ತೀರ್ಥಹಳ್ಳಿ : ಶಾಲೆಯ ಆಸ್ತಿ ದೋಚಲು ಮುಂದಾದ ಬಲಾಢ್ಯರು
Team Udayavani, Apr 23, 2022, 5:42 PM IST
ತೀರ್ಥಹಳ್ಳಿ : ಪಟ್ಟಣದ ವಾರ್ಡ್ ನಂ 14 ರ ಕುರುವಳ್ಳಿ ಪುತ್ತಿಗೆ ಮಠ ಸಮೀಪವಿರುವ ಸರ್ಕಾರಿ ಪ್ರಾರ್ಥಮಿಕ ಶಾಲೆಗೆ ಸಂಬಂಧಪಟ್ಟ ಜಮೀನೊಂದು ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಗ್ಗೆಬೈಲು ಹತ್ತಿರ ಸರ್ವೇ ನಂ 4 ರಲ್ಲಿ ಎಂಟು ಎಕರೆ ಎಂಟು ಗುಂಟೆ ಜಮೀನು ಇದ್ದು ಇದು ಹಿಂದೆ ಶಾಲೆಗೆ ದಾನದ ರೂಪದಲ್ಲಿ ಮಠ ಮತ್ತು ಜೋಯ್ಸ್ ಕುಟುಂಬದವರು ಕೊಟ್ಟಿದ್ದರು ಎನ್ನಲಾಗಿದೆ.
ಆದರೆ ಶಾಲಾ ಆಡಳಿತ ಮಂಡಳಿಯವರು ಈ ಜಮೀನಿಗೆ ಸುತ್ತ ಬೇಲಿ ಕಂಬ ಹಾಕಿ ಒಳಗಡೆ ಅಕೇಶಿಯಾ ಗಿಡಗಳನ್ನು ನೆಟ್ಟು ಶಾಲೆಗೆ ಉತ್ತಮ ಆದಾಯ ಬರುವ ರೀತಿಯಲ್ಲಿ ಮಾಡಿದ್ದರು. ನಂತರ ಆಡಳಿತ ಮಂಡಳಿ ಅಕೇಶಿಯಾ ಗಿಡಗಳನ್ನು ಕಟಾವು ಮಾಡಿದ್ದು ಶಾಲೆಗೆ ಉತ್ತಮ ಆದಾಯ ಕೂಡ ಒದಗಿ ಬಂದಿತ್ತು. ತದನಂತರದಲ್ಲಿ ಪುನಃ ಆಡಳಿತ ಮಂಡಳಿಯವರು ಮತ್ತೆ ಗಿಡಗಳನ್ನು ನೆಟ್ಟಿದರು.ಅದರ ನಿರ್ವಹಣಿ ಸರಿಮಾಡದೆ ಈಗ ಖಾಲಿ ಜಾಗ ಕಾಣುತ್ತಿದೆ.
ಈಗ ಬೇಲಿ ಕಂಬಕ್ಕೆ ದುಪ್ಪಟ್ಟು ಬೆಲೆ ಆಗಿದ್ದರಿಂದ ಸುತ್ತ ಹಾಕಿದ ಬೇಲಿ ಕಂಬ ಸ್ಥಳೀಯವಾಗಿ ಯಾರೋ ರಾತ್ರೋ ರಾತ್ರಿ ಮಂಗ ಮಾಯ ಮಾಡಿದ್ದರು ಎನ್ನಲಾಗಿದೆ.
ಊರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬೇರೆ ಹಾದು ಹೋಗುವುದರಿಂದ ಭೂಮಿಯ ಬೆಲೆ ಗಗನಕ್ಕೇರಿದೆ ಹಾಗಾಗಿ ಬೆಂಗಳೂರಿನಂತಹ ಮಹಾನಗರಿಯಿಂದ ಬಂದ ಬಲಾಢ್ಯ ವ್ಯಕ್ತಿಗಳು ಎಂಟು ಎಕರೆ ಎಂಟು ಗುಂಟೆ ಶಾಲೆಗೆ ಸಂಬಂಧಪಟ್ಟ ಜಮೀನನ್ನು ಕಬಳಿಸಲು ಹೊರಟಿದ್ದಾರೆ ಎನ್ನುವ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಸಂಬಂಧಪಟ್ಟ ಶಾಲೆಯ ಆಡಳಿತ ಮಂಡಳಿ ಶಾಲಾ ಅಭಿವೃದ್ಧಿ ಸಮಿತಿ ತಕ್ಷಣವೇ ಗಮನಿಸಿ ಶಾಲೆಗೆ ಸಂಬಂಧಪಟ್ಟ ಆಸ್ತಿಯನ್ನು ಬೇಲಿ ಹಾಕುವುದರ ಮೂಲಕ ಉಳಿಸಿಕೊಳ್ಳಲು ಮುಂದಾಗಲಿ ಹಾಗೂ ಅ ಜಮೀನಿನಲ್ಲಿ ಖಾಲಿ ಬಿಡುವುದಕ್ಕಿಂತ ಯವುದಾದರು ಶಾಲೆಗೆ ಆದಾಯ ಬರುವಂತೆ ಕೃಷಿ ಮಾಡಲಿ ಎನ್ನುವ ಮಾತು ಹೆಸರು ಹೇಳಲಿಚ್ಛಿಸದ ವ್ಯಕ್ತಿಯಿಂದ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivamogga ವಾಯುವಿಹಾರ ಮಾಡುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಕುಸಿದು ಸಾ*ವು !
Sagara: ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವ ಮೆಸ್ಕಾಂ ನೀತಿ ಖಂಡನೆ; ಪ್ರತಿಭಟನೆ
Shimoga: ವಿವಾದಿತ ಫ್ಲೆಕ್ಸ್ ಹಾಗು ಖಡ್ಗ ತೆರವು ಮಾಡಿದ ಪೊಲೀಸರು
Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್
B. Y. Vijayendra ಬಗ್ಗೆ ಹಾದಿಯಲ್ಲಿ ಮಾತನಾಡುವುದು ಸಲ್ಲ: ರೇಣುಕಾಚಾರ್ಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.