![Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ](https://www.udayavani.com/wp-content/uploads/2024/07/chirate-415x229.jpg)
ಸ್ಟಾಲಿನ್ ವಿರುದ್ಧ ಅಣ್ಣಾಮಲೈ ಗುಡುಗು; ಮೋದಿ ಭೇಟಿ ವೇಳೆ ಸಿಎಂ ನಡವಳಿಕೆ ಕುರಿತು ಆಕ್ರೋಶ
Team Udayavani, May 27, 2022, 7:17 PM IST
![ಸ್ಟಾಲಿನ್ ವಿರುದ್ಧ ಅಣ್ಣಾಮಲೈ ಗುಡುಗು; ಮೋದಿ ಭೇಟಿ ವೇಳೆ ಸಿಎಂ ನಡವಳಿಕೆ ಕುರಿತು ಆಕ್ರೋಶ](https://www.udayavani.com/wp-content/uploads/2022/05/Annamalai-1-620x349.jpg)
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮಿಳುನಾಡು ಭೇಟಿ ವೇಳೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ “ರಾಜಕೀಯ ನಾಟಕ’ವಾಡಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕಿಡಿಕಾರಿದ್ದಾರೆ.
“ವೇದಿಕೆಯಲ್ಲಿ ಸ್ಟಾಲಿನ್ ಆಡಿರುವ ಮಾತುಗಳು ಹೇಗೆ ರಾಜಕೀಯವಾಗಿ ನಾಟಕವಾಡಬಹುದು ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆ. ಕತ್ಛಥೀವು ದ್ವೀಪವನ್ನು ಶ್ರೀಲಂಕಾಗೆ ಉಡುಗೊರೆಯಾಗಿ ನೀಡಿದ್ದು ಇಂದಿರಾಗಾಂಧಿ ಮತ್ತು ಡಿಎಂಕೆ ನಾಯಕ ಕರುಣಾನಿಧಿ. 1976ರಲ್ಲಿ ಒಪ್ಪಂದ ಉಲ್ಲಂಘಿಸಿ ಅದನ್ನು ಸಂಪೂರ್ಣವಾಗಿ ಲಂಕಾಗೆ ಕೊಟ್ಟುಬಿಟ್ಟರು. ಈಗ ಆ ದ್ವೀಪವನ್ನು ಮರಳಿ ಕೊಡಿಸಿ ಎಂದು ಮೋದಿಯವರನ್ನು ಕೇಳಲು ಸಿಎಂ ಸ್ಟಾಲಿನ್ಗೆ ಎಷ್ಟು ಧೈರ್ಯವಿರಬೇಕು? ನೀವು ನಮಗೆ ಪಾಠ ಕಲಿಸಬೇಕಾಗಿಲ್ಲ. ಕತ್ಛಥೀವುವನ್ನು ಹೇಗೆ ಮರಳಿ ಪಡೆಯಬೇಕು ಎಂಬುದು ನಮಗೆ ಗೊತ್ತು.
ಸ್ಟಾಲಿನ್ ಕುಟುಂಬವೊಂದನ್ನು ಬಿಟ್ಟು ಪ್ರತಿಯೊಬ್ಬ ತಮಿಳನಿಗೂ ಈ ದ್ವೀಪವನ್ನು ವಾಪಸ್ ಪಡೆಯುವ ಬಗ್ಗೆ ಮಾತನಾಡುವ ಅಧಿಕಾರವಿದೆ’ ಎಂದು ಅಣ್ಣಾಮಲೈ ಆಕ್ರೋಶಭರಿತರಾಗಿ ನುಡಿದಿದ್ದಾರೆ.
