ಜೀವನ ಬಂಡಿ ಸಾಗಿಸಲು ಬಿಸುಕಲ್ಲು,ಒಳಕಲ್ಲುಗಳು ಆಸರೆ: ಕಣ್ಮರೆಯಾಗುತ್ತಿರುವ ಸಂಪ್ರದಾಯ


Team Udayavani, May 1, 2022, 9:00 AM IST

Untitled-1

ದೋಟಿಹಾಳ: ಈಗೀನ ಹಳ್ಳಿಗಳು ಸಂಪೂರ್ಣ ಪಟ್ಟಣಗಳಾಗಿಯೂ ಬದಲಾಗಿಲ್ಲ, ಮೊದಲಿನಂತೆ ಹಳ್ಳಿಗಳಾಗಿಯೂ ಉಳಿದಿಲ್ಲ. ನೋಡಲು ಹಳ್ಳಿಯಂತೆ ಕಂಡರೂ ಗ್ರಾಮದ ಮನೆಗಳನ್ನು ಹೊಕ್ಕಾಗ ಅಲ್ಲಿ ಹಳ್ಳಿಯನ್ನು ಬಿಂಬಿಸುವ ಯಾವುದೇ ಕುರುಹು ಕಾಣುವುದಿಲ್ಲ. ಪ್ಯಾಸನ್ ಸಾಮಾನಗಳೆಲ್ಲ ಹಳ್ಳಿ ಮನೆ ಹೊಕ್ಕು ಗ್ರಾಮೀಣ ಸಂಸ್ಕçತಿ ಮಾಯವಾಗುತ್ತಿದೆ. ವಾಸ್ತವ ಹೀಗೀರುವಾಗ ಬಿಸುಕಲ್ಲು, ಒಳಕಲ್ಲು ಕಾರ್ಮಿಕ ಪಾಡು ಕೇಳುವವರಿಲ್ಲದಂತಾಗಿದೆ.

ಹಿಂದೆ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಮುಗಿಸಿಕೊಂಡು ರೈತ ಮಹಿಳೆಯರು ರಾತ್ರಿ ವೇಳೆ ಮನೆಯಲ್ಲಿ ಇರುವ ಬಿಸುಕಲ್ಲನಲ್ಲಿ ಕಾಳುಗಳನ್ನು ಬೀಸಿಕೊಳ್ಳುತ್ತಿದ್ದರು. ಹಾಗೂ ಕಾರ, ಚಟ್ನಿ ಹರಿಯಲು ಒಳಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಆದರೆ ಹೀಗ ಇವುಗಳು ಬಳಸುವವರು ಇಲ್ಲದೇ ಇರುವುದರಿಂದ ಮೂಲೆ ಸೇರಿದು ಬಿಸುಕಲ್ಲು ಮತ್ತು ಒಳಕಲ್ಲು ತಯಾರಿ ಮಾಡುವವರ ಕಾರ್ಮಿಕರ ಪಾಡು ಹೇಳತ್ತಿರದಂತಾಗಿದೆ.

