![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, May 28, 2022, 2:45 PM IST
ಮುಂಬಯಿ : ಸದಾ ಒಂದಿಲ್ಲೊಂದು ವಿಚಾರಗಳಿಗೆ ಸುದ್ದಿಯಾಗುತ್ತಲೇ ಇರುವ ನಟಿ ಕಂಗನಾ ರಣಾವತ್ ಅಭಿನಯದ ‘ಧಾಕಡ್’ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿದ್ದು, 8 ದಿನಗಳಲ್ಲಿ ಕೇವಲ 4,420 ರೂ. ಮಾತ್ರ ಗಳಿಸಿದೆ ಎಂಬ ಲೆಕ್ಕಾಚಾರಗಳು ಲಭ್ಯವಾಗಿದೆ.
ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಚಿತ್ರ ಬಿಡುಗಡೆಯಾದ ಎಂಟನೇ ದಿನದಲ್ಲಿ ಮತ್ತು ದೇಶಾದ್ಯಂತ ಕೇವಲ 20 ಟಿಕೆಟ್ಗಳನ್ನು ಮಾತ್ರ ಮಾರಾಟ ಮಾಡಲು ಸಾಧ್ಯವಾಗಿ 4,420 ರೂ.ಮಾತ್ರ ಗಳಿಕೆ ಕಂಡಿದೆ.
ರಜನೀಶ್ ಘಾಯ್ ನಿರ್ದೇಶಿಸಿದ, ‘ಧಾಕಡ್’ನಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮತ್ತು ಶಾಶ್ವತ ಚಟರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಚಿತ್ರದ ಕುರಿತು ಕಂಗನಾ ಭರ್ಜರಿ ಪ್ರಚಾರವನ್ನೂ ಕೈಗೊಂಡಿದ್ದರು. ಆದರೆ ಚಿತ್ರ ಪ್ರೇಮಿಗಳು ಚಿತ್ರ ಮಂದಿರದತ್ತ ಹೆಜ್ಜೆ ಹಾಕಲು ಯಾವುದೇ ಆಸಕ್ತಿ ತೋರಿಲ್ಲ.
ಸ್ಪೈ-ಥ್ರಿಲ್ಲರ್ ಚಿತ್ರ ದೇಶದಾದ್ಯಂತ 2200 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುವಲ್ಲಿ ವಿಫಲವಾಗಿದೆ. ಬೇಹುಗಾರಿಕೆಯ ಥ್ರಿಲ್ಲರ್ ಎಂದು ಶ್ಲಾಘಿಸಲ್ಪಟ್ಟ ‘ಧಾಕಡ್’ ಚಿತ್ರದ ಕಥೆಯು ಅಪರಾಧಿಗಳನ್ನು ನಿರ್ಮೂಲನೆ ಮಾಡುವ ರಹಸ್ಯ ಸೇವಾ ಸಂಸ್ಥೆಯಾದ ITF ಗಾಗಿ ಕೆಲಸ ಮಾಡುವ ಭಾರತೀಯ ಏಜೆಂಟ್ ಅಗ್ನಿ (ಕಂಗನಾ ) ಸುತ್ತ ಸುತ್ತುತ್ತದೆ.
70 ಕೋಟಿ ರೂ. ನಷ್ಟದ ನಂತರ OTT ಹಕ್ಕುಗಳನ್ನು ಖರೀದಿಸಲು ಯಾರೂ ಆಸಕ್ತಿ ಹೊಂದಿಲ್ಲ. ‘ಬೃಹತ್ ದುರಂತ’ ಎಂದು ಇಂಡಿಯನ್ ಬಾಕ್ಸ್ ಆಫೀಸ್ ಟ್ವೀಟ್ ಮಾಡಿದೆ.
‘ಧಾಕಡ್’ ಕಾರ್ತಿಕ್ ಆರ್ಯನ್ ಅವರ ‘ಭೂಲ್ ಭುಲೈಯಾ 2’ಚಿತ್ರದ ಜತೆಗೆ ಟಿಕೆಟ್ ಕೌಂಟರ್ಗಳಲ್ಲಿ ಘರ್ಷಣೆಗೆ ಸಿಲುಕಿತು ಎಂದು ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ವಿಶ್ಲೇಷಿಸಿದ್ದಾರೆ.
ಕಂಗನಾ ಅಭಿನಯದ ‘ತಲೈವಿ’ ಚಿತ್ರ ಭಾರಿ ಸೋಲು ಕಂಡಿತ್ತು, ಅದಕ್ಕೂ ಮುಂಚೆ ‘ಮಣಿಕರ್ಣಿಕಾ’ ಹರತು ಪಡಿಸಿ ಸಾಲು ಸಾಲು ಚಿತ್ರಗಳು ಸೋಲು ಕಂಡಿದ್ದವು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.