ಚಾಮರಾಜನಗರ: ಸೂರ್ಯನ ಸುತ್ತ ಉಂಗುರ, ಆಗಸದಲ್ಲಿ ಕೌತುಕದ ವಿದ್ಯಮಾನ
Team Udayavani, May 4, 2022, 6:49 PM IST
ಚಾಮರಾಜನಗರ: ನಗರದ ಜನತೆ ಆಕಾಶದಲ್ಲಿ ಅಪರೂಪದ ವಿದ್ಯಮಾನವನ್ನು ವೀಕ್ಷಿಸಿದರು. ಸೂರ್ಯನ ಸುತ್ತ ವೃತ್ತಾಕಾರದ ಉಂಗುರವನ್ನು ನೋಡಿ ಪುಳಕಿತರಾದರು.
ನಗರದಲ್ಲಿ ಬೆಳಿಗ್ಗೆ 11.15ರ ಸಮಯದಲ್ಲಿ ಹಲವು ನಿಮಿಷಗಳ ಕಾಲ ಸೂರ್ಯನ ಸುತ್ತ ಪ್ರಭಾವಳಿಯಂತಹ ಉಂಗುರ ಕಂಡ ಬಂತು. ಹಲವಾರು ಮಂದಿ ಕುತೂಹಲಿಗಳು ಈ ವಿದ್ಯಮಾನವನ್ನು ವೀಕ್ಷಿಸಿದರು.
ಬೆಳಕಿನ ವಕ್ರೀಭವನ: ಇದಕ್ಕೆ ಬೆಳಕಿನ ವಕ್ರೀಭವನ ಕಾರಣ ಎಂದು ಖಗೋಳ ತಜ್ಞರು ಹೇಳುತ್ತಾರೆ. ವಾತಾವರಣದಲ್ಲಿ ಹಿಮ ಇದ್ದಾಗ, ಅದರ ಹರಳುಗಳ ಮೇಲೆ ಸೂರ್ಯನ ಕಿರಣಗಳು ಬಿದ್ದು, ವಕ್ರೀಭವನ ಹೊಂದುತ್ತವೆ ಅರ್ಥಾತ್ ಬಾಗುತ್ತವೆ. 20 ಸಾವಿರ ಅಡಿ ಎತ್ತರದಲ್ಲಿ ಮೋಡಗಳಿದ್ದು, ಆ ಮೋಡಗಳು ಅತಿ ಸೂಕ್ಷ್ಮ ಹಿಮದ ಹರಳುಗಳನ್ನು ಹೊಂದಿರುತ್ತವೆ.
ವಿಜ್ಞಾನಿಗಳು ಇದನ್ನು 22 ಡಿಗ್ರಿ ಉಂಗುರ ಎಂದೂ ಕರೆಯುತ್ತಾರೆ. ಈ ಉಂಗುರಗಳು ಸೂರ್ಯನ ಸುತ್ತ ಸುಮಾರು 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತವೆ ಎಂದು ಖಗೋಳ ತಜ್ಞರು ಹೇಳುತ್ತಾರೆ. ಈ ರೀತಿಯ ಉಂಗುರ ಚಂದ್ರನ ಸುತ್ತಲೂ ಆಗಾಗ ಸೃಷ್ಟಿಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Gangavathi: ಕಾಲುಬಾಯಿ ರೋಗ… ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಕುರಿ-ಮೇಕೆಗಳ ಸಾವು
Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…
Actor Darshan: ನಟ ದರ್ಶನ್ ಜಾಮೀನು ಅರ್ಜಿ ಹೈಕೋರ್ಟ್ನಲ್ಲಿ ಇಂದು ವಿಚಾರಣೆ
Assembly By Election: ಗೆದ್ದು ಬನ್ನಿ; ಕಾಂಗ್ರೆಸ್ ಸಚಿವರಿಗೆ ರಣದೀಪ್ ಸುರ್ಜೇವಾಲ ಹುಕುಂ
MUST WATCH
ಹೊಸ ಸೇರ್ಪಡೆ
Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ
Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ
BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ
Kerala: ವಿಡಿಯೋ ಅಪ್ಲೋಡ್ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ
Explainer: ವಯನಾಡ್ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್ ಅಖಾಡಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.