ಬೇಸಿಗೆಗೆ ಇಲ್ಲ ಈ ಬಾರಿ ಬಾಯಾರಿಕೆ!

ಜಿಲ್ಲೆಯಲ್ಲಿವೆ 638 ಜನವಸತಿಗಳು

Team Udayavani, May 6, 2022, 11:28 AM IST

9

ಬಾಗಲಕೋಟೆ: ಪ್ರತಿವರ್ಷ ಬೇಸಿಗೆ ವೇಳೆ ಜಿಲ್ಲೆಯಲ್ಲಿ ಉಂಟಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಿದೆ.

ಹೌದು, ಜಿಲ್ಲೆಯಲ್ಲಿ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭೆ ಮೂರು ನದಿಗಳು ಹರಿದಿದ್ದರೂ ಪ್ರತಿವರ್ಷ ಈ ಮೂರು ನದಿಗಳಿಗೆ ನೀರು ಬಿಡಿ ಎಂಬ ಕೂಗು ಬೇಸಿಗೆಯಲ್ಲಿ ಕೇಳಿ ಬರುತ್ತಿತ್ತು. ಆದರೆ, ಈ ಬಾರಿ ಅಂತಹ ಕೂಗು ಕೇಳಿ ಬಂದಿಲ್ಲ. ಜತೆಗೆ ಈ ನದಿ ಪಾತ್ರದ ಪ್ರಮುಖ ಡ್ಯಾಂ, ಬ್ಯಾರೇಜ್‌ಗಳಲ್ಲೂ ನೀರಿನ ಸಂಗ್ರಹವಿದ್ದು, ಸಕಾಲಕ್ಕೆ ನೀರು ಕೂಡ ಹರಿಸಲಾಗಿದೆ.

ಮಲಪ್ರಭೆಗೆ ಬಂದ ನೀರು: ಜಿಲ್ಲೆಯಲ್ಲಿ ಅತಿ ಬೇಗ ಬತ್ತುವ ನದಿಗಳಲ್ಲಿ ಮಲಪ್ರಭೆ ಕೂಡ ಒಂದು. ಕೃಷ್ಣೆಯಲ್ಲಿ ನಿರಂತರ ಬ್ಯಾಕ್‌ ವಾಟರ್‌ ಇರುತ್ತದೆ. ಘಟಪ್ರಭೆ ಪಾತ್ರದಲ್ಲೂ ಬಾಗಲಕೋಟೆ ಸುತ್ತಮುತ್ತ ಕೂಡ ನಿಲ್ಲುತ್ತದೆ. ಹೀಗಾಗಿ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕೊಂಚ ಕಡಿಮೆ.

ಆದರೆ, ಮಲಪ್ರಭಾ ನದಿ, ಬೆಳಗಾವಿ ಜಿಲ್ಲೆಯಿಂದ ಬಾಗಲಕೋಟೆ ಪ್ರವೇಶಿಸಿ, ಕೊನೆಗೆ ಕೂಡಲಸಂಗಮದಲ್ಲಿ ಕೂಡುವ ವರೆಗೂ ಸುಮಾರು 18 ಬ್ಯಾರೇಜ್‌ಗಳಿವೆ. ಅವುಗಳೆಲ್ಲ ಅತ್ಯಂತ ಕಡಿಮೆ ಪ್ರಮಾಣದ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಹೀಗಾಗಿ ನೀರು ಸಂಗ್ರಹಗೊಂಡರೂ ಅದು ಬಹಳ ದಿನಗಳವರೆಗೆ ಉಳಿಯಲ್ಲ. ಹೀಗಾಗಿ ನದಿಗೆ ನೀರು ಬಿಡಿ, ಬ್ಯಾರೇಜ್‌ ತುಂಬಿಸಿ ಎಂಬ ಕೂಗು ಕೇಳಿ ಬರುತ್ತದೆ. ಕಳೆದ ವಾರವಷ್ಟೇ ಮಲಪ್ರಭಾ ನದಿಗೆ ನವಿಲುತೀರ್ಥ ಜಲಾಶಯದಿಂದ ನೀರು ಬಿಡಲಾಗಿದೆ. ಇದರಿಂದ ಈ ನದಿ ಪಾತ್ರದ ಎಲ್ಲಾ ಬ್ಯಾರೇಜ್‌ಗಳು ತುಂಬಿವೆ. ಇದು ಸುತ್ತಲಿನ ಹಳ್ಳಿ, ಜನವಸತಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಿದೆ.

