‘ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಚಿತ್ರ ವಿಮರ್ಶೆ: ಮೊಬೈಲ್‌ ಕಂಟಕ ಪೋಷಕರಿಗೆ ಸಂಕಟ!


Team Udayavani, May 15, 2022, 9:55 AM IST

selfie mummy google daddy

ಈಗಿನ ಕಾಲದ ಮಕ್ಕಳು ಎಷ್ಟು ಚೂಟಿ ಎಂಬುದನ್ನು ತಿಳಿದುಕೊಳ್ಳುವ ತವಕವಿದ್ದರೆ ಅವರ ಕೈಗೆ ಮೊಬೈಲ್‌ ಕೊಟ್ಟು ನೋಡಬೇಕು. ದೊಡ್ಡವರನ್ನೂ ಮೀರಿಸುವ ಮಟ್ಟಿಗೆ ಮೊಬೈಲ್‌ ಬಳಕೆಯಲ್ಲಿ ಪರಿಣಿತರಾಗಿರುತ್ತಾರೆ. ಆದರೆ ಅದರಿಂದಾಗುವ ಲಾಭವೇನು… ನಷ್ಟವೇನು..? ಮೊಬೈಲ್‌ ಬಳಕೆ ಮಕ್ಕಳ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ..? ಅದರಿಂದಾಗುವ ಅನಾಹುತಗಳೇನು… ಇತ್ಯಾದಿ ವಿಷಯಗಳ ಮೇಲೆ “ಸೆಲ್ಫಿ ಮಮ್ಮಿ ಗೂಗಲ್‌ ಡ್ಯಾಡಿ’ ಸಿನಿಮಾ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮಧುಚಂದ್ರ.

ಪೋಷಕರಿಗೇ ಚಳ್ಳೆ ಹಣ್ಣು ತಿನ್ನಿಸುವಂಥ ಮಕ್ಕಳು. ಅವರ ಕೈಗೆ ಸಿಗದಂತೆ ದೂರವಿಟ್ಟರೂ ಅಪ್ಪ-ಅಮ್ಮನನ್ನೇ ಯಾಮಾರಿಸಿ ಮೊಬೈಲ್‌ ಎಗರಿಸುವ ಚಿಣ್ಣರು. ಅತ್ತ ಕೆಲಸ, ಇತ್ತ ಮಕ್ಕಳ ಪೇಚಾಟದಿಂದ ಬೇಸತ್ತ ಪೋಷಕ ವರ್ಗ… ಒಂದಾ.., ಎರಡಾ..?

ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಅದು ಎಲ್ಲದಕ್ಕೂ ಅನ್ವಯ. ಇಲ್ಲಿ ಮಕ್ಕಳಿಗೆ ಮೊಬೈಲ್‌ ಮಾರಕವಾಗಿದೆ. ಅದರ ಅಮಲು ಅವರ ತಲೆಯೊಳಗೆ ಎಷ್ಟರಮಟ್ಟಿಗೆ ಏರಿದೆ ಎಂಬುದಕ್ಕೆ ಹಲವಾರು ಸನ್ನಿವೇಶಗಳು ಬಂದು ಹೋಗುತ್ತವೆ. ಕೊನೆಗೆ ಅದರಿಂದ ಎದುರಾಗುವ ಸಂಕಟಗಳೇನು ಎಂಬುದನ್ನು, ಪಾರಾಗಲು ಇರುವ ಮಾರ್ಗವೇನು ಎಂಬುದರತ್ತ ಒಂದಷ್ಟು ಕಥೆ, ಉಪಕಥೆಗಳ ಮುಖೇನ ನೋಡುಗರಿಗೆ ದಾಟಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ಇದನ್ನೂ ಓದಿ:ಯುವತಿಗೆ ಅಶ್ಲೀಲ ಮೆಸೇಜ್; ಯುವಕನಿಗೆ ಥಳಿಸಿ ಊರಲ್ಲಿ ಅರೆಬೆತ್ತಲೆ ಮೆರವಣಿಗೆ!

ಸೃಜನ್‌ ಲೋಕೇಶ್‌ ಹಾಗೂ ಮೇಘನಾ ರಾಜ್‌ ಸಾಮಾನ್ಯ ಪೋಷಕರ ಪ್ರತಿನಿಧಿಯಂತೆ ಪಾತ್ರವೇ ತಾವಾಗಿದ್ದಾರೆ. ಮಕ್ಕಳೂ ಕೂಡ ತಾವು ಯಾರಿಗೇನು ಕಡಿಮೆಯಿಲ್ಲ ಎಂಬಂತೆ ಪೈಪೋಟಿಗೆ ಬಿದ್ದು ಅಭಿನಯಿಸಿದ್ದಾರೆ. ಸಿನಿಮಾ ಕಥಾಹಂದರ ಚೆನ್ನಾಗಿದ್ದರೂ, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸುವ ಸಾಧ್ಯತೆಯನ್ನು ಚಿತ್ರತಂಡ ಬಳಸಿಕೊಂಡಂತಿಲ್ಲ.

ಚಿತ್ರದ ಕೆಲವು ಲೋಪಗಳನ್ನು ಗುರುತಿಸುವ ಮೊದಲೇ ಕಾಮಿಡಿ ಹಾಗೂ ಸೆಂಟಿಮೆಂಟ್‌ ದೃಶ್ಯಗಳು ಅವುಗಳನ್ನು ಮರೆಮಾಚುವಂತೆ ಬಂದು ಹೋಗುತ್ತವೆ. ತಾಂತ್ರಿಕತೆಯ ವಿಚಾರಕ್ಕೂ ಇದೇ ಮಾತು ಅನ್ವಯ. ಒಟ್ಟಾರೆ ಈಗಿನ ಪೀಳಿಗೆಯ ಮಕ್ಕಳು ತಂತ್ರಜ್ಞಾನದ ದಾಸರಾಗುವುದನ್ನು ತಪ್ಪಿಸಲು ಈ ಸಿನಿಮಾದಲ್ಲಿ ಕೆಲವು ಟಿಪ್ಸ್‌ ಸಿಗುವುದಂತೂ ದಿಟ..!

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sidlingu 2 Movie Review

Sidlingu 2 Review ಫ್ಯಾಮಿಲಿ ಡ್ರಾಮಾದಲ್ಲಿ ವಿಜಯ ಪ್ರಸಾದ

Raju James Bond Review

Raju James Bond Review: ಕಾಸಿಗಾಗಿ ಜೇಮ್ಸ್‌ ಜೂಟಾಟ

Bhuvanam Gaganam Review

Bhuvanam Gaganam Review: ಪ್ರೇಮದ ಹಾದಿಯಲ್ಲಿ ಸುಮ ಘಮ

Mr.Rani movie review: ನಾನು ಅವಳಲ್ಲ ಅವನು!

Mr.Rani movie review: ನಾನು ಅವಳಲ್ಲ ಅವನು!

Gajarama Movie Review

Gajarama Movie Review: ಪ್ರೀತಿ ಮಧುರ ತ್ಯಾಗ ಅಮರ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.