ವಿಶ್ವಯುದ್ಧಕ್ಕೆ ಮಾಸ್ಕೊವಾ ನಾಂದಿ? ಯುದ್ಧನೌಕೆಯ ಮುಳುಗಡೆಯಿಂದ ರಷ್ಯಾ ಸರಕಾರ ಕೆಂಡಾಮಂಡಲ


Team Udayavani, Apr 16, 2022, 8:35 AM IST

ವಿಶ್ವಯುದ್ಧಕ್ಕೆ ಮಾಸ್ಕೊವಾ ನಾಂದಿ? ಯುದ್ಧನೌಕೆಯ ಮುಳುಗಡೆಯಿಂದ ರಷ್ಯಾ ಸರಕಾರ ಕೆಂಡಾಮಂಡಲ

ಕೀವ್‌: ರಷ್ಯಾದ ಪ್ರಮುಖ ಯುದ್ಧನೌಕೆ “ಮಾಸ್ಕೊವಾ’ದ ಮುಳುಗಡೆಯೇ 3ನೇ ವಿಶ್ವಯುದ್ಧಕ್ಕೆ ನಾಂದಿ ಹಾಡಲಿದೆಯೇ?

ಹೌದು ಎನ್ನುತ್ತಿವೆ ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮ. “ಸಮರನೌಕೆಯ ನಾಶ ದೊಂದಿಗೆ ಮೂರನೇ ವಿಶ್ವಯುದ್ಧ ಈಗ ತಾನೇ ಶುರುವಾಗಿದೆ’ ಎಂದು ರಷ್ಯಾದ ಮಾಧ್ಯಮ  ಶುಕ್ರವಾರ ಘೋಷಿಸಿದೆ. ಕಪ್ಪು ಸಮುದ್ರದ ದಿಗ್ಗಜನೆಂದೇ ಕರೆಯಲ್ಪಡುತ್ತಿದ್ದ “ಮಾಸ್ಕೊವಾ’ ನೌಕೆಯು ಬೆಂಕಿ ಅವಘಡದಿಂದ ಹಾನಿಗೀಡಾಯಿತು ಎಂದು ರಷ್ಯಾ ಹೇಳಿತ್ತಾದರೂ, ತಮ್ಮ ನೆಪ್ಟ್ಯೂನ್ ಕ್ಷಿಪಣಿಯ ಮೂಲಕ ಅದನ್ನು ಧ್ವಂಸಗೈದೆವು ಎಂದು ಉಕ್ರೇನ್‌ ಹೇಳಿಕೊಂಡಿತ್ತು. ಇದು ರಷ್ಯಾದ ಆಕ್ರೋಶಕ್ಕೆ ಕಾರಣವಾಗಿದೆ.

ಅಲ್ಲದೇ, “ಮಾಸ್ಕೊವಾ ಹಡಗಿನ ಮುಳುಗಡೆ ಯನ್ನು ರಷ್ಯಾ ನೆಲದ ಮೇಲಾದ ದಾಳಿ’ ಎಂದು ಬಣ್ಣಿಸಿರುವ ಸರಕಾರಿ ಮಾಧ್ಯಮ, “ನಾವು ಈಗ ಕೇವಲ ಉಕ್ರೇನ್‌ ಮೇಲೆ ಆಕ್ರಮಣ ಮಾಡುತ್ತಿಲ್ಲ. ನ್ಯಾಟೋ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತಿದ್ದೇವೆ. ಮೂರನೇ ಜಾಗತಿಕ ಯುದ್ಧ ಆರಂಭವಾಗಿದೆ’ ಎಂದು ಹೇಳಿದೆ.

1982ರ ಬಳಿಕ ಇದೇ ಮೊದಲು: 16 ದೀರ್ಘ‌ವ್ಯಾಪ್ತಿಯ ಕ್ರೂಸ್‌ ಕ್ಷಿಪಣಿಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಮಾಸ್ಕೊವಾ ನೌಕೆಗಿತ್ತು. ಈಗ ಇದು ಮುಳುಗುವ ಮೂಲಕ, 1982ರ ಫಾಕ್‌ಲ್ಯಾಂಡ್ಸ್‌ ಯುದ್ಧದ ಬಳಿಕ ಸಮರವೊಂದರಲ್ಲಿ ಮುಳುಗಿದ ಅತಿದೊಡ್ಡ ಯುದ್ಧನೌಕೆ ಎಂದೆನಿಸಿಕೊಂಡಿದೆ. ಅಂದಿನ ಯುದ್ಧದಲ್ಲಿ ಎಆರ್‌ಎ ಜನರಲ್‌ ಬೆಲ್‌ಗ್ರಾನೋ ಎಂಬ ಕ್ರೂಸ್‌ ನೌಕೆಯು ಮುಳುಗಿ, 300 ನಾವಿಕರು ಮೃತಪಟ್ಟಿದ್ದರು.