ಮುಖ್ಯವಾಗಿ ಈ ನದಿ ಪಾತ್ರದ ಬ್ಯಾರೇಜ್‌ಗಳಲ್ಲಿನ ನೀರನ್ನೇ ಅವಲಂಬಿಸಿ, 8ರಿಂದ 10ಕ್ಕೂ ಹೆಚ್ಚು ಬಹುಹಳ್ಳಿ ಕುಡಿಯುವ ನೀರುಗಳು ನಿರ್ವಹಣೆಯಾಗುತ್ತಿದ್ದು, ಆ ಯೋಜನೆಗಳಿಗೆ ಜಲಮೂಲದ ಸಮಸ್ಯೆಯೂ ಸದ್ಯಕ್ಕಿಲ್ಲ. ಅಲ್ಲದೇ ಮಲಪ್ರಭಾ ನದಿಯ ನೀರನ್ನೇ ಬಳಸಿಕೊಂಡು ಬಾದಾಮಿ ತಾಲೂಕಿನ ಪ್ರಮುಖ ಕೆಂದೂರ ಕೆರೆ ಸಹಿತ ಹಲವು ಕೆರೆ ತುಂಬಿಸುತ್ತಿದ್ದು, ಇದೂ ಜನ- ಜಾನುವಾರುಗಳ ನೀರಿನ ದಾಹ ನೀಗಿಸುತ್ತಿದೆ.

ಹೆರಕಲ್‌ ಬ್ಯಾರೇಜ್‌ ತಲುಪಿದ ನೀರು: ಇತ್ತ ಘಟಪ್ರಭಾ ನದಿ ಪಾತ್ರದ ಬ್ಯಾರೇಜ್‌ಗಳೂ ಕಳೆದೊಂದು ವಾರದಿಂದ ಬತ್ತಿದ್ದವು. ಹೀಗಾಗಿ ಘಟಪ್ರಭಾ ನದಿಗೂ ಹಿಡಕಲ್‌ ಡ್ಯಾಂನಿಂದ ನೀರು ಹರಿಸಲಾಗಿದ್ದು, ಈ ನದಿ ಪಾತ್ರದ ಢವಳೇಶ್ವರ ಬ್ಯಾರೇಜ್‌ನಿಂದ ಬೀಳಗಿ ತಾಲೂಕಿನ ಹೆರಕಲ್‌ ಬ್ಯಾರೇಜ್‌ವರೆಗೂ ಹರಿದಿದ್ದು, ಎಲ್ಲ ಬ್ಯಾರೇಜ್‌ಗಳು ತುಂಬಿಕೊಂಡಿವೆ.

