ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಬ್ಯಾಡ್ಮಿಂಟನ್‌ ಸಾಧಕರ ಜತೆ ಪ್ರಧಾನಿ ಸಂವಾದ

Team Udayavani, May 22, 2022, 11:12 PM IST

ಸಣ್ಣ ಸಾಧನೆಯಲ್ಲ, ಇದನ್ನು ಮುಂದುವರಿಸಿ: ಮೋದಿ

ಹೊಸದಿಲ್ಲಿ: ಥಾಮಸ್‌ ಕಪ್‌ ಗೆದ್ದು ಐತಿಹಾಸಿಕ ಸಾಧನೆಗೈದ ಭಾರತೀಯ ಬ್ಯಾಡ್ಮಿಂಟನ್‌ ತಂಡದ ಸದಸ್ಯರಿಗೆ ತನ್ನ ಅಧಿಕೃತ ನಿವಾಸದಲ್ಲಿ ಆತಿಥ್ಯ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು “ಇದೊಂದು ಸಣ್ಣ ಸಾಧನೆಯಲ್ಲ. ಇದನ್ನು ಮುಂದುವರಿಸಿಕೊಂಡು ಬನ್ನಿ’ ಎಂದು ಹಾರೈಸಿದರು.

ಥಾಮಸ್‌ ಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ತತ್‌ಕ್ಷಣ ಭಾರತೀಯ ತಂಡದ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದ ಮೋದಿ ಅವರು ಇದೀಗ ತಂಡ ತವರಿಗೆ ಬಂದ ಕೂಡಲೇ ತನ್ನ ನಿವಾಸಕ್ಕೆ ಕರೆದರಲ್ಲದà ಎಲ್ಲರೊಂದಿಗೆ ವೈಯಕ್ತಿಕವಾಗಿ ಮಾತನಾಡಿ ಸಂವಾದ ನಡೆಸಿದರು. ಈ ವೇಳೆ ಉಬೆರ್‌ ಕಪ್‌ನಲ್ಲಿ ಆಡಿದ್ದ ವನಿತಾ ಆಟಗಾರ್ತಿಯರೂ ಇದ್ದರು.

ಎಲ್ಲರಿಗೂ ಅಭಿನಂದನೆ
“ದೇಶದ ಪರವಾಗಿ ತಂಡದ ಎಲ್ಲ ಸದಸ್ಯರನ್ನು ನಾನು ಅಭಿನಂದಿಸುತ್ತೇನೆ. ಇದೊಂದು ಸಣ್ಣ ಸಾಧನೆಯಲ್ಲ. ನೀವು ಇದನ್ನು ಸಾಧಿಸಿದ್ದೀರಿ. ಒಂದು ಸಮಯದಲ್ಲಿ ಇಂತಹ ಕೂಟಗಳಲ್ಲಿ ನಾವು ಬಹಳಷ್ಟು ಹಿಂದೆ ಇದ್ದೆವು. ಇದು ಈಗಿನ ಜನರಿಗೆ ಗೊತ್ತಿಲ್ಲ’ ಎಂದು ಮೋದಿ ಹೇಳಿದರು. ವಿಜಯಿ ಆಟಗಾರರೊಂದಿಗೆ ಮೋದಿ ಸಂವಾದ ನಡೆಸಿದರು.

ಈ ವೇಳೆ ಬಲಿಷ್ಠ ಇಂಡೋನೇಷ್ಯಾವನ್ನು ಸೋಲಿಸಿ ಥಾಮಸ್‌ ಕಪ್‌ ಗೆದ್ದ ಸಾಧನೆಯ ನೆನಪುಗಳನ್ನು ಅವರು ಮೆಲುಕು ಹಾಕಿದರು. ಈ ಸ್ಪರ್ಧೆಯಲ್ಲಿ ದಶಕಗಳ ಬಳಿಕ ನಮ್ಮ ಧ್ವಜವನ್ನು ಹಾರಿಸಲು ಭಾರತಕ್ಕೆ ಸಾಧ್ಯವಾಯಿತು. ಇದೊಂದು ಚಿಕ್ಕ ಸಾಧನೆಯಲ್ಲ ಎಂದವರು ಸ್ಪಷ್ಟಪಡಿಸಿದರು.

ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಹಿಂದೆ ಇಂತಹ ಕೂಟಗಳ ಬಗ್ಗೆ ಜನರು ಕಾಳಜಿ ವಹಿಸಿಲ್ಲ. ಥಾಮಸ್‌ ಕಪ್‌ ಗೆಲುವಿನಿಂದ ದೇಶವು ಇದೀಗ ಬ್ಯಾಡ್ಮಿಂಟನ್‌ ಕ್ರೀಡೆ ಮತ್ತು ತಂಡದ ಆಟಗಾರರನ್ನು ಗಮನಿಸುವಂತಾಗಿದೆ ಎಂದರು.

ಹೌದು, ನಮ್ಮಿಂದ ಇದು ಸಾಧ್ಯವಿದೆ ಎಂಬ ಮನೋಭಾವವು ಇಂದು ದೇಶದಲ್ಲಿ ಹೊಸ ಶಕ್ತಿಯಾಗಿ ಮೂಡಿಬಂದಿದೆ. ಸರಕಾರವು ನಮ್ಮ ಆಟಗಾರರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಮೋದಿ ತಿಳಿಸಿದರು.

ಥಾಮಸ್‌ ಕಪ್‌ನಲ್ಲಿ, ಅದರಲ್ಲಿಯೂ ಫೈನಲ್‌ ಹೋರಾಟದಲ್ಲಿ ಭಾರತದ ಸವಾಲಿನ ನೇತೃತ್ವ ವಹಿಸಿ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡು ಅದ್ಭುತ ನಿರ್ವಹಣೆ ನೀಡಿದ 29ರ ಹರೆಯದ ಹಿರಿಯ ಆಟಗಾರ ಕಿದಂಬಿ ಶ್ರೀಕಾಂತ್‌ ಅವರನ್ನು ವಿಶೇಷವಾಗಿ ಅಭಿನಂದಿಸಿದರು.

