![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Apr 29, 2022, 8:20 PM IST
ಆರೋಪಿ ಖಲೀಲ್
ಉಳ್ಳಾಲ:ನೀರು ಸರಬರಾಜು ಮಾಡುವ ಟ್ಯಾಂಕರ್ ಡ್ರೈವರ್ ತಾಯಿಗೆ ಬೈದ ವಿಚಾರದಲ್ಲಿ ವಿಚಾರಿಸಲು ಹೋದ ಚೆಂಬುಗುಡ್ಡೆಯ ಯುವಕನಿಗೆ ಡ್ರೈವರ್ ತಲವಾರಿನಿಂದ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಯುವಕನನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ತಲವಾರು ದಾಳಿಯಿಂದ ಗಾಯಗೊಂಡಿದ್ದು, ಉಳ್ಳಾಲ ಬಸ್ತಿಪಡ್ಪು ನಿವಾಸಿ ಖಲೀಲ್ ತಲವಾರಿನಿಂದ ದಾಳಿ ನಡೆಸಿದ ಆರೋಪಿ.
ಉಳ್ಳಾಲ ನಗರಸಭೆಯಿಂದ ನೀರಿನ ಗುತ್ತಿಗೆ ಪಡೆದಿದ್ದ ಟ್ಯಾಂಕರ್ ನಲ್ಲಿ ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ನೀರು ಸರಬರಾಜು ಮಾಡುತ್ತಿದ್ದಾಗ ಖಲೀಲ್ ಮಹಿಳೆಯೊಬ್ಬರಿಗೆ ಅವ್ಯಾಚ ಶಬ್ದದಿಂದ ಬೈದಿದ್ದು, ಈ ವಿಚಾರದಲ್ಲಿ ಮಹಿಳೆಯ ಪುತ್ರ ಚೆಂಬುಗುಡ್ಡೆ ನಿವಾಸಿ ರಿಝ್ವಾನ್ ಉಳ್ಳಾಲದ ನೀರು ತುಂಬಿಸುವ ಬಾವಿ ಬಳಿ ತೆರಳಿದ್ದು ಮಾತಿನ ಚಕಮಕಿ ನಡೆದು ಖಲೀಲ್ ರಿಝ್ವಾನ್ ಮೇಲೆ ತಲವಾರಿನಿಂದ ದಾಳಿ ನಡೆಸಿದ್ದಾನೆ.
ಗಾಯಗೊಂಡಿದ್ದ ರಿಝ್ವಾನ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾನೆ. ಖಲೀಲ್ ನ ವಿರುದ್ದ ಈ ಹಿಂದೆಯೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.