ಮುಖ್ಯವಾಗಿ ತಾಲೂಕಿನ ಕಾತರಕಿ-ಕಲಾದಗಿ ಹಾಗೂ ಹೆರಕಲ್‌ ಬ್ಯಾರೇಜ್‌ಗಳಲ್ಲಿ ತುಂಬಿಕೊಳ್ಳುವ ಜಲಮೂಲವನ್ನೇ ಆಶ್ರಯಿಸಿ, ಬಾಗಲಕೋಟೆ ನಗರ, ಬೀಳಗಿ ಪಟ್ಟಣ, ತಾಲೂಕು ಸಹಿತ ಸುಮಾರು ಪುನರ್‌ ವಸತಿ ಕೇಂದ್ರಗಳು, ಗ್ರಾಮಗಳು ಕುಡಿಯುವ ನೀರು ಪಡೆಯುತ್ತಿವೆ. ಹೀಗಾಗಿ ಸದ್ಯ ಎರಡೂ ಬ್ಯಾರೇಜ್‌ಗಳು ತುಂಬಿಕೊಂಡಿದ್ದರಿಂದ ಜಿಲ್ಲಾ ಕೇಂದ್ರ ಬಾಗಲಕೋಟೆ ನಗರ, ನವನಗರ, ವಿದ್ಯಾಗಿರಿ, ಸುತ್ತಲಿನ ಹತ್ತಾರು ಪುನರ್‌ವಸತಿ ಕೇಂದ್ರಗಳಿಗೆ ನಿರಂತರವಾಗಿ ಕುಡಿಯುವ ನೀರಿನ ಭೀತಿ ಸದ್ಯಕ್ಕಿಲ್ಲ.

ಜಿಲ್ಲೆಯಲ್ಲಿವೆ 638 ಜನ ವಸತಿಗಳು: ಜಿಲ್ಲೆಯ 9 ತಾಲೂಕು, 17 ನಗರ ಸ್ಥಳೀಯ ಸಂಸ್ಥೆಗಳು ಸಹಿತ ಒಟ್ಟು 638 ಜನ ವಸತಿ ಪ್ರದೇಶಗಳಿವೆ. ಹುನಗುಂದ, ಜಮಖಂಡಿ ಹಾಗೂ ಬಾದಾಮಿ, ಗುಳೇದಗುಡ್ಡ ತಾಲೂಕಿನ ಕೆಲ ಜನವಸತಿ ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರತಿವರ್ಷವೂ ಉಂಟಾಗುತ್ತಿತ್ತು. ಆದರೆ, ಈ ಬಾರಿ ಮಾತ್ರ ಎಲ್ಲ ಬ್ಯಾರೇಜ್‌, ಬಹುತೇಕ ಕೆರೆ, ನದಿ ಪಾತ್ರದಲ್ಲಿ ನೀರಿನ ಸಂಗ್ರಹವಿದ್ದು, ಕುಡಿವ ನೀರಿನ ಸಮಸ್ಯೆ ಜಿಲ್ಲೆಯಾದ್ಯಂತ ಕಾಣಿಸಿಕೊಂಡಿಲ್ಲ.

ಜಿಲ್ಲೆಯಲ್ಲಿ 17 ನಗರ ಸ್ಥಳೀಯ ಸಂಸ್ಥೆಗಳು, 106ಕ್ಕೂ ಹೆಚ್ಚು ಪುನರ್‌ವಸತಿ ಕೇಂದ್ರಗಳು ಸೇರಿದಂತೆ ಒಟ್ಟು 638 ಜನ ವಸತಿ ಪ್ರದೇಶಗಳಿವೆ. ಮಲಪ್ರಭಾ, ಘಟಪ್ರಭಾ ನದಿಗೆ ನೀರು ಬಿಡಲಾಗಿದ್ದು, ಎಲ್ಲ ಬ್ಯಾರೇಜ್‌ ತುಂಬಿಕೊಂಡಿವೆ. ಕೃಷ್ಣಾ ನದಿ ಪಾತ್ರದಲ್ಲೂ ಸಾಕಷ್ಟು ಹಿನ್ನೀರು ಸಂಗ್ರಹಗೊಂಡಿದೆ. ಈ ವಾರದಲ್ಲಿ ತಾಲೂಕಿನ ತಿಮ್ಮಾಪುರ ಏತ ನೀರಾವರಿ ಕಾಲುವೆಗೂ ನೀರು ಬಿಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹೀಗಾಗಿ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಇಲ್ಲ. -ಮಹಾದೇವ ಮುರಗಿ, ಅಪರ ಜಿಲ್ಲಾಧಿಕಾರಿ    

 -ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.