
ಕೆಪಿಟಿಸಿಎಲ್ ವಿದ್ಯುತ್ಲೈನ್ ತುಂಡು: ರೈಲು ಸಂಚಾರದಲ್ಲಿ ವ್ಯತ್ಯಯ
Team Udayavani, Apr 25, 2022, 6:50 AM IST

ಬೆಂಗಳೂರು: ಯಶವಂತಪುರ- ಲೊಟ್ಟೆಗೊಲ್ಲಹಳ್ಳಿ ನಡುವೆ ಹಾದುಹೋಗಿರುವ ಕರ್ನಾಟಕ ವಿದ್ಯುತ್ ಸರಬರಾಜು ಕಂಪೆನಿ (ಕೆಪಿಟಿಸಿಎಲ್) ವಿದ್ಯುತ್ ಲೈನ್ ಭಾನುವಾರ ಬೆಳಿಗ್ಗೆ ತುಂಡಾಗಿ ರೈಲ್ವೆ ವಿದ್ಯುತ್ ಲೈನ್ ಮೇಲೆ ಬಿದ್ದಿದ್ದರಿಂದ ಸುಮಾರು ನಾಲ್ಕು ತಾಸು ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದ ಸಾವಿರಾರು ಪ್ರಯಾಣಿಕರು ಪರದಾಡುವಂತಾಯಿತು.
ಬೆಳಿಗ್ಗೆ 8.45ರ ಸುಮಾರಿಗೆ ಆಕಸ್ಮಿಕವಾಗಿ ಕೆಪಿಟಿಸಿಎಲ್ನ ವಿದ್ಯುತ್ ಲೈನ್, ರೈಲ್ವೆ ವಿದ್ಯುತ್ ಲೈನ್ ಮೇಲೆ ತುಂಡಾಗಿ ಬಿದ್ದಿದೆ. ಇದರಿಂದ ಯಶವಂತಪುರ- ಲೊಟ್ಟೆಗೊಲ್ಲಹಳ್ಳಿ ಮಾರ್ಗದುದ್ದಕ್ಕೂ ಕಾರ್ಯಾಚರಣೆ ಮಾಡುತ್ತಿದ್ದ ರೈಲುಗಳು ಅಲ್ಲಲ್ಲೇ ನಿಂತವು. ಇದಲ್ಲದೆ, ಬೆಂಗಳೂರಿನಿಂದ ಬೇರೆ ಕಡೆಗೆ ತೆರಳುವ ರೈಲುಗಳ ಸೇವೆಯಲ್ಲೂ ವಿಳಂಬವಾಯಿತು. ಮೂಲಗಳ ಪ್ರಕಾರ ಹತ್ತಕ್ಕೂ ಹೆಚ್ಚು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಪ್ರಮುಖವಾಗಿ ಯಶವಂತಪುರ-ಯಲಹಂಕ ಮತ್ತು ಯಶವಂತಪುರ-ತುಮಕೂರು ಮಾರ್ಗದಲ್ಲಿನ 7ರಿಂದ 8 ರೈಲುಗಳ ಆಗಮನ ಮತ್ತು ನಿರ್ಗಮನದಲ್ಲಿ ತಡವಾಯಿತು. ದೂರದ ಊರಿಗೆ ತೆರಳುವವರು ಮತ್ತು ಆಗಮಿಸುವವರು ಅದೇ ರೀತಿ, ಕಾರ್ಯನಿಮಿತ್ತ ನಗರಕ್ಕೆ ಬರುವವರಿಗೆ ಇದರಿಂದ ಕಿರಿಕಿರಿ ಆಯಿತು. ಅಲ್ಪಾವಧಿಯಲ್ಲೇ ಮೂರನೇ ಬಾರಿ ಈ ರೀತಿ ತಾಂತ್ರಿಕ ಕಾರಣಗಳಿಂದ ತೊಂದರೆ ಆಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ, ರಜೆ ದಿನವಾಗಿದ್ದರಿಂದ ಹೆಚ್ಚು ಪ್ರಯಾಣಿಕರಿಗೆ ಇದರ ಬಿಸಿ ತಟ್ಟಲಿಲ್ಲ.
ಈ ಮಧ್ಯೆ 9.20ರ ವೇಳೆಗೆ ಬೆಂಗಳೂರು ರೈಲ್ವೆ ವಿಭಾಗದಿಂದ ಡೀಸೆಲ್ ಆಧಾರಿತ ಲೋಕೋಮೋಟಿವ್ ವ್ಯವಸ್ಥೆ ಮಾಡಿ, ರೈಲುಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಯಿತು. ಈ ಮೂಲಕ ಸಾಧ್ಯವಾದಷ್ಟು ವಿಳಂಬವಾಗುವುದನ್ನು ತಗ್ಗಿಸಲಾಯಿತು ಎಂದು ಬೆಂಗಳೂರು ರೈಲ್ವೆ ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ್ಯಾವ ರೈಲುಗಳು ಎಷ್ಟು ವಿಳಂಬ? ರೈಲು ಸಂಖ್ಯೆ ಎಷ್ಟು ತಡ?
