ಬಿತ್ತನೆ ಯಂತ್ರ ಆವಿಷ್ಕರಿಸಿದ ನಿವೃತ್ತ ಅಧಿಕಾರಿ


Team Udayavani, May 4, 2022, 10:17 AM IST

3agro

ಬೀದರ: ಬಿತ್ತನೆಗೆ ಕೂಲಿಯಾಳು ಸಮಸ್ಯೆ, ಜತೆಗೆ ದುಬಾರಿ ವೆಚ್ಚದ ಸಾಗುವಳಿಯಿಂದ ಬೇಸತ್ತಿದ್ದ ಜಿಲ್ಲೆಯ ನಿವೃತ್ತ ಅಧಿಕಾರಿಯೂ ಆಗಿರುವ ಪ್ರಗತಿಪರ ರೈತರೊಬ್ಬರು ಸ್ಥಳೀಯವಾಗಿ ಲಭ್ಯ ಅನುಪಯುಕ್ತ ವಸ್ತುಗಳಿಂದಲೇ ಬಿತ್ತನೆ ಯಂತ್ರ (ಕೂರಿಗೆ)ವನ್ನು ಆವಿಷ್ಕರಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ.

ತಮ್ಮ ಜಮೀನಿನಲ್ಲೇ ಕಬ್ಬು ನಾಟಿ ಯಶಸ್ವಿಯಾಗಿ ಮಾಡಿದ್ದಾರೆ. ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ರಾಜೇಂದ್ರ ಕುಲಕರ್ಣಿ ಬಿತ್ತನೆ ಯಂತ್ರವನ್ನು ಅಭಿವೃದ್ಧಿಪಡಿಸಿ ಗಮನ ಸೆಳೆದವರು. ಕೃಷಿ ಚಟುವಟಿಕೆಗಳಿಗೆ ಹೊಸ ಹೊಸ ಕೃಷಿ ಯಂತ್ರೋಪಕರಣಗಳು ವರದಾನವಾಗುತ್ತಿವೆ. ಆದರೆ, ಸಾವಿರಾರು ರೂಪಾಯಿ ಬೆಲೆ ಬಾಳುವ ಯಂತ್ರ, ಜತೆಗೆ ಅವುಗಳ ನಿರ್ವಹಣೆ ಖರ್ಚು ಅಧಿಕವಾಗುತ್ತಿರುವುದು ಆರ್ಥಿಕ ಹೊರೆ ಆಗುತ್ತಿದೆ. ಆದರೆ, ಕುಲಕರ್ಣಿ ಅವರು ತಯಾರಿಸಿದ ಯಂತ್ರ ಅತಿ ಕಡಿಮೆ ಖರ್ಚು, ಅಷ್ಟೇ ಅಲ್ಲ ಬಿತ್ತನೆಗೂ ಸುಲಭವಾಗಿದೆ.

ಕಲ್ಬುರ್ಗಿ ಆಕಾಶವಾಣಿಯಲ್ಲಿ ಮುಖ್ಯಸ್ಥರಾಗಿ ನಿವೃತ್ತಿ ಜೀವನ ನಡೆಸುತ್ತಿರುವ ಕುಲಕರ್ಣಿ ಅವರದ್ದು ಕೃಷಿ ಕುಟುಂಬ. ಹಾಗಾಗಿ ನಿವೃತ್ತಿ ಬಳಿಕ ಸ್ವಗ್ರಾಮ ಮುತ್ತಂಗಿಯಲ್ಲಿ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಇವರಿಗೆ ಬಿತ್ತನೆಗೆ ಎದುರಾದದ್ದು ಕೂಲಿ ಆಳು ಮತ್ತು ಅವರ ಖರ್ಚಿನ ಸಮಸ್ಯೆ. ಇದನ್ನು ಮನಗಂಡ ಕುಲಕರ್ಣಿ, ಹಿರಿಯ ರೈತರಾದ ತಮ್ಮ ತಂದೆಯ ಸಲಹೆಯಂತೆ ಬಿತ್ತನೆ ಯಂತ್ರವನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಕೃಷಿಕರೆಂದರೆ ವ್ಯವಸಾಯಕ್ಕೆ ಮಾತ್ರ ಸೀಮಿತರಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕುಬೋಟೋ ಟ್ರ್ಯಾಕ್ಟರ್‌ ಹೊಂದಿರುವ ರಾಜೇಂದ್ರ ಅವರು ಸ್ಥಳೀಯವಾಗಿ ಸಿಗುವ ಕಬ್ಬಿಣದ ತುಂಡು ಮತ್ತು ಪೈಪ್‌ಗ್ಳನ್ನು ಬಳಿಸಿ ವೆಲ್ಡರ್‌ ಸಹಾಯದಿಂದ ನೇರವಾಗಿ ಕಬ್ಬು ಬಿತ್ತುವ ಯಂತ್ರ (ಕೂರಿಗೆ) ಆವಿಷ್ಕರಿಸಿದ್ದು, ಇದಕ್ಕೆ ಕೇವಲ 7,500 ರೂ. ವೆಚ್ಚ ಮಾಡಿದ್ದಾರೆ.