ಭೋವಿ ಈ ಸಮುದಾಯದವರು ದೊಡ್ಡ ದೊಡ್ಡ ಕಲ್ಲುಗಳ ಶೇಖರಣೆ ಮಾಡಿ ಅದರಲ್ಲಿ ಬಿಸುಕಲ್ಲು ಮತ್ತು ಒಳಕಲ್ಲು ಮಾಡಿ, ಅವುಗಳನ್ನು ಹೊತ್ತು ಸುತ್ತಲಿನ ಗ್ರಾಮಗಳಲ್ಲಿ ಮಾರುವರು. ರೈತಾಪಿ ವರ್ಗದವರೆ ಇವರ ಗ್ರಾಹಕರು. ರೈತರ ಬೇಡಿಕೆಗೆ ತಕ್ಕಂತೆ ಸಣ್ಣ, ದೊಡ್ಡ ಗಾತ್ರದ ಬಿಸುಕಲ್ಲು ಮತ್ತು ಒಳಕಲ್ಲು ಮಾಡಿ ಮಾರುತ್ತಾರೆ. ಇದರಿಂದ ಬರುವ ಪುಡಿಗಾಸಿನಿಂದ ನಿತ್ಯ ಜೀವನ ಸಾಗಿಸುತ್ತಾರೆ. ಬಿಸುಕಲ್ಲು ಮತ್ತು ಒಳಕಲ್ಲು 600ರೂಪಾಯಿಯಿಂದ ಸಾವಿರಗೆ ಮಾರುತ್ತಾರೆ. ಹೆಚ್ಚಾಗಿ ಗ್ರಾಮೀಣ ಭಾಗದ ರೈತರು, ಕಾರ್ಮಿಕರು ಬಳಸುತ್ತಾರೆ. ಒಂದು ಬಿಸುಕಲ್ಲು ಮತ್ತು ಒಳಕಲ್ಲು ಮಾರಿದರೆ ಇವರಿಗೆ ಸುಮಾರು 150ರೂ.ಯಿಂದ 200 ರೂಪಾಯಿವರಗೆ ಅಲ್ಪ ಆದಾಯ ಬರುತ್ತದೆ. ಇದರಲ್ಲಿ ಇವರು ಜೀವನ ಸಾಗಿಸಬೇಕು.

ಈ ಹಿಂದೇ ಹಳ್ಳಿಗಳಲ್ಲಿ ಮನೆ ಮನೆಗಳಲ್ಲಿ ಬಿಸುಕಲ್ಲು ಮತ್ತು ಒಳಕಲ್ಲುಗಳ ಕಂಡುಬರುತ್ತಿತ್ತು. ಆದರೆ ಬದಲಾದ ಆಧುನಿಕ ದಿನದಲ್ಲಿಳಿವುಗಳನ್ನು ಬಳಕೆ ಮಾಡುವವರು ಕಣ್ಮರೆಯಾಗುತಿದ್ದಾರೆ. ಕಾರಣ ಬಿಸುಕಲ್ಲು ಮತ್ತು ಒಳಕಲ್ಲು ಜಾಗಕ್ಕೆ ಯಂತ್ರಗಳು ಹಳ್ಳಿಗಳನ್ನು ಪ್ರವೇಶಿಸಿದ ಮೇಲೆ ಬಳಸುವವರು ಕೈಬಿಟ್ಟು ಯಂತ್ರದ ಮುಖಾಂತರ ಕಾಳುಗಳನ್ನು ಬೀಸುವದು. ಯಂತ್ರದಲ್ಲಿ ಕಾರ, ಚಟ್ನಿ ಹರಿಯನ್ನು ಉಪಯೋಗಿಸುತ್ತಿದ್ದರು. ಹೀಗಾಗಿ ಇವುಗಳು ಕೇವಲ ಹೊಸ ಮನೆ ಪ್ರವೇಶ ಮಾಡುವಾಗ ಮತ್ತು ಮದುವೆ ವೇಳೆ ಸಂಪ್ರದಾಯಕ್ಕಾಗಿ ಇವುಗಳನ್ನು ಉಪಯೋಗಿಸುತ್ತಾರೆ. ಉಳಿದ ದಿನಗಳಲ್ಲಿ ಇವುಗಳನ್ನು ಯಾರು ಬಳಕೆ ಮಾಡದೇ ಇರುವದರಿಂದ ಈ ವೃತ್ತಿ ಮಾಡುವ ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಆದುನಿಕ ಯುಗದ ಕೈಗಾರಿಕೆ ಕ್ರಾಂತಿಯಿಂದ ಇಂತಹ ಗುಡಿಕೈಗಾರಿಕೆಯ ಕಸುಬುಗಳು ಮರೆಯಾಗುತ್ತಿವೆ.

