![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 17, 2022, 1:05 PM IST
ಮಹಾನಗರ: ಜಿಲ್ಲೆಯ ಜನತೆಯ ಬಹುನಿರೀಕ್ಷಿತ ರಾಷ್ಟ್ರೀಯ ಗ್ರಾಹಕರ ಮೇಳ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಪ್ರತೀ ದಿನ ಸಂಜೆ 4ರಿಂದ 9 ಗಂಟೆಯವರೆಗೆ ಪ್ರದರ್ಶನ ನಡೆಯಲಿದೆ.
ರಾಷ್ಟ್ರೀಯ ಗ್ರಾಹಕರ ಮೇಳವು ದಕ್ಷಿಣ ಭಾರತಾದ್ಯಂತ ಮೂರು ದಶಕಗಳಿಂದ ಗ್ರಾಹಕರ ಮೇಳಗಳನ್ನು ಸಂಘಟಿಸುವಲ್ಲಿ ಧ್ರುವತಾರೆಯಾಗಿ ಗುರುತಿಸಿಕೊಂಡಿರುವ ನ್ಯಾಶನಲ್ ಕನ್ ಸ್ಯೂಮರ್ ಫೇರ್ನಿಂದ ಸಂಘಟಿಸಲ್ಪಡುತ್ತಿದೆ.
ಮಂಗಳೂರಿಗೆ ವಿನೂತನ ರೀತಿಯ ಮೆಗಾಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಚ್ಚ ಹೊಸ ಶೋಗಳನ್ನು ನೀಡುತ್ತಿದ್ದು, ಸಂಪೂರ್ಣ ಕುಟುಂಬಕ್ಕಾಗಿನ ಶಾಪಿಂಗ್ ಮತ್ತು ಮನೋರಂಜನ ಮೇಳವಾಗಿರುತ್ತದೆ.
ರಾಷ್ಟ್ರೀಯ ಗ್ರಾಹಕರ ಮೇಳದ ವಿಶೇಷ ಆಕರ್ಷಣೆಯಾಗಿ ಭವ್ಯ ಲಂಡನ್ ಬ್ರಿಡ್ಜ್ನ ಪ್ರತಿಕೃತಿ ಲಭ್ಯವಿದ್ದು, ಯುವಜನರ, ಮಕ್ಕಳ ವಿಶೇಷ ಆಕರ್ಷಣೆಯಾಗಲಿದೆ.
ಮಂಗಳೂರಿನಲ್ಲಿ ಸಂಘಟಿಸಲಾಗುತ್ತಿರುವ ಯಶಸ್ವಿ ರಾಷ್ಟ್ರೀಯ ಗ್ರಾಹಕರ ಮೇಳವು ಭಾರತದಲ್ಲಿಯೇ ಅತೀ ದೊಡ್ಡ, ಸಂಪೂರ್ಣ ಕುಟುಂಬಕ್ಕಾಗಿನ ಶಾಪಿಂಗ್, ಮನೋರಂಜನ ಮೇಳ ಎಂದು ಗುರುತಿಸಲಾಗಿದೆ.
ಮೇಳವು ಹಲವು ಮಳಿಗೆಗಳೊಂದಿಗೆ, ವಿಶೇಷ, ಅತ್ಯಧಿಕ ರಿಯಾಯಿತಿ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ. ಗೃಹ ಬಳಕೆ ಉತ್ಪನ್ನಗಳು, ಆಟೋಮೊಬೈಲ್ಸ್, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ ಉತ್ಪನ್ನಗಳು, ಕರಕುಶಲ ಉತ್ಪನ್ನಗಳು, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷೆಗಳು, ಆರೋಗ್ಯ, ಆಟಿಕೆಗಳು, ಆಹಾರೋತ್ಪನ್ನಗಳು, ಇನ್ನೂ ಹಲವಾರು ಉತ್ಪನ್ನಗಳು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಲಭ್ಯವಾಗಲಿವೆ.
ಪ್ರಮುಖ ಆಕರ್ಷಣೆ
ಮೇಳದ ಅಂಗವಾಗಿ ರೊಬೊಟ್ ಯಂತ್ರಗಳಿಂದ ನಿರ್ಮಿ ಸಲಾದ ವನ್ಯಮೃಗಗಳ ಮೃಗಾಲಯವನ್ನು ನಿರ್ಮಿಸಲಾಗಿದೆ. ಆಫ್ರಿಕಾದ ದಟ್ಟ ಕಾಡಿನ ಆನೆಗಳಿಂದ ಹಿಡಿದು ಚೈನೀಸ್ ಪಾಂಡಾ, ಅಸ್ಸಾಂನ ಖಡ್ಗಮೃಗ, ಅಟ್ಲಾಂಟಿಕ್ ಸಾಗರದ ಶಾರ್ಕ್, ಬಂಗಾಲದ ಬಿಳಿ ಹುಲಿ, ನೀರಾನೆ, ಕಿಂಗ್ಕಾಂಗ್, ಗುಜರಾತಿನ ಸಿಂಹ, ಕೆಂಪು ಸಮುದ್ರದ ಡಾಲ್ಫಿನ್, ಕರಡಿ, ಹಾವು, ಮೊಸಳೆ, ಪಶ್ಚಿಮಬಂಗಾಲದ ಆನೆಗಳ ಪರಿವಾರ ಈ ಪ್ರದರ್ಶನದ ಮುಖ್ಯ ಆಕರ್ಷಣೆ.
ಮನೋರಂಜನ ವಿಭಾಗದಲ್ಲಿ ಮೆರ್ರಿ ಕೊಲಂಬಸ್, ಡ್ಯಾಶಿಂಗ್ ಕಾರ್, ಟೋರ್ರಾ ಟೋರ್ರಾ, ಮಿನಿ ಟ್ರೇನ್… ಹಾಗೂ ಮಂಗಳೂರಿನಲ್ಲಿ ವಿನೂತನ ಮಾದರಿಯ ಅಮ್ಯೂಸ್ ಮೆಂಟ್ಗಳಾದ ಸ್ಪೇಸ್ ಜೆಟ್ (ಸ್ವಯಂ ನಿಯಂತ್ರಣ ವಿಮಾನ), ಮಿನಿ ಶಟ್ಲ ಗ್ರಾಹಕರ ಮನತಣಿಸಲಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.