“ಪ್ರಧಾನಿಯವರು ಯಾವಾಗಲೂ ನಮ್ಮ ಆಟಗಾರರು ಮತ್ತು ಕ್ರೀಡೆಯ ಬಗ್ಗೆ ಚಿಂತಿಸುತ್ತಾರೆ ಹಾಗೂ ಅವರ ಅಲೋಚನೆಗಳು ಆಟಗಾರರೊಂದಿಗೆ ಸಂಪರ್ಕ ಹೊಂದಿದೆ ಎಂದು ತಂಡದ ಮುಖ್ಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಹೇಳಿದ್ದಾರೆ. ನಾನು ಆಟಗಾರನಾಗಿದ್ದ ಸಂದರ್ಭ ಹಲವು ಪದಕಗಳನ್ನು ಗೆದ್ದಿದ್ದೆ. ಆದರೆ ಒಮ್ಮೆಯೂ ನಮ್ಮ ಪ್ರಧಾನಿಯವರು ನನ್ನನ್ನು ಕರೆಸಿಕೊಂಡಿಲ್ಲ’ ಎಂದು ಡಬಲ್ಸ್‌ ಆಟಗಾರರ ಕೋಚ್‌ ಮಥಿಯಾಸ್‌ ಬೋಯ್‌ ನೆನಪಿಸಿಕೊಂಡರು.

ಸ್ಟಾರ್‌ ಶಟ್ಲರ್‌ ಲಕ್ಷ್ಯ ಸೇನ್‌ ಸಿಹಿತಿಂಡಿಯ ಪ್ಯಾಕೆಟ್‌ ಒಂದನ್ನು ಪ್ರಧಾನಿಯವರಿಗೆ ಉಡು ಗೊರೆಯಾಗಿ ನೀಡಿದರು. ನೀವು ನಮ್ಮನ್ನು ಭೇಟಿಯಾದಾಗ ಅಥವಾ ನಮ್ಮೊಂದಿಗೆ ಸಂವಹನ ನಡೆಸಿದಗ ನಾವು ತುಂಬಾ ಪ್ರೇರಿತರಾಗಿದ್ದೇವೆ. ದೇಶಕ್ಕಾಗಿ ನಾವು ಪದಕ ಗೆಲ್ಲಲು ಯಾವಾಗಲೂ ಶಕ್ತಿಮೀರಿ ಪ್ರಯತ್ನಿಸಲಿದ್ದೇವೆ ಎಂದ ಲಕ್ಷ್ಯ ಸೇನ್‌, ಪ್ರಧಾನಿ ಯವರು ಆಟಗಾರರ ಚಿಕ್ಕ ವಿಷಯಗಳನ್ನು ಕೂಡ ಮರೆಯದೆ ನೆನಪಿಸಿಕೊಳ್ಳುವುದು ಅತ್ಯಂತ ಖುಷಿಯ ವಿಷಯ ಎಂದರು.

ಹಲವು ಶ್ರೇಷ್ಠ ಆಟಗಾರರನ್ನು ಹುಟ್ಟು ಹಾಕುತ್ತಿರುತ್ತಿರುವುದರಿಂದ ಹರ್ಯಾಣದ ಮಣ್ಣಿನಲ್ಲಿ ಏನಿದೆ ವಿಶೇಷ ಎಂದು ಹರ್ಯಾಣ ಮೂಲದ ಶಟ್ಲರ್‌ ಉನ್ನತಿ ಹೂಡಾ ಅವರಲ್ಲಿ ಮೋದಿ ಪ್ರಶ್ನಿಸಿದರು.

ಇದಕ್ಕೆ ಉನ್ನತಿ ನಕ್ಕರು. “ಸರ್‌, ನನ್ನನ್ನು ಪ್ರೇರೇಪಿಸುವ ಅಂಶವೆಂದರೆ, ನೀವು ಪದಕ ವಿಜೇತರು ಮತ್ತು ಪದಕ ಗೆಲ್ಲದವರ ನಡುವೆ ಭೇದಭಾವ ಮಾಡದಿರುವುದು…’ ಎಂದರು.

ಮಾತಾಡುವ ಸೌಭಾಗ್ಯ…
ವಿಶ್ವದ ಬೇರೆ ಯಾವುದೇ ಆ್ಯತ್ಲೀಟ್‌ಗಳಿಗೆ ಈ ರೀತಿಯ ಪ್ರೋತ್ಸಾಹ, ಬೆಂಬಲ ಸಿಗಲು ಕಷ್ಟ ಸರ್‌ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಪ್ರಶಸ್ತಿ ಗೆದ್ದ ತತ್‌ಕ್ಷಣ ನಿಮ್ಮೊಂದಿಗೆ ಮಾತನಾಡುವ ಸೌಭಾಗ್ಯ ನಮಗೆ ಸಿಕ್ಕಿದೆ ಮೊದಲು ನಿಮಗೆ ಅಭಿನಂದನೆಗಳು ಸರ್‌. ಇಷ್ಟು ಮಾತ್ರವಲ್ಲದೇ ನಮ್ಮ ಪ್ರಧಾನಿಯವರ ಬೆಂಬಲ ನಮಗಿದೆ ಎಂದು ಎಲ್ಲ ಆಟಗಾರರು ಹೇಳುತ್ತಿದ್ದಾರೆ ಎಂದು ಶ್ರೀಕಾಂತ್‌ ಹೇಳಿದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.