ಅಷ್ಟೇ ಅಲ್ಲ, ಜಿಎಸ್ಟಿ ಪ್ರಕ್ರಿಯೆಯ ಬಗ್ಗೆ ಮಾಹಿತಿಯೇ ಇಲ್ಲದ ಸ್ಟಾಲಿನ್ ಅವರು, ಜಿಎಸ್ಟಿ ಬಗ್ಗೆ ಮಾತಾಡುತ್ತಾರೆ. ಆ ಮೂಲಕ ತಮಿಳುನಾಡಿನ ಜನರ ಮರ್ಯಾದೆ ತೆಗೆಯುತ್ತಾರೆ. ಜಿಎಸ್ಟಿ ಬಾಕಿಯನ್ನು ಪಾವತಿಸಬೇಕಾದದ್ದು ಜಿಎಸ್ಟಿ ಮಂಡಳಿಯೇ ಹೊರತು ವಿತ್ತ ಸಚಿವರಲ್ಲ. ಇದಕ್ಕೂ ಸಚಿವರಿಗೂ ಸಂಬಂಧವೇ ಇಲ್ಲ ಎಂದೂ ಅಣ್ಣಾಮಲೈ ಹೇಳಿದ್ದಾರೆ.
ಜತೆಗೆ, ಸ್ಟಾಲಿನ್ ಅವರ ನಡವಳಿಕೆಯು ತಮಿಳುನಾಡಿವ ರಾಜಕೀಯ ಇತಿಹಾಸದಲ್ಲೇ ಕಪ್ಪುಚುಕ್ಕೆ ಎಂದೂ ಬಣ್ಣಿಸಿದ್ದಾರೆ.
ಟಾಪ್ ನ್ಯೂಸ್
![Devadurga; ಬೆಳ್ಳಂಬೆಳಗ್ಗೆ ಮೂವರ ಮೇಲೆ ಚಿರತೆ ದಾಳಿ](https://www.udayavani.com/wp-content/uploads/2024/07/chirate-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![rahul gandhi](https://www.udayavani.com/wp-content/uploads/2024/07/rahul-8-150x83.jpg)
LK Advani ಆರಂಭಿಸಿದ ಚಳುವಳಿಯನ್ನು ಅಯೋಧ್ಯೆಯಲ್ಲಿಯೇ ಸೋಲಿಸಿದ್ದೇವೆ..: ರಾಹುಲ್ ಗಾಂಧಿ
![terror attack on Army camp in Jammu and Kashmir’s Rajouri](https://www.udayavani.com/wp-content/uploads/2024/07/rajuori-150x83.jpg)
Rajouri; ಸೇನಾ ಶಿಬಿರದ ಮೇಲೆ ಉಗ್ರರ ದಾಳಿ; ಗಾಯಗೊಂಡ ಓರ್ವ ಸೈನಿಕ
![Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್!](https://www.udayavani.com/wp-content/uploads/2024/07/himachala-150x91.jpg)
Heavy Rain: ಹಿಮಾಚಲದಲ್ಲಿ ಭಾರೀ ಮಳೆ: 150 ರಸ್ತೆ ಬಂದ್!
![NEET-UG Counselling: ನೀಟ್-ಯುಜಿ ಕೌನ್ಸೆಲಿಂಗ್ ಈ ಮಾಸಾಂತ್ಯಕ್ಕೆ ಆರಂಭ?](https://www.udayavani.com/wp-content/uploads/2024/07/neet-5-150x83.jpg)
NEET-UG Counselling: ನೀಟ್-ಯುಜಿ ಕೌನ್ಸೆಲಿಂಗ್ ಈ ಮಾಸಾಂತ್ಯಕ್ಕೆ ಆರಂಭ?
![Justin Bieber: ಅಂಬಾನಿ ಪುತ್ರನ “ಸಂಗೀತ್’ನಲ್ಲಿ ಮನಗೆದ್ದ ಜಸ್ಟೀನ್ ಕಾರ್ಯಕ್ರಮ](https://www.udayavani.com/wp-content/uploads/2024/07/ambani-1-150x90.jpg)
Justin Bieber: ಅಂಬಾನಿ ಪುತ್ರನ “ಸಂಗೀತ್’ನಲ್ಲಿ ಮನಗೆದ್ದ ಜಸ್ಟೀನ್ ಕಾರ್ಯಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.