ಕಳೆದ 20ವರ್ಷಗಳಿಂದ ಈ ವೃತ್ತಿ ಮಾಡಿಕೊಂಡು ಬಂದ್ದಿದೇವೆ. ಸುಮಾರು 10-15 ವರ್ಷಗಳ ಹಿಂದೇ ಬಿಸುಕಲ್ಲು ಮತ್ತು ಒಳಕಲ್ಲುಗಳ ಬೇಡಿಕೆ ಇತ್ತು. ಇದರ ಜಾಗಕ್ಕೆ ಯಂತ್ರಗಳು ಬಂದ ಮೇಲೆ ಇವುಗಳನ್ನು ಬಳಕೆ ಮಾಡುವವರು ಕಮ್ಮಿಯಾಗಿದ್ದಾರೆ. ಸದ್ಯ ಹೊಸ ಮನೆ ಪ್ರವೇಶ ಮಾಡುವಾಗ ಮತ್ತು ಮದುವೆ ವೇಳೆ ಪೂಜೆ ಮಾಡಲು ಮಾತ್ರ ಬಳಕೆ ಮಾಡುತ್ತಾರೆ. ಇದನ್ನು ಬಿಟ್ಟು ಬೇರೆ ಕೆಲಸ ಮಾಡಲು ನಮ್ಮಗೆ ಬರುವುದಿಲ್ಲ. ಇದರಿಂದ ಬಂದ ಅಲ್ಪಸ್ವಲ್ಪ ಆದಾಯದಿಂದ ಜೀವನ ಸಾಗಿಸುತ್ತಿದೇವೆ.-ವಿಜಯಲಕ್ಷ್ಮೀ, ಬಿಸುಕಲ್ಲು. ಒಳಕಲ್ಲುಗಳ ಮಹಿಳಾ ಕಾರ್ಮಿಕೆ.

 

-ವರದಿ: ಮಲ್ಲಿಕಾರ್ಜುನ ಮೆದಿಕೇರಿ.

ಟಾಪ್ ನ್ಯೂಸ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Turkey ಮೇಲಿನ ದಾಳಿಗೆ ಪ್ರತೀಕಾರ: ಇರಾಕ್‌, ಸಿರಿಯಾದ 30 ಕುರ್ದಿಶ್‌ ಉ*ಗ್ರರ ನೆಲೆ ಧ್ವಂಸ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Jai tulu movie; ಶೂಟಿಂಗ್‌ ಆರಂಭಿಸಿದ ರೂಪೇಶ್‌ ಶೆಟ್ಟಿ

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

ಬಸ್ ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು, ಓರ್ವನಿಗೆ ಗಾಯ

4

Dinesh GunduRao:ಶಾಸಕ ರಾಯರೆಡ್ಡಿ ಸಿಎಂ ಪಕ್ಕ ಇರುವುದರಿಂದ ಹೆಚ್ಚು ಅಭಿವೃದ್ದಿ ನಡೆಯುತ್ತವೆ

7-koppala

Koppala: ಒಳ ಮೀಸಲಾತಿಗೆ ಒತ್ತಾಯಿಸಿ ವಕೀಲರಿಂದ ಪ್ರತಿಭಟನೆ

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

‌BBK11: ಮತ್ತೆ ʼಬಿಗ್‌ಬಾಸ್‌ʼ ಕಾರ್ಯಕ್ರಮದ ವಾಹಿನಿಗೆ ಬಂದ‌ ಲಾಯರ್ ಜಗದೀಶ್; ವೀಕ್ಷಕರು ಖುಷ್

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

Uttara Pradesh: 9 ವರ್ಷದ ಹಿಂದಿನ ಅವಮಾನ…ಶೂಗಳ ಹಾರ ಧರಿಸುವಂತೆ ಮಾಡಿದಾತನ ಬರ್ಬರ ಹ*ತ್ಯೆ!

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

3

Muddebihal:‌ ಕ್ರೇನ್ ಚಕ್ರ ಹರಿದು ವ್ಯಕ್ತಿ ಸಾವು; ಪ್ರಕರಣ ದಾಖಲು

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.