06266 (ಹಿಂದುಪುರ-ಕೆಎಸ್ಆರ್ ಬೆಂಗಳೂರು) 87 ನಿಮಿಷ (ಯಶವಂತಪುರ ಬಳಿ)
16574 (ಯಶವಂತಪುರ ವೀಕ್ಲಿ ಎಕ್ಸ್ಪ್ರೆಸ್) 176 ನಿಮಿಷ (ಯಶವಂತಪುರ ಬಳಿ)
06546 (ಯಶವಂತಪುರ ಎಕ್ಸ್ಪ್ರೆಸ್ ಸ್ಪೇಷಲ್) 98 ನಿಮಿಷ (ಚಿಕ್ಕಬಾಣಾವರ ಬಳಿ)
20652 (ತಾಳಗುಪ್ಪಾ- ಕೆಎಸ್ಆರ್ ಬೆಂಗಳೂರು, ಇಂಟರ್ಸಿಟಿ ಎಕ್ಸ್ಪ್ರೆಸ್) 60 ನಿಮಿಷ (ಗೊಲ್ಲಹಳ್ಳಿ ಬಳಿ)
17308 ( ಬಸವ ಎಕ್ಸ್ಪ್ರೆಸ್) 177 ನಿಮಿಷ (ಯಲಹಂಕ)
17310 ( ಯಶವಂತಪುರ -ವಾಸ್ಕೋಡಗಾಮ ಎಕ್ಸ್ಪ್ರೆಸ್) 38 ನಿಮಿಷ (ದೊಡ್ಡಬೆಲೆ ಬಳಿ)
ಒಂದೂವರೆ ತಿಂಗಳಲ್ಲಿ 3ನೇ ಘಟನೆ!
– ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯ ಆಗುತ್ತಿರುವ ಮೂರನೇ ಘಟನೆ ಇದಾಗಿದೆ.
– ಮಾರ್ಚ್ 9ರಂದು ಚನ್ನಸಂದ್ರ ಕಾರಿಡಾರ್ನಲ್ಲಿ ರೈಲ್ವೆ ವಿದ್ಯುತ್ ಲೈನ್ ತಗುಲಿ ಹದ್ದು ಸಿಲುಕಿದ ಪರಿಣಾಮ ಸುಮಾರು 30ಕ್ಕೂ ಅಧಿಕ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
– ವಿದ್ಯುತ್ ಲೈನ್ನಲ್ಲಿ ಏನಾಗಿದೆ ಎಂಬುದನ್ನು ಪತ್ತೆಹಚ್ಚಲಿಕ್ಕಾಗಿಯೇ ಗಂಟೆಗಟ್ಟಲೆ ಸಮಯ ಹಿಡಿದಿತ್ತು.
– ಇದಾದ ಬಳಿಕ ಹತ್ತು ದಿನಗಳಲ್ಲಿ ಅಂದರೆ ಮಾರ್ಚ್ 21ರಂದು ಬೆಂಗಳೂರು- ಮೈಸೂರು ನಡುವಿನ ರೈಲು ಮಾರ್ಗದಲ್ಲಿ ವಿದ್ಯುತ್ ಕೇಬಲ್ ತುಂಡಾದ ಪರಿಣಾಮ ರೈಲುಗಳ ಸೇವೆಯಲ್ಲಿ ವ್ಯತ್ಯಯ ಆಗಿತ್ತು. ಮೆಮು ರೈಲು ಮತ್ತು ಚಾಮುಂಡಿ ಎಕ್ಸ್ಪ್ರೆಸ್ ರೈಲುಗಳು ಸಂಚಾರದಲ್ಲಿ ಸುಮಾರು ಒಂದು ತಾಸು ತಡವಾಗಿತ್ತು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ

Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ

Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ

Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.