ತೀವ್ರಗೊಂಡ ದಾಳಿ: ಸಮರ ನೌಕೆಯ ಪತನದಿಂದ ಕೆಂಡಾಮಂಡಲವಾಗಿರುವ ರಷ್ಯಾ, ಇನ್ನು ಮುಂದೆ ಕೀವ್‌ ಮೇಲಿನ ದಾಳಿಯನ್ನು ತೀವ್ರಗೊಳಿಸುವುದಾಗಿ ಶುಕ್ರವಾರ ಘೋಷಿಸಿದೆ. ಜತೆಗೆ, ತನ್ನ ಗಡಿ ಪ್ರದೇಶಗಳ ಮೇಲೆ ಉಕ್ರೇನ್‌ ವೈಮಾನಿಕ ದಾಳಿ ನಡೆಸುತ್ತಿರುವುದು ಕೂಡ ರಷ್ಯಾದ ಸಿಟ್ಟನ್ನು ಇಮ್ಮಡಿಗೊಳಿಸಿದೆ. ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಳ್ಳುವ ಯತ್ನ ವಿಫ‌ಲವಾದ ಅನಂತರ, ರಷ್ಯಾ ನಿಧಾನವಾಗಿ ಕೀವ್‌ನಿಂದ ಹಿಂದೆ ಸರಿದಿತ್ತು. ಹೀಗಾಗಿ, ಕಳೆದ ಕೆಲವು ದಿನಗಳಿಂದ ಅಲ್ಲಿನ ಪರಿಸ್ಥಿತಿ ಸಹಜತೆಗೆ ಮರಳುತ್ತಿತ್ತು. ಆದರೆ, ಈಗ ರಷ್ಯಾ ಮತ್ತೆ ದಾಳಿಯ ಬೆದರಿಕೆ ಹಾಕಿರುವುದು ಕೀವ್‌ ಜನತೆಯಲ್ಲಿ ಆತಂಕ ಮೂಡಿಸಿದೆ.

ಬಸ್‌ ಮೇಲೆ ದಾಳಿ: 7 ಸಾವು : ಯುದ್ಧಪೀಡಿತ ಪೂರ್ವ ಉಕ್ರೇನ್‌ನ ಇಝಿ³ನ್‌ ಜಿಲ್ಲೆಯಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಹೊತ್ತೂಯ್ಯುತ್ತಿದ್ದ ಬಸ್‌ನ ಮೇಲೆಯೇ ರಷ್ಯಾ ಸೈನಿಕರು ದಾಳಿ ನಡೆಸಿದ್ದಾರೆ. ಪರಿಣಾಮ 7 ಮಂದಿ ನಾಗರಿಕರು ಮೃತಪಟ್ಟಿದ್ದು, 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೀವ್‌ ಹೊರಭಾಗದ ಲ್ಲಿರುವ ಉಕ್ರೇನ್‌ನ ಕ್ಷಿಪಣಿ ಉತ್ಪಾದನ ಘಟಕದ ಮೇಲೆ ರಷ್ಯಾ ಶುಕ್ರವಾರ ದಾಳಿ ನಡೆಸಿದೆ.

ಫಿನ್ಲಂಡ್‌, ಸ್ವೀಡನ್‌ಗೂ ರಷ್ಯಾ ದಾಳಿ ಎಚ್ಚರಿಕೆ
ಅಮೆರಿಕ ನೇತೃತ್ವದ ನ್ಯಾಟೋಗೇನಾದರೂ ಸೇರ್ಪಡೆಗೊಂಡರೆ ಪರಿಣಾಮ ನೆಟ್ಟಗಿರಲ್ಲ ಎಂದು ತನ್ನ ನೆರೆಯ ದೇಶಗಳಾದ ಫಿನ್ಲಂಡ್‌ ಮತ್ತು ಸ್ವೀಡನ್‌ಗೆ ರಷ್ಯಾ ಎಚ್ಚರಿಕೆ ನೀಡಿದೆ. ಆಯ್ಕೆ ನಿಮಗೆ ಬಿಟ್ಟಿದ್ದೇವೆ. ನ್ಯಾಟೋ ಸೇರ್ಪಡೆಯತ್ತ ನೀವು ಹೆಜ್ಜೆಯಿಟ್ಟರೆ ಅದರ ಪರಿಣಾಮ ನಿಮ್ಮ ಮೇಲೆ ಮತ್ತು ಇಡೀ ಯುರೋಪ್‌ ಮೇಲೆ ಹೇಗಿರುತ್ತದೆ ಎಂಬುದನ್ನು ಯೋಚಿಸಿ ನಿರ್ಧಾರ ಕೈಗೊಳ್ಳಿ. ಹಾಗೇನಾದರೂ ಆದರೆ ಅಣ್ವಸ್ತ್ರಗಳು ಹಾಗೂ ಹೈಪರ್‌ಸಾನಿಕ್‌ಗಳ ನಿಯೋಜನೆಯನ್ನೂ ಮಾಡಬೇಕಾಗುತ್ತದೆ ಎಂದೂ ರಷ್ಯಾ ವಿದೇಶಾಂಗ ಇಲಾಖೆ ಬೆದರಿಕೆ ಹಾಕಿದೆ.

