ಮಿಸ್ಟರ್‌ ಪರ್ಫೆಕ್ಟ್ ‘ಪುರುಷೋತ್ತಮ’


Team Udayavani, May 8, 2022, 1:47 PM IST

ಮಿಸ್ಟರ್‌ ಪರ್ಫೆಕ್ಟ್ ‘ಪುರುಷೋತ್ತಮ’

ಗಂಡ ಕೇವಲ ಹೆಂಡತಿಯ ಯಜಮಾನನಾಗಿರದೇ ಆಕೆಯ ಪ್ರತಿಯೊಂದು ಭಾವನೆ, ಸಮಸ್ಯೆಗಳನ್ನು ಅರಿತು ಬದುಕು ಸಾಗಿಸಬೇಕು. ಪುರುಷ, ಹೆಣ್ಣನ್ನು ಗೌರವದಿಂದ, ವಿಶ್ವಾಸದಿಂದ ಕಂಡಾಗ ಮಾತ್ರ ಆತ “ಪುರುಷೋತ್ತಮ’ ಎನಿಸಿಕೊಳ್ಳುತ್ತಾನೆ.  ಇಂತಹ ಒಂದು ಕಥಾಹಂದರದೊಂದಿಗೆ ತೆರೆಗೆ ಬಂದಿರುವ ಚಿತ್ರ “ಪುರುಷೋತ್ತಮ’.

ಡೈವೋರ್ಸ್‌ ಲಾಯರ್‌, ಅಡ್ವೊಕೇಟ್‌ ಪುರುಷೋತ್ತಮ ಸಕಲ ಕಲಾವಲ್ಲಭ. ಈತನದ್ದು ಹೆಂಡತಿ ಮಗಳಿರುವ ಸುಂದರ ಕುಟುಂಬ. ಜಗತ್ತಿನಲ್ಲಿ ಗಂಡ – ಹೆಂಡತಿಯಷ್ಟು ಸುಂದರವಾದ ಸ್ನೇಹ ಸಂಬಂಧ ಬೇರೊಂದಿಲ್ಲಾ ಅನ್ನುವ ಪುರು, ಅಪ್ಪಟ ಗೃಹಿಣಿಯಾಗಿಯೂ ಯಕ್ಷಗಾನ ಕಲಾವಿದೆಯಾಗಿರುವ ಮನೆ ಒಡತಿ ವಾಸುಕಿ. ಎಲ್ಲರಿಗಂತಲೂ ಚೂಟಿ, ಪಟ ಪಟ ಅಂತಾ ಮಾತನಾಡುವ ಮಗಳು ಪಿಂಕಿ. ಒಂದು ಸುಂದರ ಕುಟುಂಬ ಪ್ರೀತಿಯಿಂದ ಸಾಗುತ್ತಾ ಇದೆ ಅಂದರೆ ಅದು ಚಿತ್ರ ಆಗಲಾರದು. ಅಂತಯೇ ಎಲ್ಲಾ ಚಿತ್ರಗಳಲ್ಲಿ ಬರುವಂತೆ ಈ ಕುಟುಂಬದಲ್ಲೂ ಒಂದು ಸಮಸ್ಯೆ ಎದುರಾಗುತ್ತೆ. ಏನು ಆ ಸಮಸ್ಯೆ? ಅದನ್ನು ಹೇಗೆ ಬಗೆಹರಿಸುತ್ತಾರೆ ಎಂದು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕು.

ಚಿತ್ರದ ಆರಂಭದಿಂದಲೇ ಒಂದು ಅಂಶ ಪ್ರೇಕ್ಷಕರನ್ನು ಯೋಚನೆಗೆ ತಳ್ಳುವಂತೆ ಮಾಡುತ್ತದೆ. ಚಿತ್ರದ ಮೊದಲ ಭಾಗ ಸರಾಗವಾಗಿ ಸಾಗಿ ಕಥೆಯ ಪ್ರಮುಖ ಘಟ್ಟಕ್ಕೆ ತಂದು ನಿಲ್ಲಿಸುತ್ತದೆ. ಆದರೆ ಎರಡನೇ ಭಾಗ ಕೆಲವು ಕಡೆ ಬೋರ್‌ ಆಗುವ ಜೊತೆಗೆ ಅತಿಯಾಗಿ ಎಳೆದಾಡಿದಂತೆ ಅನಿಸುವುದು ಉಂಟು. ಅವಶ್ಯಕತೆಗಿಂತ ಜಾಸ್ತಿ ದೃಶ್ಯಗಳನ್ನು ತುರುಕಲಾಗಿದೆ. ಆದರೂ ಚಿತ್ರದ ಕೊನೆಯವರೆಗೂ ಒಂದು ಕೂತುಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿರ್ದೇಶಕ ಅಮರನಾಥ್‌ ಯಶಸ್ವಿಯಾಗಿದ್ದಾರೆ.

