ಮೆಸ್ಕಾಂ ವ್ಯಾಪ್ತಿಯಲ್ಲಿ ತಗ್ಗಿದ ಬೇಡಿಕೆ: ಅಕಾಲಿಕ ಮಳೆಯಿಂದಾಗಿ ವಿದ್ಯುತ್‌ ಬಳಕೆ ಇಳಿಕೆ !


Team Udayavani, May 10, 2022, 7:00 AM IST

ಮೆಸ್ಕಾಂ ವ್ಯಾಪ್ತಿಯಲ್ಲಿ ತಗ್ಗಿದ ಬೇಡಿಕೆ: ಅಕಾಲಿಕ ಮಳೆಯಿಂದಾಗಿ ವಿದ್ಯುತ್‌ ಬಳಕೆ ಇಳಿಕೆ !

ಮಂಗಳೂರು: ದೇಶದೆಲ್ಲೆಡೆ ವಿದ್ಯುತ್‌ ಅಭಾವದ ಸಂಕಷ್ಟ ಎದುರಾ ಗಿದ್ದರೂ ಸದ್ಯ ಕರಾವಳಿ ಜಿಲ್ಲೆಯ ಮೆಸ್ಕಾಂ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯ ಕಾರಣದಿಂದ ವಿದ್ಯುತ್‌ ಬಳಕೆಯೇ ಇಳಿದಿದೆ !

ಜನವರಿಯಲ್ಲಿ ಪ್ರತೀ ದಿನ ಸರಾಸರಿ 20.83 ಮಿಲಿಯ ಯುನಿಟ್‌ (ಕಳೆದ ವರ್ಷ 18.76 ಮಿ. ಯುನಿಟ್‌) ವಿದ್ಯುತ್‌
ಬಳಕೆಯಾಗಿದ್ದರೆ, ಫೆಬ್ರವರಿಯಲ್ಲಿ 24.11 ಮಿ. ಯುನಿಟ್‌ (21.47 ಮಿ.ಯು.), ಮಾರ್ಚ್‌ನಲ್ಲಿ 24.27 ಯುನಿಟ್‌ (24.10 ಮಿ.ಯು.) ವಿದ್ಯುತ್‌ ಬಳಕೆಯಾಗಿದೆ. ಆದರೆ ಎಪ್ರಿಲ್‌ನಲ್ಲಿ ಮಾತ್ರ ಇಳಿಕೆಯಾಗಿದೆ. ಸರಾಸರಿ 19.98 ಮಿ. ಯುನಿಟ್‌ (ಕಳೆದ ವರ್ಷ 20.86 ಮಿ.ಯು.) ಮಾತ್ರ ಬಳಕೆಯಾಗಿದೆ. ಮೇ ಮೊದಲ ವಾರ ವಿದ್ಯುತ್‌ ಬಳಕೆ ಮತ್ತೆ ಕೊಂಚ ಏರಿದ್ದರೂ ಒಂದೆರಡು ದಿನದಲ್ಲಿ ಸುರಿದ ಮಳೆಯ ಕಾರಣದಿಂದ ಬಳಕೆ ಇಳಿಕೆ ಕಂಡಿದೆ.

ಅಲ್ಲಲ್ಲಿ ಮಳೆ; ಬೇಡಿಕೆಯೂ ಇಳಿಕೆ!
ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಸೇರಿರುವ ಮೆಸ್ಕಾಂ ವ್ಯಾಪ್ತಿಯಲ್ಲಿ ಬೇಸಗೆ ಸಂದರ್ಭ ಕೃಷಿ ಪಂಪ್‌ಸೆಟ್‌ ಬಳಕೆ ಅಧಿಕವಿರುತ್ತದೆ. ಈ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಯಾಗುತ್ತಿರುವ ಕಾರಣದಿಂದ ಪಂಪ್‌ಸೆಟ್‌ ಬಳಕೆ ಕಡಿಮೆಯಾಗಿದೆ. ಪರಿಣಾಮ ವಿದ್ಯುತ್‌ ಬಳಕೆ ಕುಸಿತ ಕಂಡಿದೆ.

ವಿದ್ಯುತ್‌ ಬಳಕೆ ಯಾಕೆ ಹೆಚ್ಚು?
ಕರಾವಳಿಯಾದ್ಯಂತ ಬೇಸಗೆಯಲ್ಲಿ ಕೃಷಿ ಪಂಪ್‌ಸೆಟ್‌ ಬಳಕೆ ಅಧಿಕವಿರುತ್ತದೆ. ಹೀಗಾಗಿ ವಿದ್ಯುತ್‌ ಬೇಡಿಕೆ ಗರಿಷ್ಠ ಮಟ್ಟ ತಲುಪಿತ್ತು. ಜತೆಗೆ ಬೇಸಗೆಯ ತಾಪವೂ ಗರಿಷ್ಠ ಮಟ್ಟದಲ್ಲಿದೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಉಷ್ಣಾಂಶದಲ್ಲಿ ಶೇ. 1ರಿಂದ ಶೇ. 2ರಷ್ಟು ಏರಿಕೆಯಾಗಿದೆ. ಬಿಸಿಲಿನ ಬೇಗೆಯಿಂದ ಪಾರಾಗಲು ಜನರು ತಂಪು ಗಾಳಿ ಹಾಯಿಸುವ ಎ.ಸಿ., ಕೂಲರ್‌, ಫ್ಯಾನ್‌ ಸಹಿತ ವಿದ್ಯುತ್‌ ಉಪಕರಣ ಬಳಕೆ ಏರಿಕೆಯಾಗಿತ್ತು. ಅಕಾಲಿಕ ಮಳೆಯಿಂದ ಗೃಹ ವಿದ್ಯುತ್‌ ಬೇಡಿಕೆಯ ಮೇಲೂ ಕೊಂಚ ಪರಿಣಾಮ ಬೀರಿದಂತಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 24.29 ಲಕ್ಷ ಬಳಕೆದಾರರಿದ್ದು, ಗೃಹಬಳಕೆಯವರು 17.70 ಲಕ್ಷ, ಕೃಷಿ ಪಂಪ್‌ಸೆಟ್‌ ಬಳಕೆದಾರರು 3.45 ಲಕ್ಷ, ವಾಣಿಜ್ಯ ಬಳಕೆದಾರರು 2.19 ಲಕ್ಷ, ಕೈಗಾರಿಕೆ ಬಳಕೆದಾರರು 33 ಸಾವಿರ ಇದ್ದಾರೆ.

