![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 25, 2022, 9:10 PM IST
ಕಾರ್ಕಳ : ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕು ಕರಿಯಕಲ್ಲು ರುದ್ರಭೂಮಿಯ ಹತ್ತಿರ ಎ. 25ರಂದು ಸಂಭವಿಸಿದೆ.
ಗಿರೀಶ ಛಲವಾದಿ (38) ಮೃತಪಟ್ಟವರು. ಗಿರೀಶ್ ಅವರು ಕಾರಿನಲ್ಲಿ ಕೆಲಸದವರಾದ ದುರ್ಗಪ್ಪ, ಕೃಷ್ಣ ಬಸಪ್ಪ ಅವರನ್ನು ಕರೆದುಕೊಂಡು ಜೋಡುರಸ್ತೆಯಿಂದ ಬಜಗೋಳಿಗೆ ಬಾವಿ ಕೆಲಸಕ್ಕೆ ಬೆಳಗ್ಗೆ ಹೊರಟಿದ್ದರು.
ಕರಿಯಕಲ್ಲು ಶ್ಮಶಾನ ಹತ್ತಿರ ತಲುಪುವಾಗ ಕಾರಿನ ಸೈಲೆನ್ಸರ್ನಿಂದ ಜಾಸ್ತಿ ಹೊಗೆ ಬರುತ್ತಿದ್ದುದನ್ನು ಗಮನಿಸಿ ನೋಡಲೆಂದು ಕಾರಿನಿಂದ ಇಳಿದ ಚಾಲಕ ಗಿರೀಶ್, ಕೃಷ್ಣ ಅವರು ಕಾರಿನಿಂದಿಳಿದು ವಾಹನದ ಮುಂಭಾಗದಲ್ಲಿ ನಿಂತುಕೊಂಡಿದ್ದರು. ಈ ವೇಳೆ ಪುಲ್ಕೇರಿ ಕಡೆಯಿಂದ ಬಂದ ಬಸ್ ನಿಯಂತ್ರಣ ತಪ್ಪಿ ಕಾರಿಗೆ ಢಿಕ್ಕಿ ಹೊಡೆದಿದೆ. ಆಗ ಗಿರೀಶ ಮತ್ತು ಕೃಷ್ಣ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಗಾಯಾಳುಗಳಿಬ್ಬರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಗಿರೀಶ ಮೃತಪಟ್ಟಿದ್ದಾನೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೇಸಿಗೆಯಲ್ಲಿ ನೆಗಡಿ ಆದಲ್ಲಿ ಇಲ್ಲಿದೆ ಸುಲಭ ಪರಿಹಾರ !
You seem to have an Ad Blocker on.
To continue reading, please turn it off or whitelist Udayavani.