ಚಿತ್ರದ ಮೊದಲ ಭಾಗದಲ್ಲಿ ಹೀರೋ ಮಿಂಚಿದರೆ, ಎರಡನೇ ಭಾಗದಲ್ಲಿ ಹಿರೋಯಿನ್‌ ನಟನೆಯಲ್ಲಿ ಪಾರುಪತ್ಯ ಮೆರೆದಿದ್ದಾರೆ. ಚಿತ್ರದ ನಾಯಕನ ಪಾತ್ರ ಇಷ್ಟೆನಾ ಅನ್ನಿಸುವವರಿಗೆ ಕೊನೆಯಲ್ಲಿ ಸಿಗುವ ಟ್ವಿಸ್ಟ್‌ ಎಲ್ಲದಕ್ಕೂ ಉತ್ತರ ನೀಡುತ್ತದೆ. ಒಂದಿಷ್ಟು ಡೈಲಾಗ್‌, ಅಲ್ಲಲ್ಲಿ ಕಾಮಿಡಿ, ಪ್ರೀತಿ, ಡ್ರಾಮಾ ಹಾಗೂ ಸಪ್ಸೆನ್ಸ್‌ ಥ್ರಿಲ್ಲರ್‌ ಕೂಡಿಸಿ ಪುರುಷೋತ್ತಮನಾಗಿದ್ದಾನೆ.

ಇಲ್ಲಿತನಕ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಜಿಮ್‌ ರವಿ ನಾಯಕನಾಗಿ ಅಭಿನಯಿಸದ ಮೊದಲ ಚಿತ್ರವಾಗಿದ್ದು, ತಮ್ಮ ಡೈಲಾಗ್‌ಗಳ ಮೂಲಕವೇ ಮಿಂಚಿದ್ದಾರೆ. ಇನ್ನು ಕೇವಲ ಬಬ್ಲಿ ಪಾತ್ರಗಳಲ್ಲಿ ಅಭಿನಯಿಸಿದ್ದ ಅಪೂರ್ವ ಒಂದು ಜವಾಬ್ದಾರಿಯುತ ಪಾತ್ರ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಳಿದಂತೆ ಪಾತ್ರಧಾರಿಗಳು ಕಥೆಗೆ ಪೂರಕವಾಗಿ ಅಭಿನಯಿಸಿದ್ದಾರೆ. ಶ್ರೀಧರ್‌ ವಿ ಸಂಭ್ರಮ್‌ ಅವರ ಸಂಗೀತ ಕಥೆಗೆ ಸಾಥ್‌ ನೀಡುವಂತಿದ್ದು, ಕುಮಾರ್‌ ಎಂ ತಮ್ಮ ಕ್ಯಾಮಾರ ಮೂಲಕ ಮೈಸೂರಿನ ದರ್ಶನ ಮಾಡಿಸಿದ್ದಾರೆ.

 

– ವಾಣಿ ಭಟ್ಟ

ಟಾಪ್ ನ್ಯೂಸ್

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

MNG-Deeraj

Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್‌ ಮುನಿರಾಜು

Kapu

Navarathiri: ಉಚ್ಚಿಲ ದಸರಾ: ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

krishna bhaire

FIR ದಾಖಲಾದ ಬಿಜೆಪಿಯವರು ರಾಜೀನಾಮೆ ನೀಡಲಿ: ಕೃಷ್ಣ ಭೈರೇಗೌಡ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-55: ಧೀಶಕ್ತಿ, ಬುದ್ಧಿಶಕ್ತಿಯ ವ್ಯತ್ಯಾಸ

Madikeri

Madikeri: ಕುಶಾಲನಗರದಲ್ಲಿ ಕೊಡಲಿಯಿಂದ ಕಡಿದು ಇಬ್ಬರ ಕೊ*ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

anish tejeshwar aram arvind swamy movie

Anish Tejeshwar: ‘ಮುಂದೆ ಹೇಗೋ ಏನೋ..’: ಆರಾಮ್‌ ಅರವಿಂದ ಸ್ವಾಮಿ ಹಾಡು ಹಬ್ಬ

vaibhavi shandilya

Vaibhavi Shandilya: ಮಾರ್ಟಿನ್‌ ಪ್ರೀತಿ ಪಾತ್ರಳು ನಾನು…; ವೈಭವಿ ಕಣ್ತುಂಬ ನಿರೀಕ್ಷೆ

Bhairadevi is my dream project…: Radhika kumaraswamy

Radhika kumaraswamy: ಭೈರಾದೇವಿ ನನ್ನ ಡ್ರೀಮ್‌ ಪ್ರಾಜೆಕ್ಟ್…: ರಾಧಿಕಾ

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

Sandalwood: ಮಿಂಚುಹುಳ, ಗೋಪಿಲೋಲ, ಜನಕ.. ಇಂದು ತೆರೆಗೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

supreme-Court

Court: ರಾಜ್ಯಕ್ಕೆ ಖನಿಜ ತೆರಿಗೆ ಅಧಿಕಾರ: ಪರಿಶೀಲನ ಅರ್ಜಿ ಸುಪ್ರೀಂ ವಜಾ

1-aaaa

Bandipur ಸಫಾರಿ ವೀಕ್ಷಿಸಿದ CJI ಡಿ.ವೈ.ಚಂದ್ರಚೂಡ್‌: ಕಾಡಾನೆಗಳ ದರ್ಶನ

Cheluvaray-swamy

Dasara: ಶ್ರೀರಂಗಪಟ್ಟಣ ದಸರಾಗೆ ಯಾವುದೇ ತಡವಾಗಿಲ್ಲ: ಸಚಿವ ಚಲುವರಾಯಸ್ವಾಮಿ

MNG-Deeraj

Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್‌ ಮುನಿರಾಜು

1-asdd

PDOಗಳ ಅನಿರ್ದಿಷ್ಟಾವಧಿ ಧರಣಿ: ರಾಜ್ಯಾದ್ಯಂತ ಗ್ರಾ.ಪಂ. ಸೇವೆ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.