ಅಮೆರಿಕದ ಮೇಲೂ ಗರಂ
ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಸರಬರಾಜನ್ನು ಹೀಗೇ ಮುಂದು ವರಿಸಿದರೆ ಅದರ ಪರಿಣಾಮ ಎದುರಿಸಬೇಕಾದೀತು ಎಂದು ಅಮೆರಿಕಕ್ಕೂ ರಷ್ಯಾ ಎಚ್ಚರಿಕೆ ನೀಡಿದೆ. ಬೇಜವಾಬ್ದಾರಿಯುತವಾಗಿ ನೀವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದೀರಿ. ಇದು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಊಹಿಸಲಾಗದಷ್ಟು ಸಮಸ್ಯೆ ತಂದೊಡ್ಡಲಿದೆ. ಕೂಡಲೇ ಇದನ್ನು ನಿಲ್ಲಿಸಿ ಎಂದು ಹೇಳಿದೆ.

ಸಮರಾಂಗಣದಲ್ಲಿ ಕೇವಲ 24 ಗಂಟೆಗಳಲ್ಲಿ 39 ಸೈನಿಕರು, 4 ವಾಹನಗಳನ್ನು ಕಳೆದುಕೊಂಡ ಪುತಿನ್‌ ಪಡೆ ಬೆಲ್ಗರೋಡ್‌ನ‌ಲ್ಲಿ ಉಕ್ರೇನ್‌ನ ಶೆಲ್‌ ದಾಳಿಯಿಂದ 20 ಕಟ್ಟಡಗಳು, ಶಾಲೆಗಳಿಗೆ ಹಾನಿ: ರಷ್ಯಾ ಆರೋಪ ಫ್ರಾನ್ಸ್‌ನ ರೇಡಿಯೋ ಆರ್‌ಎಫ್ಐ ವೆಬ್‌ಸೈಟ್‌ ಹ್ಯಾಕ್‌ ಮಾಡಿರುವುದಾಗಿ ಘೋಷಿಸಿದ ರಷ್ಯಾ ಯುದ್ಧದಿಂದಾಗಿ 50 ಲಕ್ಷ ಮಂದಿ ಉಕ್ರೇನ್‌ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ರುಬಿಜ್ನೆ, ಪೋಪಸ್ನಾ ಮತ್ತು ಮರಿಯುಪೋಲ್‌ ವಶಕ್ಕೆ ಪಡೆಯುವತ್ತ ಮುನ್ನುಗ್ಗಿದ ಪುತಿನ್‌ ಪಡೆ ಮರಿಯುಪೋಲ್‌ನಲ್ಲೂ ದಾಳಿ ತೀವ್ರಗೊಳಿಸಿದ ರಷ್ಯಾ. ದೀರ್ಘ‌ವ್ಯಾಪ್ತಿಯ ಕ್ಷಿಪಣಿಗಳ ಬಳಸಿ ದಾಳಿ .

ರಷ್ಯಾದವರು ನಮಗೆ ಗರಿಷ್ಠವೆಂದರೆ ಐದೇ ದಿನ ಬದುಕಿರುತ್ತೀರಿ ಎಂದಿದ್ದರು. ಆದರೆ, ಉಕ್ರೇನಿಯನ್ನರಾದ ನಾವು 50 ದಿನಗಳ ಯುದ್ಧದಲ್ಲಿ ಬದುಕುಳಿದಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ.
– ವೊಲೊಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್‌ ಅಧ್ಯಕ್ಷ

ಟಾಪ್ ನ್ಯೂಸ್

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

1-lokaa

Lokayukta; 25 ಸಾವಿರ ರೂ.ಲಂಚ ಪಡೆಯುವಾಗ ಬಲೆಗೆ ಬಿದ್ದ ಎಡಿಎಲ್‌ಆರ್‌!!

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ

Zakir Naik

Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…

Donald-Trumph

Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್‌ಗೆ ಟ್ರಂಪ್‌

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

1-trew

Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Sulya: ಅವಾಚ್ಯ ಮಾತು: ಮಹಿಳೆಯಿಂದ ಪೊಲೀಸರಿಗೆ ದೂರು

puttige

Udupi; ಗೀತಾರ್ಥ ಚಿಂತನೆ 57: ದುರ್ಯೋಧನನಲ್ಲಿ ಮಾನಸಿಕ ಸ್ಥೈರ್ಯ ಕುಸಿತ

1-BCCI

Gwalior T20: ಬಾಂಗ್ಲಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ

Big-Bos

BBK11: ಮೊದಲ ವಾರದಲ್ಲೇ ಬಿಗ್ ಬಾಸ್ ಆಟ ಮುಗಿಸಿದ ಯಮುನಾ ಶ್ರೀನಿಧಿ!

HDK-Chennapattana

By Polls Fight: ಡಿಸಿಎಂ ಪದೇ ಪದೇ ಬರ್ತಿರೋದು ಕುರ್ಚಿಗಾಗಿ ಅಲ್ವಾ?: ಎಚ್‌.ಡಿ.ಕುಮಾರಸ್ವಾಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.