ಷಿತ ಸ್ಪಂದನೆ ಇಲ್ಲ ಎಂಬ ನಿರ್ಧಾರಕ್ಕೆ ಬರಲಾಗದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಬಿಎಂಟಿಸಿ ಬೆಂಗಳೂರು ರೌಂಡ್ಸ್‌ಬಹುತೇಕ ಸ್ಥಗಿತ
ಬಿಎಂಟಿಸಿ ವತಿಯಿಂದ ಕೂಡ “ಬೆಂಗಳೂರು ರೌಂಡ್ಸ್‌’ ಇದ್ದು, ವೋಲ್ವೋ ಬಸ್‌ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ 15ರಿಂದ 20 ತಾಣಗಳ ವೀಕ್ಷಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಕೋವಿಡ್‌ ಪರಿಣಾಮ ನೀರಸ ಸ್ಪಂದನೆ ದೊರಕಿದ್ದು, ಬಹುತೇಕ ಸ್ಥಗಿತಗೊಂಡಿದೆ

ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಟೂರಿಸ್ಟ್‌ ಟ್ರಾವೆಲ್‌ ಏಜೆನ್ಸಿಗಳ ಜತೆ ಕೈಜೋಡಿಸುವ ಆಲೋಚನೆ ಇದೆ. ತಿಂಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಈ ಪ್ರಯತ್ನದಿಂದ ಪ್ರವಾಸಿಗರಿಗೆ ಸಮಯ ಉಳಿತಾಯ, ನಗರದ ಪ್ರವಾಸಿ ತಾಣಗಳ ಪರಿಚಯ, ಏಜೆನ್ಸಿಗಳಿಗೂ ಅನುಕೂಲ ಆಗಲಿದೆ.
●ಅಂಜುಂ ಪರ್ವೇಜ್‌,
ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್

*ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.