ಲಕ್ಷ ದೋಚಲು ಬಂದವರು 6 ಸಾವಿರ ಕದ್ದು ನಿವೃತ್ತ ಯೋಧನ ಕೊಂದರು!


Team Udayavani, Apr 16, 2022, 12:59 PM IST

ಲಕ್ಷ ದೋಚಲು ಬಂದವರು 6 ಸಾವಿರ ಕದ್ದು ನಿವೃತ್ತ ಯೋಧನ ಕೊಂದರು!

ಬೆಂಗಳೂರು: ಲಕ್ಷ-ಲಕ್ಷ ದರೋಡೆಗೆಂದು ಬಂದವರು ಪುಡಿಗಾಸಿಗಾಗಿ ನಿವೃತ್ತ ಯೋಧನನ್ನು ಕೊಂದು ಇದೀಗ ಜೈಲು ಸೇರಿದ್ದಾರೆ.

ಇತ್ತೀಚೆಗೆ ಹಾಡಹಾಗಲೇ ಮನೆಗೆ ನುಗ್ಗಿ ನಿವೃತ್ತ ಯೋಧರೊಬ್ಬರನ್ನು ಬರ್ಬರವಾಗಿ ಹತ್ಯೆಗೈದಿದ್ದ ಇಬ್ಬರು ಸಹೋದರರು ಸೇರಿ ಆರು ಮಂದಿ ಹಲಸೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಾರತ್ತಹಳ್ಳಿ ನಿವಾಸಿ ಬಾಬು (29) ಮತ್ತು ಆಂಧ್ರ ಪ್ರದೇಶದ ಕುಪ್ಪಂ ಜಿಲ್ಲೆಯ ಈತನ ಸಹೋದರ ಮುರಳಿ (32) ಹಾಗೂ ಸೋದರ ಸಂಬಂಧಿಗಳಾದ ಗಜೇಂದ್ರ ನಾಯಕ್‌ (28), ದೇವೇಂದ್ರ (34) ಹಾಗೂ ರಾಜೇಂದ್ರ (34) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 2 ಕಾರುಗಳು, ಕೃತ್ಯಕ್ಕೆ ಬಳಸಿದ್ದ ಬೀಗ, ಒಂದು ಆ್ಯಪಲ್‌ ಮೊಬೈಲ್‌ ಜಪ್ತಿ ಮಾಡಲಾಗಿದೆ. ಆರೋಪಿಗಳು ಏ.13ರಂದು ದೊಮ್ಮಲೂರು ಲೇಔಟ್‌ ನಿವಾಸಿ ಜ್ಯೂಡ್‌ ತೆಡ್ಡಾಸ್‌ ಅಲಿಯಾಸ್‌ ಸುರೇಶ್‌(54) ಎಂಬುವರನ್ನು ಕೊಂದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಆಸ್ಪತ್ರೆಯಲ್ಲಿ ಪರಿಚಯ: ಕೆಲ ವರ್ಷಗಳ ಹಿಂದೆ ಪತ್ನಿಗೆ ವಿಚ್ಚೇಧನ ನೀಡಿದ್ದ ಸುರೇಶ್‌, ತಾಯಿ ಜತೆ ವಾಸವಾಗಿದ್ದು, ತಾಯಿಗೆ ಅನಾರೋಗ್ಯ ಕಾರಣಕ್ಕೆ ಸಮೀಪದ ಪ್ರತಿಷ್ಠಿತ ಆಸ್ಪತ್ರೆಗೆ ಕರೆದೊಯ್ದಿದ್ದರು. ಈವೇಳೆ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ ಬಾಬು ಪರಿಚಯವಾಗಿದೆ. ಗುಣಮುಖರಾಗಿ ಮನೆಗೆ ಬಂದಾಗ, ಸುರೇಶ್‌ ತಾಯಿ ನೋಡಿಕೊಳ್ಳಲೆಂದು ಬಾಬುನನ್ನು ತನ್ನ ಮನೆಯಲ್ಲಿಯೇ ಎರಡು ತಿಂಗಳು ಇರಿಸಿಕೊಂಡಿದ್ದರು. ಈ ವೇಳೆ ಸುರೇಶ್‌ ಮತ್ತು ಬಾಬು ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ತಾಯಿ ಮೃತಪಟ್ಟ ನಂತರವೂ ಆಗಾಗ್ಗೆ ಬಾಬು ಮನೆಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಆಸ್ತಿ ವಿಚಾರ ಹೇಳಿಕೊಂಡಿದ್ದಕ್ಕೆ ಕೊಲೆ: ಮನೆಗೆ ಬರುತ್ತಿದ್ದ ಬಾಬು ಬಳಿ ಸುರೇಶ್‌, ಆಸ್ತಿ ವಿಚಾರದಲ್ಲಿ 40 ಲಕ್ಷ ರೂ. ಬರಬೇಕಿದೆ. ಜತೆಗೆ ಈ ಮನೆ ಮಾರಾಟ ಮಾಡಿ, ಬೇರೆಡೆ 80 ಲಕ್ಷ ರೂ.ಗೆ ದೊಡ್ಡ ಮನೆ ಖರೀದಿಸಬೇಕೆಂದು ಕೊಂಡಿದ್ದೇನೆ. ಅಲ್ಲದೆ, ಇಂದಿರಾನಗರದಲ್ಲಿ ಫ್ಲ್ಯಾಟ್‌ ಕೂಡ ಇದೆ ಎಂದು ಹೇಳಿಕೊಂಡಿದ್ದರು. ಮತ್ತೂಂದೆಡೆ ಆಂಧ್ರಪ್ರದೇಶದಲ್ಲಿ ಕೌಟುಂಬಿಕ ವಿಚಾರವಾಗಿ ಬಾಬು ಸಹೋದರರು ಸಾಲ ಮಾಡಿಕೊಂಡಿದ್ದರು. ಸುರೇಶ್‌ನ ಹಣಕಾಸಿನ ವಿಚಾರ ತಿಳಿದ ಬಾಬು, ಮನೆಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ. ಅದಕ್ಕಾಗಿ ಆಂಧ್ರದಲ್ಲಿದ್ದ ಸಹೋದರ ಮುರಳಿ ಹಾಗೂ ಸೋದರ ಸಂಬಂಧಿಗಳಾದ ಮೂವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಲಕ್ಷಕ್ಕೆ ಬಂದವರು ಆರು ಸಾವಿರ ಕದ್ದು ಕೊಲೆಗೈದರು: ಏ.12ರಂದು ರಾತ್ರಿ ಸುರೇಶ್‌ ಮನೆಗೆ ಬಂದಿದ್ದ ಬಾಬು ಹಿಂಬಾಗಿಲ ಚೀಲಕ ತೆಗೆದು ಒಳ ಹೋಗಿದ್ದ. ನಂತರ ತನ್ನ ಸಹೋದರರಿಗೆ ಕರೆ ಮಾಡಿ, ಮನೆಯಲ್ಲಿ ಯಾರು ಇಲ್ಲ ಬರುವಂತೆ ಸೂಚಿಸಿದ್ದಾನೆ. ಅದಕ್ಕೂ ಮೊದಲು ಬಾಬು, ನಾಲ್ವರು ಆರೋಪಿಗಳಿಗೆ ಸಾಕ್ಷ್ಯ ನಾಶಪಡಿಸಲು ಗ್ಲೌಸ್‌ ಕೊಟ್ಟಿದ್ದ. ಬಳಿಕ ಹಿಂಬಾಗಿಲ ಮೂಲಕ ಬಂದ ಆರೋಪಿಗಳು, ಮೊದಲಿಗೆ ಸುರೇಶ್‌ ಗೆ ಹಣ, ಚಿನ್ನಾಭರಣ ಕೊಡುವಂತೆ ಸೂಚಿಸಿದ್ದಾರೆ. ಅವರು ಒಪ್ಪದಿದ್ದಾಗ, ಮುಖಕ್ಕೆ ಖಾರದ ಪುಡಿ ಎರಚಿ, ಮೂಗು, ಬಾಯಿಯನ್ನು ಟವೆಲ್‌ನಲ್ಲಿ ಮುಚ್ಚಿ, ಕತ್ತು ಹಿಸುಕಿ, ನಂತರ ಬೀಗದಿಂದ ತಲೆಗೆ ಹೊಡೆದಿದ್ದಾರೆ. ಸುರೇಶ್‌ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಂತರ ಮೃತದೇಹದ ಸುತ್ತ ಖಾರದ ಪುಡಿ ಎರಚಿ ಸಾಕ್ಷ್ಯ ನಾಶಪಡಿಸಿ, ಆ್ಯಪಲ್‌ ಮೊಬೈಲ್‌, ಆರು ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಮೊಬೈಲ್‌ ಎಸೆದು ಪರಾರಿ : ಸುರೇಶ್‌ ಕೊಲೆಗೈದ ಬಳಿಕ ಅವರ ಮೊಬೈಲ್‌ ಸ್ವಿಚ್ಡ್ ಆಫ್ ಮಾಡಿದ್ದ ಹಂತಕರು, ಪೊಲೀಸರಿಗೆ ಸುಳಿವು ಸಿಗದಂತೆ ಮಾಡಲು ದೊಮ್ಮಲೂರು ಬಳಿಯ ಚರಂಡಿಯಲ್ಲಿ ಮೊಬೈಲ್‌, ಗ್ಲೌಸ್‌ ಎಸೆದಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಸುರೇಶ್‌ನ ವೈಯಕ್ತಿಕ ವಿಚಾರಕ್ಕೆ ಬಾಬು ನೆರವು : ಪ್ರಕರಣದ ಪ್ರಮುಖ ಆರೋಪಿ ಬಾಬು ಮತ್ತು ಸುರೇಶ್‌ ನಡುವೆ ಆತ್ಮೀಯತೆ ಇತ್ತು. ಸುರೇಶ್‌ಗೆ ಕೆಲವೊಂದು ವೈಯಕ್ತಿಕ ವಿಚಾರದಲ್ಲಿ ಆರೋಪಿ ಸಹಾಯ ಮಾಡುತ್ತಿದ್ದ. ಹೀಗಾಗಿ ತಾಯಿ ಮೃತಪಟ್ಟ ಬಳಿಕವೂ ಸುರೇಶ್‌, ಬಾಬು ಜತೆಗೆ ಸಂಪರ್ಕ ಇಟ್ಟುಕೊಂಡಿದ್ದರು ಎಂದು ಹೇಳಲಾಗಿದೆ. ಮತ್ತೂಂದೆಡೆ ವಿಚಾರಣೆ ಸಂದರ್ಭದಲ್ಲಿ ಬಾಬು ವರ್ತನೆ ಗಮನಿಸಿದರೆ ಈತ ತೃತೀಯ ಲಿಂಗಿ ಎಂಬ ಅನುಮಾನವಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನೆರೆ ಮನೆಯವರ ಸುಳಿವು : ಏ.12ರಂದು ರಾತ್ರಿ 9.30ರ ಸುಮಾರಿಗೆ ಬಾಬು ಮನೆಯಿಂದ ಹೋದ ಬಳಿಕ ಸುರೇಶ್‌, ಸ್ಥಳೀಯರೊಬ್ಬರ ಜತೆ ಮಾತನಾಡುವಾಗ ಬಾಬು ಮನೆಗೆ ಬಂದಿರುವ ವಿಚಾರ ತಿಳಿಸಿದ್ದರು. ಪೊಲೀಸರ ವಿಚಾರಣೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಕೂಡಲೇ ಸುರೇಶ್‌ ಸಿಡಿಆರ್‌ ಆಧರಿಸಿ ಆರೋಪಿ ಪತ್ತೆ ಹಚ್ಚಿ ಮಾರತ್ತಹಳ್ಳಿಗೆ ಹೋದಾಗ, ಮನೆ ಖಾಲಿ ಮಾಡಿಕೊಂಡು ಹೋಗಲು ಯತ್ನಿಸಿದ್ದ. ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ನಂತರ ಈತನ ಹೇಳಿಕೆ ಆಧರಿಸಿ ಇತರೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

Malleshwaram: ಪ್ರಕರಣದಲ್ಲಿ ಭಾಗಿಯಾಗಿದ್ದ ಕೈದಿಯಿಂದ ಹನಿಟ್ರ್ಯಾಪ್‌?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.