
ಹೈಕೋರ್ಟ್ನಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ
ಮುಖ್ಯ ನ್ಯಾಯಾಧೀಶರ ನಕಲಿ ಸಹಿ ಮಾಡಿ ವಂಚನೆ
Team Udayavani, May 5, 2022, 2:44 PM IST

ಹುಬ್ಬಳ್ಳಿ: ಹೈಕೋರ್ಟ್ ಧಾರವಾಡ ಸಂಚಾರಿ ಪೀಠದಲ್ಲಿ ಮೇಲ್ದರ್ಜೆಯ ಸಹಾಯಕ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದಲ್ಲದೆ, ಸಂಚಾರಿ ಹೈಕೋರ್ಟ್ ನ್ಯಾಯಪೀಠ ವಿಭಾಗದ ಹೆಸರಿನಲ್ಲಿ ಖೊಟ್ಟಿ ಆದೇಶ ಪತ್ರ ತಯಾರಿಸಿ ಮುಖ್ಯ ನ್ಯಾಯಾಧೀಶರ ನಕಲಿ ಸಹಿ ಮಾಡಿ ವಂಚಿಸಿದ್ದ ಓರ್ವನಿಗೆ ಸ್ಥಳೀಯ 2ನೇ ಜೆಎಂಎಫ್ಸಿ ನ್ಯಾಯಾಲಯ ಒಂದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 5ಸಾವಿರ ರೂ. ದಂಡ ವಿಧಿಸಿ ಬುಧವಾರ ಆದೇಶಿಸಿದೆ.
ನಗರದ ಶಂಕರಗೌಡ ಎಫ್. ಪಾಟೀಲ ಎಂಬಾತನೇ ಶಿಕ್ಷೆಗೊಳಗಾದವ. ಈತನು ಕಳ್ಳೆಪ್ಪ ಬಿ. ಮದಪ್ಪನವರ ಹಾಗೂ ರಾಮಪ್ಪ ಕೆ. ಹೊರಟ್ಟಿ ಎಂಬುವರಿಗೆ ಟಿವಿ ನ್ಯೂಸ್ ಚಾನಲ್ದಲ್ಲಿ ಕೆಲಸ ಕೊಡಿಸುವುದಾಗಿ ಹಾಗೂ ಹೈಕೋರ್ಟ್ ಧಾರವಾಡ ಸಂಚಾರಿ ಪೀಠದ ಮುಖ್ಯ ನ್ಯಾಯಾಧೀಶರು ಪರಿಚಯ ಇದ್ದಾರೆ. ಅವರಿಂದ ಧಾರವಾಡ ಹೈಕೋರ್ಟ್ದಲ್ಲಿ ಮೇಲ್ದರ್ಜೆಯ ಸಹಾಯಕ ನೌಕರಿ ಕೊಡಿಸುವುದಾಗಿ ನಂಬಿಸಿ, 1,13,500ರೂ. ಗಳನ್ನು ಶಿಗ್ಗಾವಿಯ ತನ್ನ ಬ್ಯಾಂಕ್ ಶಾಖೆಯ ಖಾತೆ ಮೂಲಕ ಪಡೆದಿದ್ದ.
ನಂತರ ಸಂಚಾರಿ ಹೈಕೋರ್ಟ್ ನ್ಯಾಯಪೀಠ ವಿಭಾಗ ಧಾರವಾಡರವರ ಹೆಸರಿನಲ್ಲಿ ಖೊಟ್ಟಿ ಆದೇಶ ಪತ್ರ ತಯಾರಿಸಿ ಮುಖ್ಯ ನ್ಯಾಯಾಧೀಶರ ನಕಲಿ ಸಹಿ ಮಾಡಿ ಇಬ್ಬರಿಗೂ ಕೊಟ್ಟು ವಂಚಿಸಿದ್ದ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸ್ಥಳೀಯ 2ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಕರ್ನ ಸಿಂಗ ಆರ್.ಯು. ಅವರು ಆಪಾದಿತನ ಮೇಲಿನ ಆರೋಪ ಸಾಬೀತಾಗಿದೆ ಎಂದು ಪರಿಗಣಿಸಿ, ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಈದಾ ಗೋವಿಂದಮ್ಮಾ ಬಾಲಯ್ಯ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್

Hubli: ಕ್ರಿಮಿನಲ್ ಜತೆಯೇ ಪೊಲೀಸ್ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್ ಕಾರ್ಯಾಚರಣೆ
MUST WATCH
ಹೊಸ ಸೇರ್ಪಡೆ

Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.