ಈ ಯಂತ್ರದಿಂದಲೇ ತಮ್ಮ ಜಮೀನಿನಲ್ಲಿ ಒಂದೇ ದಿನದಲ್ಲಿ ಮೂರು ಎಕರೆಯಷ್ಟು ಕಬ್ಬು ಬಿತ್ತನೆ ಯಶಸ್ವಿಯಾಗಿ ಮಾಡಿದ್ದಾರೆ. ಈ ಕೂರಿಗೆಯಿಂದ ಕಬ್ಬು, ಶುಂಠಿ, ಅರಿಶಿಣ ಬಿತ್ತುವುದಷ್ಟೇ ಅಲ್ಲದೇ ರಸಾಯನಿಕ ಗೊಬ್ಬರ, ಹುಡಿಯಾಗಿ ಇರುವ ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ ಸಹ ಸಲೀಸಾಗಿ ಬೆಳೆಯೊಂದಿಗೆ ಬಿತ್ತಬಹುದು. ಜತೆಗೆ ಇದೊಂದೇ ಯಂತ್ರದಿಂದ ಏಕಕಾಲಕ್ಕೆ ಜಮೀನು ಬೋದು ಏರಿಸುವುದು, ಬೀಜ, ಗೊಬ್ಬರ ಹಾಕಬಹುದು.

ಏಳೆಂಟು ಜನರು ಮಾಡುವ ಕೆಲಸವನ್ನು ಈ ಒಂದು ಯಂತ್ರ ಮಾಡುತ್ತಿದ್ದು, ಕೂಲಿ ಹಣ ಮತ್ತು ಸಮಯ ಎಲ್ಲವನ್ನೂ ಉಳಿಸುತ್ತಿದೆ. ವಿನೂತನ ಮಾದರಿಯ ಈ ಯಂತ್ರ ಸದ್ಯ ರೈತರಿಗೆ ಆಕರ್ಷಣೆಯಾಗಿದ್ದು, ಜಮೀನಿಗೆ ಭೇಟಿ ನೀಡಿ ಕೂರಿಗೆ ಮತ್ತು ಬಿತ್ತನೆ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಡಿಮೆ ಸಮಯ ಮತ್ತು ಕಡಿಮೆ ಖರ್ಚಿನಲ್ಲಿ ಸ್ಥಳೀಯವಾಗಿಯೇ ಯಾರು ಬೇಕಾದರೂ ತಯ್ನಾರಿಸಬಹುದು ಮತ್ತು ಬಳಸಬಹುದು. ರೈತರು ಆಸಕ್ತರಿದ್ದಲ್ಲಿ ಅವರಿಗೆ ಸಹಾಯ ಮಾಡುತ್ತೇನೆ ಎನ್ನುತ್ತಾರೆ ರಾಜೇಂದ್ರ ಕುಲಕರ್ಣಿ.

ನಮ್ಮದು ಕೃಷಿ ಕುಟುಂಬವಾಗಿದ್ದು, ನಿವೃತ್ತಿ ನಂತರವೂ ಕೃಷಿಕ ಕಾಯಕ ಮುಂದುವರೆಸಿದ್ದೇನೆ. ನಮ್ಮ ಭಾಗದಲ್ಲಿ ಕಬ್ಬು, ಶುಂಠಿ ಮತ್ತು ಅರಶಿಣ ಬೆಳೆಯಲಾಗುತ್ತದೆ. ಆದರೆ, ಕೂಲಿ ಆಳುಗಳು, ಅವರ ಖರ್ಚಿನ ಸಮಸ್ಯೆ ಇದೆ. ಇದನ್ನು ಮನಗಂಡು, ತಂದೆಯವರ ಪ್ರೇರಣೆಯಿಂದ ಬಿತ್ತನೆ ಯಂತ್ರ (ಕೂರಿಗೆ) ತಯ್ನಾರಿಸಿದ್ದೇನೆ. ಸ್ಥಳೀಯವಾಗಿ ಲಭ್ಯ ವಸ್ತುಗಳನ್ನು ಬಳಸಿ, ಒಂದೇ ದಿನದಲ್ಲಿ ಕೇವಲ 7,500 ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ್ದೇನೆ. ಈ ಕೂರಿಗೆಯಿಂದ ಒಂದೇ ದಿನ 3 ಎಕರೆ ಕಬ್ಬು ನಾಟಿ ಯಶಸ್ವಿಯಾಗಿ ಮಾಡಿದ್ದೇನೆ. ರಾಜೇಂದ್ರ ಕುಲಕರ್ಣಿ, ರೈತ ಮತ್ತು ನಿವೃತ್ತ ಆಕಾಶವಾಣಿ ಮುಖ್ಯಸ್ಥ

ಶಶಿಕಾಂತ ಬಂಬುಳ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: The accused in the ATM robbery-shootout case have finally been identified.

Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್‌ ಪ್ರಕರಣದ ಆರೋಪಿಗಳ ಗುರುತು ಪತ್ತೆ

Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ

Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ

Bidar: farmer ends his life

Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು

Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ

Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ

Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ

Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.