ಅನ್ನಛತ್ರ ಮಂಡಳ ಕಾರ್ಯ ಶ್ಲಾಘನೀಯ: ಗಡ್ಕರಿ
Team Udayavani, Apr 27, 2022, 10:14 AM IST
ಸೊಲ್ಲಾಪುರ: ಸ್ವಾಮಿ ಸಮರ್ಥರಷ್ಟೇ ಅನ್ನಛತ್ರ ಮಂಡಳವೂ ಮಹತ್ವದ್ದಾಗಿದ್ದು, ಅನ್ನಛತ್ರ ಮಂಡಳ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಪ್ರಾರಂಭಿಸಿದ ಮಹಾಪ್ರಸಾದ ಸೇವೆ ಶ್ಲಾಘನೀಯವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಅಕ್ಕಲಕೋಟ ತೀರ್ಥಕ್ಷೇತ್ರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಪ್ರಮುಖ ವಿಶ್ವಸ್ತ ಅಮೋಲರಾಜೆ ಭೋಸಲೆ ಅವರಿಂದ ಸನ್ಮಾನ ಸ್ವೀಕರಿಸಿ, ಸಮರ್ಥರ ಪ್ರತಿಮೆಯನ್ನು ಕಾಣಿಕೆ ಪಡೆದು ಅವರು ಮಾತನಾಡಿದರು.
ಮಂಡಳಿಯ ಸಂಸ್ಥಾಪಕ ಅಧ್ಯಕ್ಷ ಜನ್ಮೇಜಯರಾಜೆ ಭೋಸಲೆ ಪರಿಶ್ರಮದಿಂದ ಅನ್ನಛತ್ರ ಮಂಡಳ ದೇಶಾದ್ಯಂತ ಹೆಸರುವಾಸಿಯಾಗಿದೆ. ವಿಶೇಷವಾಗಿ ಅನ್ನದಾಸೋಹ ಜತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಅನ್ನಛತ್ರ ಮಂಡಳ ಮಾಡುತ್ತ ಬಂದಿದೆ. ಪರಿಸರ ಕಾಳಜಿ ವಹಿಸಿದೆ ಎಂದರಲ್ಲದೇ ಮುಂದಿನ ಕಾರ್ಯಗಳು ಸುಗಮವಾಗಿ ನಡೆಯಲಿ ಎಂದು ಹಾರೈಸಿದರು.
ದಕ್ಷಿಣ ಸೊಲ್ಲಾಪುರದ ಶಾಸಕ ಸುಭಾಷ ದೇಶಮುಖ, ಪತ್ನಿ ಸ್ಮಿತಾ ಸುಭಾಷ ದೇಶಮುಖ, ಶಾಸಕ ಸಚಿನ್ ಕಲ್ಯಾಣಶೆಟ್ಟಿ, ಪತ್ನಿ ಶಾಂಭವಿ ಕಲ್ಯಾಣಶೆಟ್ಟಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಹಾಜಿ ಪವಾರ, ಅನ್ನಛತ್ರ ಮಂಡಳಿ ಉಪಾಧ್ಯಕ್ಷ ಅಭಯ ಖೋಬರೆ, ಕಾರ್ಯದರ್ಶಿ ಶಾಮರಾವ್ ಮೋರೆ, ಸಂತೋಷ ಖೋಬರೆ, ಲೆಕ್ಕ ಪರಿಶೋಧಕ ಓಂಕಾರೇಶ್ವರ ಉಟಗೆ, ಅಭಿನಂದನ್ ಗಾಂಧಿ , ಎಂಜಿನಿಯರ್ ಕಿರಣ ಪಾಟೀಲ, ಅಮಿತ್ ಥೋರಟ್, ಮನೋಜ ನಿಕಮ್, ಪ್ರವೀಣ ದೇಶಮುಖ, ಅರವಿಂದ ಶಿಂಧೆ, ಮಹೇಶ ಹಿಂಡೋಳೆ, ಕಾಂತು ಧನಶೆಟ್ಟಿ, ದಯಾನಂದ ಬಿಡವೆ, ಅವಿನಾಶ ಮಡಿಕಾಂಬೆ, ರಾಜಕುಮಾರ ಝೀಂಗಾಡೆ, ನಂದಕುಮಾರ ಜಗದಾಳೆ, ಅರವಿಂದ ಪಾಟೀಲ, ಅಪ್ಪು ಪೂಜಾರಿ, ಸಂಜಯ ಕುಲಕರ್ಣಿ, ಸಂತೋಷ ಭೋಸಲೆ, ಬಾಳಾಸಾಹೇಬ ಪೋಳ್, ಎಸ್.ಕೆ.ಸ್ವಾಮಿ, ಸಿದ್ಧರಾಮ ಕಲ್ಯಾಣಿ, ಅಪ್ಪಾ ಹಂಚಾಟೆ, ಮಹಾಂತೇಶ ಸ್ವಾಮಿ, ಶ್ರೀಕಾಂತ ಜಿಪರೆ, ಮಹಾರಾಷ್ಟ್ರ ಕಸಾಪ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ, ಕಾರ್ಯದರ್ಶಿ ಶರಣಪ್ಪ ಫುಲಾರಿ, ಪ್ರಕಾಶ ಪಾಟೀಲ, ನಿಖೀಲ ಪಾಟೀಲ, ರುದ್ರಯ್ಯ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Vijayapura: ತಿರುಪತಿ ಲಡ್ಡು ಪಾವಿತ್ರ್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್
Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.