ಕುಸಿದ ರಸ್ತೆ ಕಾಮಗಾರಿ ಕೊನೆಯ ಹಂತದಲ್ಲಿ
Team Udayavani, May 3, 2022, 12:40 PM IST
ದೇರೆಬೈಲ್: ಕಳೆದ ವರ್ಷ ಮಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಗೆ ದೇರೆಬೈಲ್ ಸಮೀಪದ ಲ್ಯಾಂಡ್ಲಿಂಕ್ಸ್ ಬಳಿ ಕುಸಿದ ಒಳ ರಸ್ತೆ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಈ ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಕುಸಿದ ರಸ್ತೆಯ ಕಾಮಗಾರಿ ಸಾಗುತ್ತಿದ್ದು, ಇದೀಗ ಕಾಂಕ್ರಿಟ್ ಅಳವಡಿ ಸಲಾಗುತ್ತಿದೆ. ಕ್ಯೂರಿಂಗ್ ಬಳಿಕ ಈ ರಸ್ತೆ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗ ಲಿದೆ. ಕೆಲವು ವರ್ಷಗಳ ಹಿಂದೆ ಇಲ್ಲಿನ ನೀರು ಹರಿಯುವ ತೋಡಿನ ಮೇಲೆಯೇ ರಸ್ತೆ ನಿರ್ಮಿಸಲಾಗಿತ್ತು. ಭಾರೀ ಮಳೆಗೆ ರಸ್ತೆಯ ಕೆಳಗಿದ್ದ ತೋಡಿನಲ್ಲಿ ನೀರಿನ ಹರಿವು ಹೆಚ್ಚಾಗಿ ರಸ್ತೆಯ ಒಂದು ಬದಿ ಕುಸಿದಿತ್ತು. ಕುಸಿತಕ್ಕೂ ಮುನ್ನ ಇದೇ ಭಾಗದಲ್ಲಿ ಸಣ್ಣ ಗುಂಡಿ ಕಾಣಿಸಿಕೊಂಡಿತ್ತು. ಸ್ಥಳೀಯರು ಪಾಲಿಕೆಗೆ ಮಾಹಿತಿ ನೀಡಿದರೂ, ಸರಿಪಡಿಸುವ ಗೋಜಿಗೆ ಅಧಿಕಾರಿಗಳು ಹೋಗಿರಲಿಲ್ಲ.
ಇದಾದ ಕೆಲವು ದಿನಗಳಲ್ಲಿಯೇ ಜೋರಾಗಿ ಸುರಿದ ಮಳೆಗೆ ರಸ್ತೆ ಕುಸಿತಗೊಂಡಿದ್ದು, ಸುತ್ತಲಿನ ಮಂದಿಗೆ ಇದರಿಂದ ಸಂಕಷ್ಟ ಎದುರಾಗಿತ್ತು. ಬಳಿಕ ಈ ರಸ್ತೆ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ತೋರಿದ ನಿರ್ಲಕ್ಷ್ಯದ ಬಗ್ಗೆ ‘ಉದಯವಾಣಿ ಸುದಿನ’ ವರದಿ ಪ್ರಕಟಿಸಿತ್ತು. ಬಳಿಕ ಕೇಂದ್ರ ಸರಕಾರದ 15ನೇ ಹಣಕಾಸು ಅನುದಾನದಲ್ಲಿ 21 ಲಕ್ಷ ರೂ.ವನ್ನು ಈ ಕಾಮಗಾರಿ ಉದ್ದೇಶಕ್ಕೆ ಮನಪಾ ಬಿಡುಗಡೆಗೊಳಿಸಿತ್ತು. ಅದರಂತೆ ಕೆಲವು ದಿನಗಳ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಇದೀಗ ಕೊನೆಯ ಹಂತದಲ್ಲಿದೆ.
ಸ್ಥಳೀಯ ಮನಪಾ ಸದಸ್ಯೆ ರಂಜಿನಿ ಕೋಟ್ಯಾನ್ ಅವರು ‘ಸುದಿನ’ಕ್ಕೆ ಪ್ರತಿಕ್ರಿ ಯಿಸಿ ದೇರೆಬೈಲ್ ಬಳಿ ಕುಸಿದ ರಸ್ತೆ ಕಾಮಗಾರಿ ಕೊನೆಯ ಹಂತದಲ್ಲಿದೆ. ನಾನು ಕೂಡ ಈಗಾಗಲೇ ಪರೀಶೀಲನೆ ನಡೆಸಿದ್ದು, ಕಾಮಗಾರಿಗೆ ವೇಗ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣವಾಗಲಿದೆ’ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.