ಅಘೋಷಿತ ಲೋಡ್‌ ಶೆಡ್ಡಿಂಗ್‌ !
ದೈನಂದಿನ ವಿದ್ಯುತ್‌ ಬೇಡಿಕೆ ಪ್ರಮಾಣ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ ಕಾರಣದಿಂದ ಪರಿಸ್ಥಿತಿಯ ಒತ್ತಡ ನಿಭಾಯಿಸಲು ತಾಂತ್ರಿಕ ನೆಪವೊಡ್ಡಿ ವಿದ್ಯುತ್‌ ಕಡಿತಗೊಳಿಸುವ ತಂತ್ರವನ್ನು ಮೆಸ್ಕಾಂ ಅನುಸರಿಸಿತ್ತು. ಅಘೋಷಿತ ಲೋಡ್‌ಶೆಡ್ಡಿಂಗ್‌ ಜಾರಿ ಕೆಲವೆಡೆ ಜಾರಿಯಲ್ಲಿದೆ. ಈ ಮಧ್ಯೆ ಮಳೆ, ಗಾಳೆ, ಸಿಡಿಲಿನಿಂದ ಗ್ರಾಮಾಂತರ ಭಾಗದಲ್ಲಿ ವಿದ್ಯುತ್‌ ಕೈಕೊಟ್ಟರೆ ಇಡೀ ದಿನ ಮತ್ತೆ ಬರುವುದೇ ಅನುಮಾನ ಎಂಬಂತಾಗಿದೆ!

ಬಿಸಿಲಿನ ಬೇಗೆ ಅಧಿಕ, ಕೃಷಿ ಪಂಪ್‌ಸೆಟ್‌ ಮತ್ತು ಕೈಗಾರಿಕಾ ವಲಯದಲ್ಲಿ ಉತ್ಪಾದನೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್‌ ಬಳಕೆಯಲ್ಲಿ ಏರಿಕೆ ಆಗಿತ್ತು. ರಾಜ್ಯ ಮಟ್ಟದಲ್ಲಿ ಕೂಡ ವಿದ್ಯುತ್‌ ಬಳಕೆ ಪ್ರಮಾಣ ಏರುಗತಿಯಲ್ಲಿತ್ತು. ಆದರೆ, ಅಕಾಲಿಕ ಮಳೆ ಕಾರಣದಿಂದ ವಿದ್ಯುತ್‌ ಬಳಕೆಯಲ್ಲಿ ಕಡಿಮೆಯಾಗುತ್ತಿದೆ.
– ಪ್ರಶಾಂತ್‌ ಕುಮಾರ್‌ ಮಿಶ್ರಾ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ಬಳಕೆ ವಿದ್ಯುತ್‌ ಪ್ರಮಾಣ (ಮಿಲಿಯ ಯೂನಿಟ್‌ಗಳಲ್ಲಿ )
ಜನವರಿ: 604.02
ಫೆಬ್ರವರಿ: 675.21
ಮಾರ್ಚ್‌: 752.35
ಎಪ್ರಿಲ್‌: 586.23
ಕಳೆದ ವರ್ಷದ ವಿದ್ಯುತ್‌ ಬಳಕೆ (ಮಿಲಿಯ ಯೂನಿಟ್‌ಗಳಲ್ಲಿ )
ಜನವರಿ: 581.46
ಫೆಬ್ರವರಿ: 601.11
ಮಾರ್ಚ್‌: 746.98
ಎಪ್ರಿಲ್‌: 625.85
ವಿದ್ಯುತ್‌ ಬಳಕೆಯ ಪ್ರದೇಶವಾರು ವಿವರ
ಗ್ರಾಮಾಂತರ: ಶೇ. 38
ನಗರ: ಶೇ. 24
ಕೈಗಾರಿಕೆ: ಶೇ. 5
ನೀರಾವರಿ ಪಂಪ್‌ಸೆಟ್‌: ಶೇ. 22
ಕುಡಿಯುವ ನೀರು: ಶೇ. 3
ನಿರಂತರ ಜ್ಯೋತಿ: ಶೇ. 8

– ದಿನೇಶ್‌ ಇರಾ

 

ಟಾಪ್ ನ್ಯೂಸ್

supreme-Court

Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್‌ ಅಪರಾಧವಲ್ಲ: ಸುಪ್ರೀಂಕೋರ್ಟ್‌

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

supreme-Court

Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್‌ ಅಪರಾಧವಲ್ಲ: ಸುಪ್ರೀಂಕೋರ್ಟ್‌

City

Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್‌ ಸಿಟಿ ನಿರ್ಮಾಣ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.